ಸುದ್ದಿಮೂಲ ವಾರ್ತೆ ಲಿಂಗಸುಗೂರು, ಜ.22:
ಸಮಾಜದ ಅಂಕುಡೊಂಕು ತಿದ್ದುವಲ್ಲಿ ಪತ್ರಕರ್ತರ ಕಾರ್ಯ ಬಹುಮುಖ್ಯವಾಗಿದೆ. ರಾಜಕಾರಣಿಗಳು ಅಧಿಕಾರಿಗಳ ತಪ್ಪುು ಎಡವಟ್ಟುಗಳನ್ನು ಪತ್ರಕರ್ತರು ಆಗಾಗ ಪ್ರಾಾಮಾಣಿಕತೆಯಿಂದ ಎಚ್ಚರಿಸಿದಾಗ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಜಾಗ್ರತೆಯಿಂದ ಇರುತ್ತಾಾರೆ ಆಗ ಸಮಾಜದಲ್ಲಿನ ನ್ಯೂನ್ಯತೆಗಳಿಗೆ ಕಡಿವಾಣ ಬೀಳಲಿದೆ ಎಂದು ರಾಯಚೂರು ಕೂಪ್ಪಳ ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ ಬಯ್ಯಾಾಪುರ ಹೇಳಿದರು.
ಪಟ್ಟಣದ ಪತ್ರಿಿಕಾಭವನದ ಮೊದಲ ಮಹಡಿಯ ಸಭಾಭವನ ನಿರ್ಮಾಣದ ಭೂಮಿಪೂಜೆ ಮತ್ತು ದಿ. ಬಿ.ಎ ನಂದಿಕೋಲಮಠ ಭಾವಚಿತ್ರಕ್ಕೆೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು ತಮ್ಮ ಪ್ರದೇಶಾಭಿವೃದ್ಧಿಿ ಅನುದಾನಲ್ಲಿ ಕಟ್ಟಡಕ್ಕೆೆ 4ಲಕ್ಷರೂ ನೀಡಿರುವೆ. ಬಿ.ಎನಂದಿಕೋಲಮಠ ಕುಟುಂಬದವರು ಕೂಡಾ ಕಟ್ಟಡ ಪೂರ್ಣಗೊಳಿಸಲು ಮುಂದಾಗಿದ್ದಾಾರೆ ಮೇಲ್ಬಾಾಗದ ಸಭಾಭವನಕ್ಕೆೆ ಅವರ ಹೆಸರಿನ್ನುಡವುದು ಸೂಕ್ತ, ಭವನದ ಬಾಕಿ ಉಳಿದ ಕಂಪೌಂಡ ಇತರೆ ಕಾಮಗಾರಿ ಅನುದಾನ ಇಲ್ಲವೆ ವೈಯಕ್ತಿಿಕವಾಗಿ ಧನ ಸಹಾಯ ನೀಡಿ ಪೂರ್ಣಗೊಳಿಸುವ ಭರವಸೆ ನೀಡಿದ ಅವರು ಕಳೆದವರ್ಷ ನಮ್ಮನ್ನಗಲಿದ ಹಿರಿಯ ಪತ್ರಕರ್ತ ನಂದಿಕೋಲ ಮಠ ತಾಲೂಕಿನ ಅದರಲ್ಲೂ ಗ್ರಾಾಮೀಣ ಸುದ್ದಿಗಳ ಮೇಲೆ ಬೆಳಕು ಚೆಲ್ಲುತ್ತ ನಮಗೆ ರಾಜಕೀಯ ಮಾರ್ಗದರ್ಶಕರಾಗಿದ್ದರು ಎಂದರು.
ಪತ್ರಕರ್ತರ ಸಂಘದ ಜಿಲ್ಲಾಾಧ್ಯಕ್ಷ ಆರ್ಗುರುನಾಥ ಮಾತನಾಡಿ ಲಿಂಗಸುಗೂರ ಪತ್ರಕರ್ತರ ಸಂಘ ಜಿಲ್ಲೆೆಯಲ್ಲಿ ಅತಿ ಹೆಚ್ಚು ಪತ್ರಕರ್ತರ ಹೊಂದಿ ಮಾದರಿ ಸಂಘವಾಗಿ ಮುನ್ನಡೆದಿದೆ. ದಿ. ಪತ್ರಕರ್ತ ನಂದಿಕೋಲಮಠ ಬಡವರ ದೀನ ದಲಿತರ ಗ್ರಾಾಮೀಣ ಸಮಸ್ಯಗಳಿಗೆ ಹೆಚ್ಚಿಿನ ಒತ್ತು ನೀಡಿ ದಿಟ್ಟತನದ ವರದಿ ಮಾಡುತ್ತಿಿದ್ದ ಅವರ ಹೆಸರು ಭವನಕ್ಕೆೆ ಇರಲಿ ಎಂದು ಸ್ಮರಿಸಿದರು.
ನ.ಯೋ.ಪ್ರಾಾ. ಅಧ್ಯಕ್ಷ ಭೂಪನಗೌಡ ಪಾಟೀಲ, ಜಿಲ್ಲಾಾ ಗ್ಯಾಾರಂಟಿ ಅನುಷ್ಠಾಾನ ಸಮಿತಿ ಅಧ್ಯಕ್ಷ ಪಾಮಯ್ಯ ಮುರಾರಿ, ಶಿವುಕುಮಾರ ನಂದಿಕೋಲಮಠ, ಕಾರ್ಯದರ್ಶಿ ಸಿದ್ದಯ್ಯಸ್ವಾಾಮಿ, ಪತ್ರಕರ್ತರಾದ ಗುರುರಾಜ ಮುತಾಲಿಕ, ಘನಮಠದಯ್ಯ ಸಂತೆಕೆಲ್ಲೂರು, ನಾಗರಾಜ ಮಸ್ಕಿಿ, ತಾಲೂಕಾಧ್ಯಕ್ಷ ಶಿವರಾಜ ಕೆಂಬಾವಿ, ಕಾರ್ಯದರ್ಶಿ ಗಂಗಾಧರ ನಾಯಕ ಮಾತನಾಡಿದರು. ಕಾರ್ಯಕ್ರಮದಲ್ಲಿ ಗುಂಡಪ್ಪ ನಾಯಕ, ಬಸವರಾಜಗೌಡ ಗಣೆಕಲ್, ಶಶಿಧರ ಪಾಟೀಲ್, ಚನ್ನರೆಡ್ಡಿಿ ಬಿರಾದರ ಇದ್ದರು.
ರಾಘವೇಂದ್ರ ಗುಮಾಸ್ತೆೆ, ಅಮರೇಶ ಕಲ್ಲೂರು, ಅಮರೇಶ ಬಲ್ಲಟಗಿ, ರವಿಕುಮಾರ ನಿರ್ವಹಿಸಿದರು. ಲಿಂಗಸಗೂರು, ಮುದಗಲ್, ಹಟ್ಟಿಿ ಪತ್ರಕರ್ತರಿದ್ದರು.
ಸಮಾಜದ ಅಂಕು-ಡೊಂಕು ತಿದ್ದುವ ಕೆಲಸ ಪತ್ರಕರ್ತರಿಂದ ಮಾತ್ರ ಸಾಧ್ಯ : ಎಂಎಲ್ಸಿ ಬಯ್ಯಾಪೂರ

