Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬಸವ ಕೇಂದ್ರದಲ್ಲಿ ಭೀಮಣ್ಣ ಖಂಡ್ರೆಗೆ ಸಂತಾಪ ಸಮುದಾಯದ ಜೊತೆ ರೈತ ಪರ ಕಾಳಜಿ ಸ್ಮರಣೆ

 ಸುದ್ದಿಮೂಲ ವಾರ್ತೆ ರಾಯಚೂರು, ಜ.19:
ವೀರಶೈವ ಲಿಂಗಾಯತ ಸಮುದಾಯ ಸಂಘಟಿಸುವಲ್ಲಿ ಈ ಭಾಗದ ನಾಯಕರಾಗಿದ್ದ ಭೀಮಣ್ಣ ಖಂಡ್ರೆೆ ಅವರು ಪ್ರಮುಖ ಪಾತ್ರ ವಹಿಸಿದ್ದರು ಎಂದು ಬಸವ ಕೇಂದ್ರದ ಗೌರವಾಧ್ಯಕ್ಷ ಹರವಿ ನಾಗನಗೌಡ ಹೇಳಿದರು.
ನಗರದ ಬಸವ ಕೇಂದ್ರದಲ್ಲಿ ಲಿಂ. ಭೀಮಣ್ಣ ಖಂಡ್ರೆೆ ಅವರ ನಿಧನದ ಹಿನ್ನೆೆಲೆಯಲ್ಲಿ ಸಂತಾಪ ಸಭೆಯಲ್ಲಿ ಭಾವಚಿತ್ರಕ್ಕೆೆ ಮಾಲಾರ್ಪಣೆ ಮಾಡಿ ವೌನಾಚರಣೆ ಸಲ್ಲಿಸಿ ನುಡಿನಮನ ಸಲ್ಲಿಸಿದರು. ನಾಲ್ಕು ಬಾರಿ ಶಾಸಕರಾಗಿ ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿ, ಸಚಿವರಾಗಿ ಅಖಿಲ ಭಾರರ ವೀರಶೈವ ಲಿಂಗಾಯತ ಸಭಾ ಅಧ್ಯಕ್ಷರಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆಂದು ಹೇಳಿದರು.
ಲಿಂಗಾಯತ ಸಮಾಜವನ್ನು ಒಂದುಗೂಡಿಸುವ ಉದ್ದೇಶದಿಂದ ಪಂಚಪೀಠ , ವಿರಕ್ತ ಮಠಾಧೀಶರರನ್ನು ಒಂದೇ ಸಮಾನ ವೇದಿಕೆಯಲ್ಲಿ ಕೂಡಿಸಿ ಅಧಿವೇಶನ ಕೂಡಲ ಸಂಗಮದಲ್ಲಿ ನಡೆಸಿದ್ದನ್ನು ನೆನಪಿಸಿದರು.
ಸಿ ಬಿ.ಪಾಟೀಲ ವಕೀಲರು ಮಾತನಾಡಿ ಖಂಡ್ರೆೆ ಅವರು ಲಿಂ. ಶಾಮನೂರ ಶಿವಶಂಕರಪ್ಪ ಅವರೊಂದಿಗೆ ಸೇರಿ ರಾಜ್ಯದಲ್ಲಿ ಸಂಚರಿಸಿ ಸುಮಾರು 5 ಕೋಟಿ ಹಣ ಸಂಗ್ರಹಿಸಿ ಬೆಂಗಳೂರಿನ ಪ್ರತಿಷ್ಠಿಿತ ಬಡಾವಣೆ ಸದಾಶಿವ ನಗರದಲ್ಲಿ ವೀರಶೈವ- ಲಿಂಗಾಯತ ಭವನ ಕಟ್ಟಿಿಸಿದ ಶ್ರೇಯಸ್ಸು ಸಲ್ಲುತ್ತದೆ ಎಂದರು.
ಚನ್ನಬಸವ ಇಂಜಿನಿಯರ ಮಾತನಾಡಿ ಖಂಡ್ರೆೆಯವರು ಶಾಸಕರಾಗಿದ್ದಾಗ ರಾಜ್ಯದಲ್ಲಿ ರೈತರಿಗೆ ಬಿತ್ತಲು ಬೀಜದ ಕೊರತೆ ಉಂಟಾದಾಗ ವ್ಯಾಾಪಾರಸ್ಥರು ಬೀಜ ಸಂಗ್ರಹಿಸಿಟ್ಟಿಿದ್ದ ಗೋದಾಮುಗಳ ಬೀಗ ಮುರಿದು ಬೀಜ ಪೂರೈಸಿದ ಅವರ ಶ್ರಮ ರೈತ ಪರ ಕಾಳಜಿ ತೋರಿಸುತ್ತದೆ ಎಂದರು.
ಅಮರೇಗೌಡ ಪಾಟೀಲ್, ಶರಣಬಸವ ಜಾಡಲದಿನ್ನಿಿ, ಜೆ. ಬಸವರಾಜ ವಕೀಲರು, ಚನ್ನಬಸವ ಮಾಹಾಜನ ಶೆಟ್ಟಿಿ ಸೇರಿ ಹಲವರಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ