ಸುದ್ದಿಮೂಲ ವಾರ್ತೆ ಕಲಬುರಗಿ, ಜ.21:
ಭಾರತ ಸಂವಿಧಾನ ಸಂಸತ್ತು ಮತ್ತು ಪ್ರಜಾಪ್ರಭುತ್ವದ ವ್ಯವಸ್ಥೆೆಗೆ ಸುಮಾರು 7 ಶತಮಾನಗಳ ಮೊದಲೇ ಮುನ್ನುಡಿ ಬರೆದವರು ನಿಜಶರಣ ಅಂಬಿಗರ ಚೌಡಯ್ಯನವರು. ಅವರ ಆದರ್ಶಗಳು ಮೌಲ್ಯಗಳು ನಮ್ಮ ಜೀವನದಲ್ಲಿ ಆಳವಡಿಸಿಕೊಳ್ಳಬೇಕು ಎಂದು ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ್ ಸಲಹೆನೀಡಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯತ್ ಹಾಗೂ ಕೋಲಿ ಸಮುದಾಯದ ಆಶ್ರಯದಲ್ಲಿ ನಗರದ ಡಾ.ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಹಮ್ಮಿಿಕೊಂಡಿದ್ದ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ 906ನೆಯ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಶ್ರೀ ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆೆ ಪುಷ್ಪಾಾರ್ಚನೆ ಮಾಡಿ ಮಾತನಾಡಿದರು. ಕೋಲಿ ಸಮುದಾಯಕ್ಕೆೆ ಎಸ್.ಟಿ ಪಟ್ಟಿಿಗೆ ಸೇರ್ಪಡೆ ಕುರಿತಾಗಿ ಮುಖ್ಯಮಂತ್ರಿಿಗಳ ಬಳಿ ನಿಯೋಗ ಹೋಗಿದ್ದೇವೆ. ಶೀಘ್ರದಲ್ಲೇ ಎಸ್.ಟಿ ಗೆ ಸೇರಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿಿದೆ ಎಂದರು.
ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ ಮಾತನಾಡಿ, ಅಂಬಿಗರ ಚೌಡಯ್ಯನವರ ಅಭಿವೃದ್ಧಿಿ ನಿಗಮಕ್ಕೆೆ 300 ಕೋಟಿ ಅನುದಾನ ನೀಡುವಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು, ಮಾತಾ ಮಣಿಕೇಶ್ವರಿ ಅಭಿವೃದ್ಧಿಿ ಪ್ರಾಾಧಿಕಾರ ಮಾಡಲಾಗಿದೆ. ಇದಕ್ಕೆೆ ಸೂಕ್ತ ಅನುದಾನ ನೀಡಬೇಕು, ಕೋಲಿ ಸಮುದಾಯವನ್ನು ಎಸ್.ಟಿ ಪಟ್ಟಿಿಗೆ ಸೇರಿಸಬೇಕೆಂದು ಒತ್ತಾಾಯಿಸಿದರು.
ಸುಲಲ ಮಠದ ಸಾರಂಗಧರ ದೇಶಿಕೇಂದ್ರದ ಮಹಾಸ್ವಾಾಮೀಜಿ ಹಾಗೂ ಮಲ್ಲಣ್ಣಪ್ಪ ಮುತ್ಯಾಾ ತೋನಸನಳ್ಳಿಿ ಸಾನಿಧ್ಯವಹಿಸಿ ಮಾತನಾಡಿದರು. ಪ್ರೊೊ.ಎಚ್.ಟಿ.ಪೋತೆ ವಿಶೇಷ ಉಪನ್ಯಾಾಸ ನೀಡಿದರು. ಪ್ರತಿಭಾವಂತ ಮಕ್ಕಳಿಗೆ ಲ್ಯಾಾಪ್ ಟಾಪ್, ಅಂಗವಿಕಲ ಮಕ್ಕಳಿಗೆ ತ್ರಿಿಚಕ್ರ ಸೈಕಲ್ ವಿತರಿಸಲಾಯಿತು.
ಇದಕ್ಕೂ ಮುನ್ನ ನಗರದ ಗಂಜ್ ಪ್ರದೇಶದಿಂದ ರಂಗಮಂದಿರವರೆಗೆ ಹಮ್ಮಿಿಕೊಂಡಿದ ಬೃಹತ್ ಮೆರವಣಿಗೆಯಲ್ಲಿ ವಚನ ಗ್ರಂಥ ಹಾಗೂ ಶ್ರೀ ಅಂಬಿಗರ ಚೌಡಯ್ಯನವರ ಮೂರ್ತಿಗೆ ಹೆಲಿಕ್ಯಾಾಪ್ಟರ್ ಮೂಲಕ ಪುಷ್ಪಾಾರ್ಚನೆ ಮಾಡಲಾಯಿತು. ವಿವಿಧ ವಾದ್ಯ, ಗೊಂಬೆಗಳ ಪ್ರದರ್ಶನ, ನಾಸಿಕ ಡೋಲ್, ಜನಪದ ಕಲಾ ತಂಡಗಳು, ಹುಲಿ ಕುಣಿತ ಸೇರಿದಂತೆ ವಿವಿಧ ವೇಷಧಾರಿಗಳೊಂದಿಗೆ ಮೆರವಣಿಗೆ ಜರುಗಿತು. ಪಾಲಿಕೆಯ ಆವರಣದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಪ್ರತಿಷ್ಠಾಾಪನೆಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು.
ಶಾಸಕ ಬಸವರಾಜ್ ಮತ್ತಿಿಮಡು, ಎಂಎಲ್ಸಿಿಗಳಾದ ಬಿ.ಜಿ ಪಾಟೀಲ್, ಶಶೀಲ್ ನಮೋಶಿ,ಮೇಯರ್ ವರ್ಷಾ ಜಾನೆ, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್, ಕೆಕೆಆರ್ ಟಿಸಿ ಅಧ್ಯಕ್ಷ ಅರುಣಕುಮಾರ್ ಪಾಟೀಲ್, ಜೆಸ್ಕಾಾಂ ಅಧ್ಯಕ್ಷ ಪ್ರವೀಣ್ ಪಾಟೀಲ್ ಹರವಾಳ, ಕುಡಾ ಅಧ್ಯಕ್ಷ ಮಝಹರ್ ಖಾನ್ ಆಲಂ, ಬಿ.ೌಜಿಯಾ ತರನ್ನುಮ್, ಪೋಲಿಸ್ ನಗರ ಆಯುಕ್ತ ಶರಣಪ್ಪ ಎಸ್.ಡಿ. ಎಸ್.ಪಿ.ಅಡ್ಡರೂ ಶ್ರೀನಿವಾಸಲು, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ,
ಜಯಂತ್ಯೋೋತ್ಸವ ಸಮಿತಿ ಅಧ್ಯಕ್ಷ ಜಯಪ್ರಕಾಶ ಕಮಕನೂರ, ನೀಲಕಂಠರಾವ ಮೂಲಗೆ, ಅವ್ವಣ್ಣ ಮ್ಯಾಾಕೇರಿ, ರವಿರಾಜ್ ಕೊರವಿ, ಬಸವರಾಜ್ ಬೂದಿಹಾಳ್, ರಮೇಶ್ ನಾಟಿಕಾರ್, ಶಿವಾನಂದ ಹೊನಗುಂಟಿ, ಅಶೋಕ ವೀರನಾಯಕ, ಲಚ್ಚಪ್ಪ ಜಮಾದಾರ್, ಶಿವಶರಣಪ್ಪ ಕೋಬಾಳ, ಅನುಪಮಾ ಕಮಕನೂರು ಇದ್ದರು.
ಕಲಬುರಗಿ :ಅಂಬಿಗರ ಚೌಡಯ್ಯನವರ ಮೌಲ್ಯಗಳ ಅಳವಡಿಸಿಕೊಳ್ಳಲು ಶಾಸಕ ಅಲ್ಲಮಪ್ರಭು ಪಾಟೀಲ್ ಸಲಹೆ

