Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

224 ಶಾಸಕರಿಗೆ ಪತ್ರ ಬರೆದ ನಿಗಮದ ಅಧ್ಯಕ್ಷ ಎಂ.ರಾಮಪ್ಪ ಭೋವಿ ನಿಗಮದ ಯೋಜನೆಗಳಿಗೆ ಅರ್ಹರ ಆಯ್ಕೆೆ ಮಾಡಲು ಮನವಿ

ಸುದ್ದಿಮೂಲ ವಾರ್ತೆ ಬೆಂಗಳೂರು, ಡಿ.29:
ಸರ್ಕಾರದ ಯೋಜನೆಗಳನ್ನು ಅರ್ಹ ಲಾನುಭವಿಗಳಿಗೆ ತಲುಪಿಸಲು ಶೀಘ್ರ ಲಾನುಭವಿಗಳನ್ನು ಆಯ್ಕೆೆ ಮಾಡಿ ಶಿಾರಸು ಮಾಡುವಂತೆ 224 ಶಾಸಕರಿಗೆ ಪತ್ರ ಬರೆಯಲಾಗಿದೆ ಎಂದು ಕರ್ನಾಟಕ ಭೋವಿ ಅಭಿವೃದ್ಧಿಿ ನಿಗಮದ ಅಧ್ಯಕ್ಷರಾದ ಎಂ. ರಾಮಪ್ಪ ಹೇಳಿದರು.
ಇಂದು ಬೆಂಗಳೂರಿನ ಡಾ.ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿಿ ನಿಗಮದ ಕಚೇರಿಯಲ್ಲಿ ಪತ್ರಿಿಕಾಗೋಷ್ಠಿಿ ಉದ್ದೇಶಿಸಿ ಮಾತನಾಡಿದ ಅವರು, ಭೋವಿ ಅಭಿವೃದ್ಧಿಿ ನಿಗಮದಿಂದ ಸರ್ಕಾರ ನೀಡುತ್ತಿಿರುವ ಯೋಜನೆಗಳನ್ನು ಮಧ್ಯವರ್ತಿಗಳ ಹಾವಳಿಯಿಲ್ಲದೇ ಸಮುದಾಯದ ಅರ್ಹ ಲಾನುಭವಿಗಳಿಗೆ ತಲುಪಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಭೋವಿ ಅಭಿವೃದ್ಧಿಿ ನಿಗಮದ ಅಧಿಕಾರ ವಹಿಸಿಕೊಂಡು ಕೆಲವು ದಿನಗಳು ಕಳೆದಿದ್ದು, ಈ ದಿನಗಳಲ್ಲಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ನಿಗಮದ ಕಾರ್ಯವೈಖರಿಗಳ ಬಗ್ಗೆೆ ಪರಿಶೀಲಿಸಲಾಗಿದೆ. ರಾಜ್ಯದ ಎಲ್ಲಾ 224 ಶಾಸಕರುಗಳಿಗೆ ಪತ್ರ ಬರೆದು ಲಾನುಭವಿಗಳನ್ನು ಶೀಘ್ರವಾಗಿ ಆಯ್ಕೆೆ ಮಾಡಿ ಕಳುಹಿಸಲು ತಿಳಿಸಲಾಗಿದೆ ಎಂದರು.
ಭೋವಿ, ವಡ್ಡರ, ಸಮುದಾಯದ ಏಳಿಗೆಗಾಗಿ ಸರ್ಕಾರವು ಹಲವಾರು ಯೋಜನೆಗಳನ್ನು ರೂಪಿಸಿದೆ. ಈ ಯೋಜನೆಗಳನ್ನು ಬಡವರು, ಕೂಲಿಕಾರ್ಮಿಕರಿಗೆ ತಲುಪಿಸುವ ಕಾರ್ಯ ಮಾಡಲಾಗುತ್ತಿಿದೆ. ಮಹಿಳಾ ಸಬಲೀಕರಣಕ್ಕಾಾಗಿ ಭೂ ಒಡೆತನ ಯೋಜನೆ ಜಾರಿಗೊಳಿಸಲಾಗಿದ್ದು, ಸಮುದಾಯದ ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ನೀಡಲಾಗುವುದು. 2025-26 ನೇ ಸಾಲಿನಲ್ಲಿ 169 ಲಾನುಭವಿಗಳು ಭೂ ಒಡೆತನ ಯೋಜನೆಯ ಲಾನುಭವಿಗಳಾಗಿದ್ದಾರೆ. ಸರ್ಕಾರದಿಂದ ಮಂಜೂರು ಮಾಡಿದ ಭೂಮಿಯನ್ನು ಶಾಶ್ವತವಾಗಿ ಪರಭಾರೆ ಮಾಡುವಂತಿಲ್ಲ ಎಂದು ತಿಳಿಸಿದರು.
ಮೈಕ್ರೋೋ ಕ್ರೆೆಡಿಟ್ ಯೋಜನೆಯಡಿ ಸಮುದಾಯದ ಕನಿಷ್ಟ 10 ಮಹಿಳಾ ಸದಸ್ಯರಿರುವ ಮಹಿಳಾ ಸ್ವಸಹಾಯ ಸಂಘಗಳಿಗೆ ಆದಾಯ ಗಳಿಸುವ ಉತ್ಪಾಾದನಾ ಚಟುವಟಿಕೆಗಳಿಗೆ ನಿಗಮದಿಂದ ನೇರವಾಗಿ 5 ಲಕ್ಷ ರೂ. ಆರ್ಥಿಕ ಸಹಾಯ ಮತ್ತು ಸಾಲಸೌಲಭ್ಯ ನೀಡಲಾಗುವುದು. ಇದರಲ್ಲಿ 2.50 ಲಕ್ಷ ರೂ. ಗಳ ಸಹಾಯಧನ ಮತ್ತು 2.50 ಲಕ್ಷ ರೂ. ಸಾಲವಾಗಿರುತ್ತದೆ. ಸಾಲದ ಮೊತ್ತವನ್ನು 36 ಸಮ ಕಂತುಗಳಲ್ಲಿ ಶೇಕಡ 4 ರ ಬಡ್ಡಿಿ ದರದಲ್ಲಿ ಮರುಪಾವತಿ ಮಾಡಬೇಕಾಗಿರುತ್ತದೆ.
ಬ್ಯಾಾಂಕ್ ಸಹಯೋಗದಲ್ಲಿ ಉದ್ಯಮಶೀಲತೆ ಯೋಜನೆಯಡಿ ಭೋವಿ ಸಮುದಾಯದ ನಿರುದ್ಯೋೋಗ ಯುವಕ - ಯುವತಿಯರಿಗೆ ಆರ್ಥಿಕ ಅಭಿವೃದ್ಧಿಿ ಹೊಂದುವ ಸಲುವಾಗಿ, ಸಣ್ಣ ಕೈಗಾರಿಕೆ ಮತ್ತು ವ್ಯಾಾಪಾರ ಕ್ಷೇತ್ರಗಳಲ್ಲಿ ಸ್ವಯಂ ಉದ್ಯೋೋಗ ಘಟಕಗಳನ್ನು ಆಯೋಜಿಸಲು ಮತ್ತು ಸರಕು ಸಾಗಾಣಿಕೆ ಮತ್ತು ಪ್ರವಾಸಿ ವಾಹನ ಖರೀದಿಸಲು ಸೌಲಭ್ಯ ಕಲ್ಪಿಿಸಲಾಗುವುದು ಎಂದು ವಿವರಿಸಿದರು.
ಸ್ವಾಾವಲಂಭಿ ಸಾರಥಿ ಯೋಜನೆಯಡಿ ಸರಕು ವಾಹನ ಟ್ಯಾಾಕ್ಸಿಿ ಖರೀದಿಸಲು ಶೇಕಡ 75 ರಷ್ಟು ಸಹಾಯಧನ ನೀಡಲಾಗುವುದು. ಈ ಯೋಜನೆಯ ದುರುಪಯೋಗ ತಪ್ಪಿಿಸಲು ಸೌಲಭ್ಯ ಪಡೆದ ಲಾನುಭವಿಗಳ ವಾಹನಗಳ ಮೇಲೆ, ನಿಗಮದ ಲೋಗೋ ಮತ್ತು ಸ್ಟಿಿಕ್ಕರ್ ಅಂಟಿಸಲಾಗುವುದು ಹಾಗೂ ಲಾನುಭವಿಗಳಿಗೆ 3 ತಿಂಗಳಿಗೊಮ್ಮೆೆ ಕಛೇರಿಗೆ ಹಾಜರಾಗುವಂತೆ ತಿಳಿಸಿ ವಾಹನಗಳನ್ನು ಪರಿಶೀಲಿಸಿ ಪೋಟೋಗಳನ್ನು ಅಪ್ಲೋೋಡ್ ಮಾಡುವಂತೆ ಜಿಲ್ಲಾ ವ್ಯವಸ್ಥಾಾಪಕರಿಗೆ ಸೂಚಿಸಲಾಗಿದೆ.
2025-26 ನೇ ಸಾಲಿನಲ್ಲಿ ಸರ್ಕಾರ 93.75 ಕೋಟಿ ರೂ. ಅನುದಾನ ಒದಗಿಸಿದ್ದು, ಇದರಲ್ಲಿ 68.81 ಕೋಟಿ ರೂ. ಬಳಕೆಯಾಗಿದೆ. ಉಳಿದ ಅನುದಾನವನ್ನು ಈ ವರ್ಷದ ಅಂತ್ಯದೊಳಗೆ ಯೋಜನೆಗಳಿಗೆ ವಿನಿಯೋಗಿಸಲಾಗುವುದು. ಈ ವರ್ಷದ ಆಯವ್ಯಯದಲ್ಲಿ 300 ಕೋಟಿ ರೂ.ಗಳ ಅನುದಾನಕ್ಕೆೆ ಪ್ರಸ್ತಾಾವನೆ ಸಲ್ಲಿಸಲಾಗುವುದು ಎಂದು ಹೇಳಿದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ