ಸುದ್ದಿಮೂಲ ವಾರ್ತೆ ಕೊಪ್ಪಳ, ಜ.01:
ಶ್ರೀ ಗವಿಸಿದ್ಧೇಶ್ವರ ಜಾತ್ರಾಾ ಮಹೋತ್ಸವದ ನಿಮಿತ್ಯ ಭಾರತೀಯ ರೆಡ್ಕ್ರಾಾಸ್ ಸಂಸ್ಥೆೆ, ಜಿಲ್ಲಾಾ ಘಟಕ, ಹಾಗೂ ಶ್ರೀ ಜಗದ್ಗುರು ಗವಿಸಿದ್ಧೇಶ್ವರ ಆಯುರ್ವೇದಿಕ ಮಹಾವಿದ್ಯಾಾಲಯ ಇವರಿಂದ ಜ 05 ರಿಂದ ಜ 08 ರವರೆಗೆ 04 ದಿನಗಳ ಕಾಲ ಶ್ರೀ ಜಗದ್ಗುರು ಗವಿಸಿದ್ಧೇಶ್ವರ ಆಯುರ್ವೇದಿಕ ಮಹಾವಿದ್ಯಾಾಲಯದಲ್ಲಿ ಬೃಹತ್ ರಕ್ತದಾನಶಿಬಿರ ವನ್ನು ಬೆಳೆಗ್ಗೆೆ 09:00 ಗಂಟೆಯಿಂದ ಸಾಯಂಕಾಲ 05:00 ಗಂಟೆಯವರೆಗೆ ಹಮ್ಮಿಿಕೊಳ್ಳಲಾಗಿದೆ. ರಕ್ತದಾನ ಶಿಬಿರವನ್ನು 2015ರಿಂದ ಆಯೋಜಿಸಲಾಗಿದೆ.
ಕಳೆದ 2025ರವರೆಗೆ ಸುಮಾರು 1111 ಶಿಬಿರಗಳನ್ನು ಆಯೋಜಿಲಾಗಿದೆ. ಇದರಿಂದ ಸುಮಾರು 8354 ಜನರು ಇದರ ಸೇವೆಯನ್ನು ಪಡೆದಿದ್ದಾಾರೆ. ರಕ್ತದಾನ ಮಾಡುವುದರಿಂದ ಅನೇಕ ಜನರ ಜೀವ ಉಳಿಸುವ ಮಹಾಕಾರ್ಯ ಇದಾಗಿದ್ದು ಹೆಚ್ಚಿಿನ ರೀತಿಯಲ್ಲಿ ರಕ್ತಧಾನ ಮಾಡುವುದರ ಮೂಲಕ ಅನೇಕರಿಗೆ ಪ್ರೇೇರಣೆಯಾಗಬೇಕು. ಎಂದು ಶ್ರೀ ಗವಿಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

