Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅಂಬಾದೇವಿ ಕಾಣಿಕೆ ಹುಂಡಿಯ ಹಣದ ಎಣಿಕೆ 20 ದಿನದಲ್ಲೇ 43.10 ಲಕ್ಷ ರೂ ದಾಖಲೆ ಮೊತ್ತ ಸಂಗ್ರಹ

 ಸುದ್ದಿಮೂಲ ವಾರ್ತೆ ಸಿಂಧನೂರು, ಜ.21:
ತಾಲ್ಲೂಕಿನ ಸಿದ್ದಪರ್ವತ ಅಂಬಾಮಠದ ಶ್ರೀ ಅಂಬಾದೇವಿ ದೇವಸ್ಥಾಾನದ ಜಾತ್ರಾಾ ಮಹೋತ್ಸವದ ಕಾಣಿಕೆ ಹುಂಡಿ ಮೊತ್ತದ ಎಣಿಕೆ ಕಾರ್ಯ ಬುಧವಾರ ನಡೆದಿದ್ದು, 20 ದಿನದಲ್ಲೇ 43.10 ಲಕ್ಷ ರೂ. ದಾಖಲೆ ಹಣ ಸಂಗ್ರಹವಾಗಿದೆ.
ತಹಸೀಲ್ದಾಾರ ಅರುಣ್ ಹೆಚ್.ದೇಸಾಯಿ ನೇತೃತ್ವದಲ್ಲಿ ಬೆಳಗ್ಗೆೆಯಿಂದ ಸಂಜೆಯವರೆಗೆ ಹುಂಡಿಯಲ್ಲಿ ಸಂಗ್ರಹಣೆಯಾದ ಹಣದ ಎಣಿಕೆ ಕಾರ್ಯ ನಡೆಯಿತು. ಜಾತ್ರಾಾ ಮಹೋತ್ಸವದ ಅವಧಿಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಸಾವಿರಾರು ಭಕ್ತರು ಭಕ್ತಿಿಭಾವದಿಂದ ದೇಣಿಗೆ ಸಲ್ಲಿಸಿದ್ದು, ಇದು ಅಂಬಾದೇವಿ ದೇವಿಯ ಮೇಲಿನ ಅಪಾರ ಭಕ್ತಿಿಯ ಜೊತೆಗೆ ದೇವಾಲಯದ ಅಭಿವೃದ್ಧಿಿ ಕಾರ್ಯಗಳ ಮೇಲಿನ ಜನರ ವಿಶ್ವಾಾಸ ಪ್ರತಿಬಿಂಬಿಸುತ್ತದೆ.
ತಹಸೀಲ್ದಾಾರ ಅರುಣ್ ಹೆಚ್.ದೇಸಾಯಿ ಸುದ್ದಿಗಾರರೊಂದಿಗೆ ಮಾತನಾಡಿ, ಅಂಬಾದೇವಿಯ ಕೃಪೆಗೆ ಸಾಕ್ಷಿಯಾದ ದಾಖಲೆಯ ಹಣ ಈ ಬಾರಿ ಸಂಗ್ರಹವಾಗಿದೆ. ಶ್ರೀ ಅಂಬಾದೇವಿ ದೇವಾಲಯದಲ್ಲಿ ಪ್ರಸ್ತುತ ಹೊಸ ದೇವಾಲಯ ನಿರ್ಮಾಣ ಹಾಗೂ ಅಭಿವೃದ್ಧಿಿ ಕಾರ್ಯಗಳು ಪ್ರಗತಿಯಲ್ಲಿದ್ದು, ಇದಕ್ಕೆೆ ಭಕ್ತಾಾದಿಗಳು ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿರುವುದೇ ಈ ಅಪೂರ್ವ ಹುಂಡಿ ಸಂಗ್ರಹಕ್ಕೆೆ ಪ್ರಮುಖ ಕಾರಣವಾಗಿದೆ. ಹುಂಡಿ ಎಣಿಕೆ ಕಾರ್ಯ ಸಂಪೂರ್ಣ ಪಾರದರ್ಶಕ, ಸರ್ಕಾರದ ನಿಯಮಾನುಸಾರ ಹಾಗೂ ಆಡಳಿತದ ಮೇಲ್ವಿಿಚಾರಣೆಯಲ್ಲಿ ನಡೆಸಲಾಗಿದೆ. ಸಂಗ್ರಹವಾದ ಮೊತ್ತ ದೇವಾಲಯದ ನಿರ್ಮಾಣ, ಅಭಿವೃದ್ಧಿಿ ಕಾರ್ಯಗಳು, ಮೂಲಸೌಕರ್ಯ ಸುಧಾರಣೆ ಹಾಗೂ ಭಕ್ತರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಸಮರ್ಪಕವಾಗಿ ಬಳಸಲಾಗುವುದು ಎಂದು ಅವರು ತಿಳಿಸಿದ್ದಾಾರೆ.
ಈ ಸಂದರ್ಭದಲ್ಲಿ ದೇವಸ್ಥಾಾನದ ವ್ಯವಸ್ಥಾಾಪನ ಸಮಿತಿ ಅಧ್ಯಕ್ಷ ರಂಗನಗೌಡ ಗೊರೇಬಾಳ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಇದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ