ಸುದ್ದಿಮೂಲ ವಾರ್ತೆ ಬೆಂಗಳೂರು, ಜ.29:
ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳ ಕಾಫಿ, ಟೀ ಎಸ್ಟೇಟ್ ಗಳಲ್ಲಿ ಅಕ್ರಮವಾಗಿ ವಾಸವಾಗಿರುವ ಬಾಂಗ್ಲಾಾ ವಲಸಿಗರನ್ನು ಪತ್ತೆೆಹಚ್ಚಲು ವಿಶೇಷ ತನಿಖಾ ತಂಡ ರಚಿಸಲಾಗುವುದೆಂದು ರಾಮಲಿಂಗಾರೆಡ್ಡಿಿ ಅವರು ಗೃಹ ಸಚಿವರ ಪರವಾಗಿ ವಿಧಾನಸಭೆಯಲ್ಲಿ ತಿಳಿಸಿದರು.
ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಾಳ್ ಅವರು ಗಮನ ಸೆಳೆವ ಸೂಚನೆಯಡಿ ರಾಜ್ಯದಲ್ಲಿ ನೆಲೆಸಿರುವ ಅಕ್ರಮ ಬಾಂಗ್ಲಾಾ ವಲಸಿಗರ ಮಾಹಿತಿ ನೀಡಿದವರಿಗೆ ಪೊಲೀಸರಿಂದ ಕಿರುಕುಳ ಉಂಟಾಗುತ್ತಿಿರುವುದಾಗಿ ತಿಳಿಸಿದ್ದಕ್ಕೆೆ ಉತ್ತರಿಸಿದ ಸಚಿವರು ರಾಜ್ಯದಲ್ಲಿ 370 ಜನ ಬಾಂಗ್ಲಾಾದೇಶದ ಜನರು ಅಕ್ರಮವಾಗಿ ವಾಸವಾಗಿದ್ದು, ಅವರಲ್ಲಿ 213 ಜನರನ್ನು ಈಗಾಗಲೇ ಗಡಿಪಾರು ಮಾಡಲಾಗಿದೆ ಎಂದರು.
ಅದಕ್ಕೆೆ ಬಸವನಗೌಡ ಪಾಟೀಲ್ ಯತ್ನಾಾಳ್ ಅವರು ಕಾಫಿ ಮತ್ತು ಟೀ ಎಸ್ಟೇಟ್ ಗಳಲ್ಲಿ ಇನ್ನೂ ಹೆಚ್ಚಿಿನ ವಲಸಿಗರು ಅಕ್ರಮವಾಗಿ ವಾಸವಾಗಿದ್ದಾರೆಂದು ತಿಳಿಸಲಾಗಿ, ಸಚಿವರು ಅಕ್ರಮವಾಗಿ ಬಾಂಗ್ಲಾಾ ವಲಸಿಗರು ನಮ್ಮ ರಾಜ್ಯಕ್ಕೆೆ ನುಸುಳುತ್ತಿಿರುವುದು ನಮ್ಮ ಸರ್ಕಾರದ ವೈಲ್ಯವಲ್ಲ. ಅವರು ನಮ್ಮ ದೇಶದ ಗಡಿಯನ್ನು ನುಸುಳಿ ಹಲವು ರಾಜ್ಯಗಳ ಮೂಲಕ ನಮ್ಮ ರಾಜ್ಯಕ್ಕೆೆ ಬರುತ್ತಿಿದ್ದಾರೆ. ಹಾಗಾಗಿ ಇದು ಕೇಂದ್ರ ಸರ್ಕಾರದ ವೈಲ್ಯವಾಗಿದೆ ಎಂದರು.
ಆದಾಗ್ಯೂ ಕೂಡ ನಮ್ಮ ಸರ್ಕಾರ ರಾಜ್ಯದಲ್ಲಿ ವಾಸವಿರುವ ಬಾಂಗ್ಲಾಾ ವಲಸಿಗರನ್ನು ವಿಶೇಷ ತನಿಖಾ ತಂಡದ ಮೂಲಕ ಪತ್ತೆೆಹಚ್ಚಿಿ, ಗಡಿಪಾರು ಮಾಡಲಾಗುವುದು. ಹಾಗೆಯೇ ಅವರಿಗೆ ಸಹಾಯ ಮಾಡುತ್ತಿಿರುವ ಏಜೆಂಟ್ ಗಳನ್ನು ಹುಡುಕಿ, ಶಿಕ್ಷೆಗೆ ಒಳಪಡಿಸಲಾಗುವುದು. ಅಕ್ರಮ ವಲಸಿಗರ ಮಾಹಿತಿ ನೀಡುವವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು. ಆದರೆ ಈ ವಿಚಾರವಾಗಿ ಯಾರೂ ಕಾನೂನನ್ನು ಕೈಗೆತ್ತಿಿಕೊಳ್ಳಬಾರದು ಎಂದು ತಿಳಿಸಿದರು.

