ಸುದ್ದಿಮೂಲ ವಾರ್ತೆ ರಾಯಚೂರು, ೆ.01:
ತಾಲೂಕಿನ ದೇವಸೂಗೂರಿನಲ್ಲಿ ೆ.1ರಂದು ಮಾತಾ ನಾಗರ ಯಲ್ಲಮ್ಮ ದೇವಿ ಜಾತ್ರಾಾ ಮಹೋತ್ಸವ ಅಂಗವಾಗಿ ಲಕ್ಷ ದೀಪೋತ್ಸವ ಹಾಗೂ ರಥೋತ್ಸವ ಜರುಗಲಿದೆ ಎಂದು ದೇವಸ್ಥಾಾನದ ಅರ್ಚಕ ಬಸವರಾಜ ಮರಳ ತಿಳಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ಅಂದು ಬೆಳಿಗ್ಗೆೆಯಿಂದಲೇ ಮಾತೆಗೆ ವಿಶೇಷ ಕುಂಕುಮಾರ್ಚನೆ, ಉಡಿ ತುಂಬುವ ಕಾರ್ಯ ಜರುಗಲಿದೆ. ಸಂಜೆ 5ಕ್ಕೆೆ ದೇವಸ್ಥಾಾನದ ಆವರಣದಲ್ಲಿ ಗ್ರಾಾಮದ ರಾಮನಗೌಡ ಪೊಲೀಸ್ ಪಾಟೀಲ ದಂಪತಿಯಿಂದ ಲಕ್ಷ ದೀಪೋತ್ಸವ ಜರುಗಲಿದೆ. ಸಂಜೆ 6ಕ್ಕೆೆ ಮಹಿಳೆಯರಿಂದಲೇ ರಥೋತ್ಸವ ಜರುಗಲಿದೆ. ಇದರೊಟ್ಟಿಿಗೆ ಸೂಗೂರೇಶ್ವರ ದೇವಸ್ಥಾಾನದಲ್ಲಿ ಭರತ ಹುಣ್ಣಿಿಮೆ ಸೇವೆ ಜರುಗಲಿದೆ ಎಂದು ಮಾಹಿತಿ ನೀಡಿದರು.
ೆ.2ರಂದು ಬೆಳಿಗ್ಗೆೆ ವಿಶೇಷ ಪೂಜೆಗಳಿರಲಿದ್ದು ಮಧ್ಯಾಾಹ್ನ 2ರ ನಂತರ ಕೈಕಲ್ಲು ಹಾಗೂ ಉಸುಕಿನ ಚೀಲ ಎತ್ತುವ ಸ್ಪರ್ಧೆ ಇರಲಿದ್ದು ವಿಜೇತರಿಗೆ ದೇವಸ್ಥಾಾನ ಸಮಿತಿಯಿಂದ ಬೆಳ್ಳಿಿ ಕಡಗ ನೀಡಲಾಗುವುದು.
ೆ.3ರಿಂದ 6ರವರೆಗೆ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಲಿದ್ದು ಸಂಜೆ 6ಕ್ಕೆೆ ಕಳಸಾರೋಹಣ ಮತ್ತು ಕುಂಕುಮ ವಿತರಣೆ ನಂತರ ರಾತ್ರಿಿ 10ರಿಂದ ಅಖಂಡ ಭಜನಾ ಕಾರ್ಯಕ್ರಮ ಜರುಗಲಿದೆ ಎಂದರು.
ಜಾತ್ರಾಾ ಮಹೋತ್ಸವದ ಅಂಗವಾಗಿ ಸೂಗೂರೇಶ್ವರ ಸಾಂಸ್ಕೃತಿಕ ನಾಟ್ಯ ಕಲಾ ಬಳಗದಿಂದ ೆ.1ರ ರಾತ್ರಿಿ 10.30ಕ್ಕೆೆ ಸೂಗೂರೇಶ್ವರ ಶಾಲಾ ಆಚರಣದಲ್ಲಿ ಉಧೋಉಧೋ ಉಧೋ ಶ್ರೀ ಹುಲಿಗೆಮ್ಮ ಭಕ್ತಿಿ ಪ್ರಧಾನ ನಾಟಕ ಪ್ರದರ್ಶನ ಇರಲಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಿಯಲ್ಲಿ ರಂಗಕರ್ಮಿ ಅಣಿವೀರಯ್ಯಸ್ವಾಾಮಿ, ಪ್ರಕಾಶಯ್ಯ ಮಟಮಾರಿ, ರಂಗಸ್ವಾಾಮಿ ಇದ್ದರು.

