Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಾರ್ವಜನಿಕ ಅರ್ಜಿಗಳ ವಿಲೇವಾರಿಯಲ್ಲಿ ಮಾನ್ವಿ ನಾಡ ಕಚೇರಿಗೆ ದ್ವಿತೀಯ ಸ್ಥಾನ ಉಪ ತಹಸೀಲ್ದಾರ್ ವಿರುಪಣ್ಣಗೆ ಕಂದಾಯ ಆಯುಕ್ತರಿಂದ ಅಭಿನಂದನಾ ಪತ್ರ

ಸುದ್ದಿಮೂಲ ವಾರ್ತೆ ಮಾನ್ವಿ, ಜ.20:
ಅಟಲ್ಜೀ ಜನಸ್ನೇಹಿ ಕೇಂದ್ರ ಯೋಜನೆ ಅಡಿಯಲ್ಲಿ ರಾಜ್ಯದ ಸಾರ್ವಜನಿಕರಿಗೆ ವಿವಿಧ ಪ್ರಮಾಣ ಪತ್ರಗಳ ಸೇವೆಯನ್ನು ನೀಡಲು ರಾಯಚೂರು ಜಿಲ್ಲೆಯ ಮಾನ್ವಿಿ ನಗರದ ನಾಡ ಕಚೇರಿಯಲ್ಲಿ ಡಿಸೆಂಬರ್-2025 ರ ತಿಂಗಳಲ್ಲಿ ಸ್ವೀಕರಿಸಲಾಗಿರುವ 1615 (1000 ಕ್ಕಿಿಂತ ಹೆಚ್ಚು) ಅರ್ಜಿಗಳನ್ನು ನಿಗದಿತ ಅವಧಿಗಿಂತ ಮೊದಲೇ ಶೇ. 100 ರಷ್ಟು ವಿಲೇವಾರಿ ಮಾಡಿದ ನಿಮಿತ್ಯ ಮಾನ್ವಿಿ ನಾಡ ಕಚೇರಿಯು ರಾಜ್ಯ ಮಟ್ಟದಲ್ಲಿ ದ್ವಿಿತೀಯ ಸ್ಥಾಾನ ಪಡೆದಿದೆ.
ಈ ಕುರಿತು ಮಾನ್ವಿಿ ನಾಡ ಕಚೇರಿಯ ಉಪ ತಹಸೀಲ್ದಾಾರ್ ವಿರುಪಣ್ಣ ಇವರಿಗೆ ಕಂದಾಯ ಇಲಾಖೆಯ ಆಯುಕ್ತರಾದ ಸಿ.ಎನ್.ಮೀನಾ ನಾಗರಾಜ ಇವರು ಅಭಿನಂದನಾ ಪತ್ರ ಕಳಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಡಿಸೆಂಬರ್ ತಿಂಗಳಲ್ಲಿ ಸ್ವೀಕೃತವಾಗಿರುವ 1615 ಅರ್ಜಿಗಳನ್ನು ನಿಗದಿತ ಅವಧಿಗಿಂತ ಮೊದಲೇ ಶೇ.100 ರಷ್ಟು ವಿಲೇವಾರಿ ಮಾಡಿ 10 ಸಿಗ್ಮಾಾ ಮೌಲ್ಯವನ್ನು ಪಡೆದಿರುತ್ತೀರಿ. 12.50 ವಿಲೇವಾರಿ ಸೂಚ್ಯಾಾಂಕದ ಪ್ರಕಾರ ತಮ್ಮ ನಾಡ ಕಚೇರಿಯಲ್ಲಿ 13.50 ಪಟ್ಟು ನಿಗದಿತ ಅವಧಿಗಿಂತ ಅರ್ಜಿಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಿ ಡಿಸೆಂಬರ್-2025 ರ ಮಾಹೆಯಲ್ಲಿ ನಿಮ್ಮ ನಾಡ ಕಚೇರಿಯು ರಾಜ್ಯ ಮಟ್ಟದಲ್ಲಿ ದ್ವಿಿತೀಯ ಸ್ಥಾಾನ ಪಡೆದಿರುವುದು ಶ್ಲಾಾಘನೀಯ.
ಮಾನ್ವಿಿ ನಾಡ ಕಚೇರಿಯ ಈ ಕಾರ್ಯ ಸಾಧನೆಗೆ ನಿಮ್ಮ ಹಾಗೂ ಮಾನ್ವಿಿ ನಾಡ ಕಚೇರಿ, ಅಟಲ್ ಜೀ ಜನಸ್ನೇಹಿ ಕೇಂದ್ರದ ಸಿಬ್ಬಂದಿಗಳ ಸಹಕಾರ ಮತ್ತು ಕಾರ್ಯತತ್ಪರತೆ ಕಾರಣವಾಗಿರುತ್ತದೆ. ಆದ್ದರಿಂದ, ಅಟಲ್ಜೀ ಜನಸ್ನೇಹಿ ನಿರ್ದೇಶನಾಲಯದ ಪರವಾಗಿ ನಿಮಗೆ ಹಾಗೂ ಮಾನ್ವಿಿ ನಾಡ ಕಚೇರಿಯ ತಂಡಕ್ಕೆೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿಯೂ ಸಹ ನಿಮ್ಮ ನಾಡ ಕಚೇರಿಯಿಂದ ಇದೇ ರೀತಿ ಸಹಕಾರ ಹಾಗೂ ಕಾರ್ಯಕ್ಷಮತೆಯನ್ನು ನಿರೀಕ್ಷಿಸುವುದಾಗಿ ಉಪ ತಹಸೀಲ್ದಾಾರ್ ವಿರುಪಣ್ಣ ಅವರಿಗೆ ಜ.19 ರಂದು ಇಮೇಲ್ ಮೂಲಕ ಕಳಿಸಿದ ಅಭಿನಂದನಾ ಪತ್ರದಲ್ಲಿ ಕಂದಾಯ ಆಯುಕ್ತರು ತಿಳಿಸಿ ಅಭಿನಂದಿಸಿದ್ದಾರೆ.
ಸನ್ಮಾಾನ: ಅರ್ಜಿ ವಿಲೇವಾರಿಗಳಲ್ಲಿ ಮಾನ್ವಿಿ ನಾಡ ಕಚೇರಿಯು ರಾಜ್ಯ ಮಟ್ಟದಲ್ಲಿ ದ್ವಿಿತೀಯ ಸ್ಥಾಾನ ಪಡೆದ ನಿಮಿತ್ಯ ನಾಡ ಕಚೇರಿಯ ಉಪ ತಹಸೀಲ್ದಾಾರ್ ವಿರುಪಣ್ಣ ಇವರನ್ನು ಸಾಮಾಜಿಕ ಕಾರ್ಯಕರ್ತರಾದ ಸುರೇಶ ಕಾತರಕಿ, ಸೂಗಪ್ಪಗೌಡ ಹರವಿ ಹಾಗೂ ಸಿಬ್ಬಂದಿಗಳು, ಸಾರ್ವಜನಿಕರು ಸನ್ಮಾಾನಿಸಿ ಅಭಿನಂದಿಸಿದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ