ಸುದ್ದಿಮೂಲ ವಾರ್ತೆ ಬೀದರ್, ಜ.31:
ಹಲವಾರು ಅವ್ಯವಸ್ಥೆೆಗಳ ದೂರು ಹಿನ್ನೆೆಲೆಯಲ್ಲಿ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಾಭಿವೃದ್ಧಿಿ ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ.ಶರಣಪ್ರಕಾಶ ಆರ್.ಪಾಟೀಲ ಅವರು ಶನಿವಾರ ಬ್ರಿಿಮ್ಸ್ ಸಭಾಂಗಣದಲ್ಲಿ ಬ್ರಿಿಮ್ಸ್ ವೈದ್ಯಾಾಧಿಕಾರಿಗಳು ಹಾಗೂ ಆಡಳಿತ ಅಧಿಕಾರಿಗಳ ಸಭೆ ಜರುಗಿಸಿ ಸಮಸ್ಯೆೆಗಳನ್ನು ಆಲಿಸಿದರು.
ವೈದ್ಯಕೀಯ ವಿಜ್ಞಾನದ ಎಲ್ಲಾಾ ವಿಭಾಗದ ಮುಖ್ಯಸ್ಥರು ತಮ್ಮ ಅಗತ್ಯತೆಗಳನ್ನು ಹಾಗೂ ಅನುದಾನದ ಬೇಡಿಕೆಯನ್ನು ಪಟ್ಟಿಿ ಮಾಡಿ ಶೀಘ್ರವೇ ಸಲ್ಲಿಸುವಂತೆ ಸಚಿವರು ತಿಳಿಸಿದರು. ಮುಂಬರುವ ಬಜೆಟ್ ಅಧಿವೇಶನದಲ್ಲಿ ಬ್ರಿಿಮ್ಸ್ನ ಒಟ್ಟಾಾರೆ ಅಭಿವೃದ್ಧಿಿಗೆ ವಿಶೇಷ ಅನುದಾನಕ್ಕಾಾಗಿ ಪ್ರಸ್ತಾಾವನೆ ಮಂಡಿಸಲಾಗುವುದೆಂದು ತಿಳಿಸಿದರು.
ತುರ್ತು ಚಿಕಿತ್ಸೆೆ ಆಪರೇಷನ್ ಥಿಯೇಟರ್ ಅನ್ನು ತಕ್ಷಣವೇ ರಿಪೇರಿ ಮಾಡುವಂತೆ, ನೆಲಮಹಡಿಯಲ್ಲಿ ನೀರು ಸೋರಿಕೆ ಹಾಗೂ ಸಂಗ್ರಹಕ್ಕಾಾಗಿ ಕೈಗೊಂಡ ಕಾಮಗಾರಿಯನ್ನು ತಕ್ಷಣವೇ ರಿಪೇರಿ ಮಾಡುವಂತೆ ಪಿಡಬ್ಲ್ಯೂಡಿ ಕಾರ್ಯನಿರ್ವಾಹಕ ಅಭಿಯಂತರರಿಗೆ ತಿಳಿಸಿದರು.
ತಾತ್ಕಾಾಲಿಕ ಹಾಗೂ ಗುತ್ತಿಿಗೆ ಸಿಬ್ಬಂದಿ ನೌಕರರ ಸಂಬಳವನ್ನು ಡಿಸೆಂಬರ ತನಕ ಪಾವತಿಸಲಾಗಿದೆ ಹಾಗೂ ಉಳಿದ ಅನುದಾನವನ್ನು ಸಹ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು. ಹೃದಯ ಸಂಬಂಧಿತ ಚಿಕಿತ್ಸೆೆಗಳಿಗೆ ಗುಲಬರ್ಗಾದ ಜಯದೇವ ಆಸ್ಪತ್ರೆೆ ಜೊತೆ ಒಪ್ಪಂದ ಮಾಡಿಕೊಳ್ಳಲಾಗುತ್ತಿಿದೆ ಹಾಗೂ ಬ್ರಿಿಮ್ಸ್ನ ಕ್ಯಾಾತ್ಲ್ಯಾಾಬ್ ಸಹ ಆರಂಭಿಸಲಾಗುವುದೆಂದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ, ಬ್ರಿಿಮ್ಸ್ ನಿರ್ದೇಶಕ ಶಿವಕುಮಾರ ಶೆಟಕಾರ ಸೇರಿದಂತೆ ವೈದ್ಯಾಾಧಿಕಾರಿಗಳು ಉಪಸ್ಥಿಿತರಿದ್ದರು.
ಗೈರಾದ ವೈದ್ಯರ ಸಂಬಳ ಕಟ್ : ಅವ್ಯವಸ್ಥೆೆಯ ಗೂಡಾಗಿರುವ ನಗರದ ಪ್ರತಿಷ್ಠಿಿತ ಬ್ರಿಿಮ್ಸ್ ಆಸ್ಪತ್ರೆೆಗೆ ವೈದ್ಯರು ಸೇವೆಗೆ ನಿರಂತರವಾಗಿ ಗೈರಾಗುತ್ತಿಿರುವ ಬಗ್ಗೆೆ ಸಾರ್ವಜನಿಕ ದೂರುಗಳ ಹಿನ್ನಲೆ ಕಟ್ಟುನಿಟ್ಟಿಿನ ಕ್ರಮಕ್ಕೆೆ ಮುಂದಾಗಿದ್ದೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.
ನಗರದಲ್ಲಿ ಶನಿವಾರ ವೈದ್ಯಾಾಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು.
ಬ್ರಿಿಮ್ಸ್ ಆಸ್ಪತ್ರೆೆ ಸಿಇಓ ಹಾಗೂ ಹಣಕಾಸು ಆಡಳಿತಾಧಿಕಾರಿಗಳಿಗೆ ಗೈರಾಗುವ ವೈದ್ಯರ ಸಂಬಳ ನಿಲ್ಲಿಸಲು ನಿರ್ದೇಶಿಸಲಾಗಿದೆ. ದಿನದಲ್ಲಿ ನಾಲ್ಕು ಬಾರಿ ಬಯೋಮೆಟ್ರಿಿಕ್ ಮಾಡಬೇಕು. ಬಯೋಮೆಟ್ರಿಿಕ್ ಮಾಡದ ವೈದ್ಯರ ಸಂಬಳ ಹಾಕದಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಬ್ರಿಮ್ಸ್ ಸುಧಾರಣೆಗೆ ಕ್ರಮ – ಸಚಿವ ಡಾ.ಶರಣಪ್ರಕಾಶ ಪಾಟೀಲ್

