ಸುದ್ದಿಮೂಲ ವಾರ್ತೆ ಕೊಪ್ಪಳ, ಡಿ.20
ಮಾಜಿ ಸಚಿವ ನಾಗೇಂದ್ರರ ಆಸ್ತಿಿಯನ್ನು ವಾಲ್ಮೀಕಿ ಹಗರಣದ ಹಿನ್ನೆೆಲೆಯಲ್ಲಿ ಜಪ್ತಿಿ ಮಾಡಲಾಗಿದೆ. ಈ ವಿಷಯದಲ್ಲಿ ಮೊದಲು ನಾನೇ ಸಿಎಂ ತನಿಖೆಗೆ ಪತ್ರ ಬರೆದಿದ್ದೆೆ. ಕಾಂಗ್ರೆೆಸ್ ಪಕ್ಷ ಭ್ರಷ್ಟಾಾಚಾರದ ವಿಷಯದಲ್ಲಿ ಹೊಂದಾಣಿಕೆ ಮಾಡಿಕೊಂಡಿಲ್ಲ ಎಂದು ಕಾಂಗ್ರೆೆಸ್ ಮುಖಂಡ ವಿ ಎಸ್ ಉಗ್ರಪ್ಪ ಹೇಳಿದರು.
ಅವರು ಇಂದು ಕೊಪ್ಪಳದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಯಾರೇ ತಪ್ಪುು ಮಾಡಿರಲಿ ಕಾಂಗ್ರೆೆಸ್ ಅವರು ರಕ್ಷಣೆ ಮಾಡುವುದಿಲ್ಲ. ಈ ಮಧ್ಯೆೆ ಸಿದ್ದರಾಮಯ್ಯ ನಾಗೇಂದ್ರ ಅವರನ್ನು ಮತ್ತೆೆ ಸಚಿವರಾಗಿ ಮಾಡುತ್ತೇನೆ ಎಂದಿರುವ ಆ ಸಂದರ್ಭ ಇರಬಹುದು. ಆದರೆ ಈಗ ಈ ಪ್ರಶ್ನೆೆ ಅಪ್ರಸ್ತುತ ಎಂದು ಹೇಳಿದರು.
ಎರಡು ತಿಂಗಳು ಗೃಹಲಕ್ಷ್ಮಿಿ ಹಣ ಬಿಡುಗಡೆಯಾಗಿಲ್ಲ. ಈ ವಿಷಯದಲ್ಲಿ ಭ್ರಷ್ಟಾಾಚಾರವಾಗಿದೆ ಎಂದು ಬಿಜೆಪಿಯವರು ಆರೋಪಿಸುತ್ತಾಾರೆ. ಆದರೆ ಹಣವೇ ಬಿಡುಗಡೆಯಾಗಿಲ್ಲ ಎಂದು ಸಿಎಂ ಹಾಗು ಮಂತ್ರಿಿಗಳು ಹೇಳಿದ್ದಾಾರೆ ಹಾಗಾದರೆ ಇದರಲ್ಲಿ ಭ್ರಷ್ಟಾಾಚಾರ ಹೇಗೆ ಆಗುತ್ತೆೆ. 2 ತಿಂಗಳ ಗೃಹಲಕ್ಷ್ಮಿಿ ಹಣ ಯಾಕೆ ನೀಡಿಲ್ಲ ಎನ್ನುವುದು ಗೊತ್ತಿಿಲ್ಲ. ಈ ತಿಂಗಳ ಹಣ ಕೊಡದಿದ್ದರೆ ಕೊಡುತ್ತೇನೆ ಸಿಎಂ ಹೇಳಿದ್ದಾಾರೆ. ಯಾವ ಕಾರಣಕ್ಕೆೆ ನಿಂತಿದೆ ಎಂದಿರುವದನ್ನು ಪಕ್ಷದ ವೇದಿಕೆಯಲ್ಲಿ ಮಾತನಾಡುತ್ತೇನೆ.ಯಾವುದೇ ಕಾರಣಕ್ಕೆೆ ಗ್ಯಾಾರಂಟಿ ನಿಲ್ಲಿಸುವುದಿಲ್ಲ. ಹಣ ನೀಡುವುದು ವಿಳಂಭವಾಗಬಾರದಿತ್ತು. ಯಾಕಾಯಿತು ಎಂಬುದು ಸದನದಲ್ಲಿ ಚರ್ಚೆಯಾಗಿದೆ.ನನಗೆ ಪೂರ್ಣ ಮಾಹಿತಿ ಇಲ್ಲದೆ ರಿಯಾಕ್ಟ್ ಮಾಡುವುದು ಸರಿ ಅಲ್ಲ ಎಂದರು.
ಮಹಾತ್ಮ ಗಾಂಧಿ ಹೆಸರು ಶಾಶ್ವತವಾಗಿರಬೇಕು.ಬಡತನದಲ್ಲಿರುವ ಗ್ರಾಾಮೀಣ ಭಾಗ ಜನರಿಗೆ ನಿರುದ್ಯೋೋಗಿ ಯೋಜನೆ ತಂದಿದ್ದರು. ಪ್ರತಿ ವರ್ಷ 42 ಸಾವಿರ ಕೋಟಿ ನರೇಗಾದಿಂದ ಮೂಲಭೂತ ಸೌಲಭ್ಯ ಒದಗಿಸಲು ಯೋಜನೆ ಇತ್ತು. ಗೋಡ್ಸೆೆ ವಿಚಾರಧಾರೆಯ ಅನುಸರಿಸುವ ನರೇಂದ್ರ ಮೋದಿಯವರು ಹೆಸರು ಬದಲಾಯಿಸಿದ್ದಾಾರೆ ಎಂದು ಆರೋಪಿಸಿದ್ದಾಾರೆ.
ಈ ಸಂದರ್ಭದಲ್ಲಿ ಜ್ಯೋೋತಿ ಗೊಂಡಬಾಳ.ಪ್ರಸನ್ ಗಡಾದ, ಕೃಷ್ಣಾಾ ಇಟ್ಟಿಿಂಗಿ. ಶೈಲಾಜ್ ಹಿರೇಮಠ, ಕಿಶೋರಿ ಬೂದನೂರು. ಅಕ್ವರ್ ಪಾಷಾ ಪಲ್ಟನ್. ಮಂಜುನಾಥ ಗೊಂಡಬಾಳ ಇದ್ದರು.
ನಾಗೇಂದ್ರ ಆಸ್ತಿ ಜಪ್ತಿ, ರಾಜ್ಯ ಸರಕಾರ ಭ್ರಷ್ಟಾಚಾರಕ್ಕೆ ಹೊಂದಾಣಿಕೆ ಮಾಡಿಕೊಂಡಿಲ್ಲ – ಉಗ್ರಪ್ಪ

