ಸುದ್ದಿಮೂಲ ವಾರ್ತೆ ರಾಯಚೂರು, ಜ.13:
ರಾಯಚೂರು ಜಿಲ್ಲೆಯಲ್ಲಿ ಜನವರಿ-2026ರ ಮಾಹೆಯಲ್ಲಿ ಜರುಗುವ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ 2026ರ ಕಾರ್ಯಕ್ರಮದಲ್ಲಿ ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗಿದೆ.
ಜನವರಿ 25ರ ಬೆಳಿಗ್ಗೆೆ 6 ಗಂಟೆಗೆ ಮ್ಯಾಾರಥಾನ್ ಓಟ ಹಮ್ಮಿಿಕೊಳ್ಳಲಾಗಿದ್ದು, ಓಟವು ನಗರದ ಜಿಲ್ಲಾ ಕ್ರೀೆಡಾಂಗಣದಿಂದ ಆರ್.ಟಿ.ಓ ಸರ್ಕಲ್, ಮಹಾವೀರ್ ಸರ್ಕಲ್ ಮಾರ್ಗವಾಗಿ ಜಿಲ್ಲಾ ಕ್ರೀಡಾಂಗಣಕ್ಕೆೆ ಬಂದು ಸೇರಲಿದೆ. ಪ್ರಥಮ ಬಹುಮಾನ 15 ಸಾವಿರ, ದ್ವಿಿತೀಯ ಬಹುಮಾನ 10 ಸಾವಿರ ಹಾಗೂ ತೃತೀಯ ಬಹುಮಾನ 5ಸಾವಿರ ರೂ.ಗಳನ್ನು ನೀಡಲಾಗುವುದು. ಆಸಕ್ತರು ಈ ಸ್ಪರ್ಧೆಯ ನೋಡಲ್ ಅಧಿಕಾರಿಗಳಾದ ಯುವಜನಾ ಸೇವಾ ಮತ್ತು ಕ್ರೀೆಡಾ ಇಲಾಖೆಯ ಚಂದ್ರಶೇಖರ ಹೊಸೂರು ಅವರ ಮೊಬೈಲ್ ಸಂಖ್ಯೆೆ: 9886551244 ಅಥವಾ ಅಥ್ಲೆೆಟಿಕ್ ಅಸೋಸಿಯೇಷನ್ ಕಾರ್ಯದರ್ಶಿ ತಿಮ್ಮಾಾರೆಡ್ಡಿಿ ಅವರ ಮೊಬೈಲ್ ಸಂಖ್ಯೆೆ: 9844484481ಗೆ ಸಂಪರ್ಕಿಸಿ ಹೆಸರು ನೋಂದಾಯಿಸಬಹುದಾಗಿದೆ.
ಈ ಕ್ರೀೆಡೆಗಳಲ್ಲಿ ಆಸಕ್ತರು ಭಾಗವಹಿಸಿ ರಾಯಚೂರು ಜಿಲ್ಲೆ ಹೆಮ್ಮೆೆಪಡುವಂತಹ ಕ್ರೀೆಡೋತ್ಸವ ಮೂಡಿಬರಲು ಸಹಕರಿಸಿ ರಾಯಚೂರು ಉತ್ಸವ ಯಶಸ್ವಿಿಗೊಳಿಸಲು ಎಲ್ಲಾ ಕ್ರೀೆಡಾಪಟುಗಳು ಮತ್ತು ಸಾರ್ವಜನಿಕರಲ್ಲಿ ವಿನಂತಿಸಿದೆ ಎಂದು ಅಪರ ಜಿಲ್ಲಾಧಿಕಾರಿ ಶಿವಾನಂದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

