ಸುದ್ದಿಮೂಲ ವಾರ್ತೆ ಸಿಂಧನೂರು, ಜ.31:
ಪ್ರತಿಯೊಬ್ಬರು ಮನೆ ಮುಂದೆ ಸ್ವಚ್ಛತೆ ಕಾಪಾಡಿ ರೋಗರುಜೆನಗಳಿಂದ ಮುಕ್ತರಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಾಯಾಧೀಶ ಲಕ್ಷ್ಮಿಿಕಾಂತ್ ಜಿ ಮಿಸ್ಕಿಿನ್ ಹೇಳಿದರು.
ಅವರು ಶುಕ್ರವಾರ ತಾಲೂಕು ಕಾನೂನು ಸೇವಾ ಸಮಿತಿ ನ್ಯಾಾಯವಾದಿಗಳ ಸಂಘ ಹಾಗೂ ನಗರಸಭೆ ಸಂಯುಕ್ತಾಾಶ್ರಯದಲ್ಲಿ ಹಮ್ಮಿಿಕೊಂಡಿದ್ದ ರಾಷ್ಟ್ರೀಯ ಸ್ವಚ್ಛತಾ ದಿನಾಚರಣೆ ಕಾರ್ಯಕ್ರಮದಲ್ಲಿ ಪೊರಕೆ ಹಿಡಿದು ಕಸ ಬಳಿಯುವ ಮೂಲಕ ಉದ್ಘಾಾಟಿಸಿ ಮಾತನಾಡಿದರು. ಕಸವನ್ನು ಸಾರ್ವಜನಿಕರು ಎಲ್ಲೆೆಂದರಲ್ಲಿ ಹಾಕಬಾರದು ನಗರ ಸಭೆ ವಾಹನ ಬಂದಾಗ ಹಸಿಕಸ ಒಣ ಕಸವನ್ನು ಬೇರೆ ಮಾಡಿ ಹಾಕಬೇಕು. ಮನೆ ಮುಂದೆ ಕಸ ಬಿಸಾಡಿದರೆ ದುರ್ನಾತ ಹೆಚ್ಚಾಾಗುತ್ತದೆ.ಸಹಜವಾಗಿ ಸೊಳ್ಳೆೆಗಳು ಹೆಚ್ಚಾಾಗಿ ವಿವಿಧ ರೋಗಗಳು ಹರಡುತ್ತವೆ. ವಿಶೇಷವಾಗಿ ಅಂಗಡಿಕಾರರು ಪ್ಲಾಾಸ್ಟಿಿಕ್ ಚೀಲಗಳನ್ನು ಬಳಸದೆ ಗ್ರಾಾಹಕರಿಗೆ ಬಟ್ಟೆೆ ಚೀಲಗಳನ್ನು ಕೊಡಬೇಕು. ಪ್ಲಾಾಸ್ಟಿಿಕ್ ಬಳಸಿದರೆ ದಂಡ ಹಾಕಲು ಕಾನೂನಿನಲ್ಲಿ ಅವಕಾಶವಿದೆ. ನಗರಸಭೆ ಅಧಿಕಾರಿಗಳು ಈ ಬಗ್ಗೆೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಧಾನ ಸಿವಿಲ್ ನ್ಯಾಾಯಾಧೀಶೇ ರೂಪ ವಗ್ಗ, 1 ನೇಯ ಅಪರ ಸಿವಿಲ್ ನ್ಯಾಾಯಾಧೀಶ ಸರಸ್ವತಿ ವೋಟ್ಕರ್, ಸಹಾಯಕ ಸರ್ಕಾರಿ ಅಭಿಯೋಜಕರಾದ ವಿಜಯಚಂದ್ರ ಪ್ರಭು, ಹನುಮೇಶ ರಾಗಲಪರ್ವಿ, ನಗರಸಭೆ ಪೌರಾಯುಕ್ತ ಪಾಂಡುರಂಗ ಇಟಗಿ, ನ್ಯಾಾಯವಾದಿಗಳ ಸಂಘದ ಅಧ್ಯಕ್ಷ ಕೆ.ಭೀಮನಗೌಡ, ಉಪಾಧ್ಯಕ್ಷ ಕೆ.ಜಗದೀಶ, ಕಾರ್ಯದರ್ಶಿ ದುರ್ಗೇಶ, ಸಹಕಾರ್ಯದರ್ಶಿ ಹೀನ ಅಂಬ್ರೀೀನ್, ಖಜಾಂಚಿ ಶೇಖರಪ್ಪ ಗಡೆದ್, ವಕೀಲರಾದ ಎಚ್. ರಾಮನಗೌಡ, ಎಂ. ಅಮರೇಗೌಡ, ಹಳ್ಳಪ್ಪ, ವೀರಭದ್ರಗೌಡ ಸಾಲ್ಗುಂದ, ಸೇರಿದಂತೆ ಪೌರಕಾರ್ಮಿಕರು ಭಾಗವಹಿಸಿದ್ದರು. ಇದಕ್ಕೂ ಮುನ್ನ ನ್ಯಾಾಯಾಧೀಶರು ನ್ಯಾಾಯಾಲಯದ ಆವರಣದಲ್ಲಿ ಸ್ವಚ್ಛತೆ ಕಾಪಾಡುವ ಬಗ್ಗೆೆ ಪ್ರತಿಜ್ಞಾಾವಿಧಿ ಬೋಧಿಸಿದರು.
ನಂತರ ಮುಖ್ಯ ರಸ್ತೆೆಯ ಅಂಗಡಿಗಳಿಗೆ ತೆರಳಿ ಬಟ್ಟೆೆ ಚೀಲಗಳನ್ನು ನೀಡಿ, ಪ್ಲಾಾಸ್ಟಿಿಕ್ ಚೀಲ ಬಳಸದಂತೆ ಅಂಗಡಿಕಾರರಿಗೆ ಹಾಗೂ ಗ್ರಾಾಹಕರಿಗೆ ಮನವಿ ಮಾಡಿದರು.
ರಾಷ್ಟ್ರೀಯ ಸ್ವಚ್ಛತಾ ದಿನಾಚರಣೆ ಸ್ವಚ್ಛತೆಯಿಂದ ಉತ್ತಮ ಆರೋಗ್ಯ – ನ್ಯಾಾ.ಲಕ್ಷ್ಮಿಕಾಂತ ಮಿಸ್ಕಿನ್

