Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸೋನಿಯಾ, ರಾಹುಲ್, ಡಿಕೆಶಿ ಸೇರಿದಂತೆ ಹಲವರಿಗೆ ನಿರಾಳ ನ್ಯಾಷನಲ್ ಹೆರಾಲ್‌ಡ್‌ ಪ್ರಕರಣ : ಇಡಿ ಚಾರ್ಜ್ ಶೀಟ್ ಪರಿಗಣಿಸಲು ದೆಹಲಿ ಕೋರ್ಟ್ ನಿರಾಕರಣೆ

ಸುದ್ದಿಮೂಲ ವಾರ್ತೆ ನವದೆಹಲಿ, ಡಿ.16:
ನ್ಯಾಾಷನಲ್ ಹೆರಾಲ್ಡ್ ಸಂಬಂಧಿತ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆೆಸ್ ಹಿರಿಯ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಹಾಗೂ ಇತರರ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಸಲ್ಲಿಸಿದ್ದ ಆರೋಪಪಟ್ಟಿಿಯನ್ನು ಪರಿಗಣಿಸಲು ದೆಹಲಿ ನ್ಯಾಾಯಾಲಯ ನಿರಾಕರಿಸಿದೆ.
ವಿಶೇಷ ನ್ಯಾಾಯಾಧೀಶರಾದ ವಿಶಾಲ್ ಗೋಗಾನೆ ಅವರು ಇಡಿ ಸಲ್ಲಿಸಿದ ಆರೋಪ ಪಟ್ಟಿಿಯನ್ನು ವಿಚಾರಣೆಗೆ ತೆಗೆದುಕೊಳ್ಳಲು ನಿರಾಕರಿಸಿದ ನ್ಯಾಾಯಾಲಯವು ಅಂತಿಮ ತೀರ್ಪು ಪ್ರಕಟಿಸಲಿದೆ.
2014ರ ಜುಲೈ 4ರಂದು ಸುಬ್ರಮಣಿಯನ್ ಸ್ವಾಾಮಿ ಏಜೆನ್ಸಿಿಗೆ ಸಲ್ಲಿಸಿದ್ದ ದೂರಿನ ಪ್ರತಿಯನ್ನು 2021ರ ಜೂನ್ 30 ದಾಖಲೆಯ ಪ್ರತಿಯೊಂದಿಗೆ ಇಡಿ ಕಳೆದ ಸೆಪ್ಟಂಬರ್ 6ರಂದು ನ್ಯಾಾಯಾಲಯಕ್ಕೆೆ ಸಲ್ಲಿಸಿತ್ತು. ವಿಚಾರಣೆಯ ಸಮಯದಲ್ಲಿ, ಕಾಂಗ್ರೆೆಸ್‌ಗೆ ದೇಣಿಗೆ ನೀಡಿದವರಿಗೆ ವಂಚನೆ ಮಾಡಲಾಗಿದೆ ಎಂದು ಇಡಿ ವಾದಿಸಿತು. ಪಕ್ಷಕ್ಕೆೆ ದೇಣಿಗೆ ನೀಡಿದ ಕೆಲವು ವ್ಯಕ್ತಿಿಗಳಿಗೆ ನಂತರ ಚುನಾವಣಾ ಟಿಕೆಟ್‌ಗಳನ್ನು ನೀಡಲಾಯಿತು ಎಂದು ಸಂಸ್ಥೆೆ ತಿಳಿಸಿದೆ.
ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್) ಮೇಲೆ ತಮಗೆ ಯಾವುದೇ ನಿಯಂತ್ರಣವಿಲ್ಲ ಎಂಬ ಗಾಂಧಿ ಕುಟುಂಬದ ವಾದವನ್ನು ಇಡಿ ಪರ ವಕೀಲ ರಾಜು ವಿರೋಧಿಸಿದರು. ಎಜೆಎಲ್ ಮೂಲತಃ ನ್ಯಾಾಷನಲ್ ಹೆರಾಲ್ಡ್ ಪತ್ರಿಿಕೆ ಪ್ರಕಾಶಕವಾಗಿದೆ ಎಂದು ಅವರು ವಾದಿಸಿದರು.
ರಾಹುಲ್ ಗಾಂಧಿ ಪರ ಹಾಜರಾದ ಹಿರಿಯ ವಕೀಲ ಆರ್.ಎಸ್. ಚೀಮಾ, ಕಾಂಗ್ರೆೆಸ್ ಎಂದಿಗೂ ಎಜೆಎಲ್ ಅನ್ನು ಮಾರಾಟ ಮಾಡಲು ಪ್ರಯತ್ನಿಿಸಲಿಲ್ಲ. ಬದಲಿಗೆ ಅದು ಸ್ವಾಾತಂತ್ರ್ಯ ಚಳವಳಿಯ ಭಾಗವಾಗಿದ್ದರಿಂದ ಅದನ್ನು ಉಳಿಸಲು ಪ್ರಯತ್ನಿಿಸಿತು ಎಂದು ವಾದಿಸಿದರು.
ಎಜೆಎಲ್‌ನ ಮೆಮೊ ರೆಂಡಮ್ ಆ್ ಅಸೋಸಿ ಯೇಷನ್ ಅನ್ನು ಇಡಿ ಏಕೆ ಪ್ರಸ್ತುತಪಡಿಸುತ್ತಿಿಲ್ಲ ಎಂದು ಚೀಮಾ ಪ್ರಶ್ನಿಿಸಿದರು. ಎಜೆಎಲ್ ಅನ್ನು 1937 ರಲ್ಲಿ ಜವಾಹರಲಾಲ್ ನೆಹರು, ಜೆ ಬಿ ಕೃಪಲಾನಿ, ರಫಿ ಅಹ್ಮದ್ ಕಿದ್ವಾಾಯಿ ಮತ್ತು ಇತರ ಕಾಂಗ್ರೆೆಸ್ ನಾಯಕರು ಸ್ಥಾಾಪಿಸಿದರು. ಎಜೆಎಲ್‌ನ ನೀತಿಗಳು ಕಾಂಗ್ರೆೆಸ್‌ನ ನೀತಿಗಳೊಂದಿಗೆ ಹೊಂದಿಕೆಯಾಗುತ್ತವೆ ಎಂದು ಮೆಮೊರೆಂಡಮ್ ಆ್ ಅಸೋಸಿಯೇಷನ್ ಸ್ಪಷ್ಟವಾಗಿ ಹೇಳುತ್ತದೆ ಎಂದು ತಿಳಿಸಿದರು.
ಸೋನಿಯಾ ಗಾಂಧಿ ಪರ ವಾದಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿಿ, ಇಡಿ ಆಶ್ಚರ್ಯ ಮತ್ತು ಅನಿರೀಕ್ಷಿತ ಪ್ರಕರಣವನ್ನು ನಿರ್ಮಿಸುತ್ತಿಿದೆ. ಸಂಸ್ಥೆೆ ಅಚ್ಚರಿಗಿಂತ ಮೀರಿ ಸಾಗಿದೆ. ಮನಿ ಲಾಂಡರಿಂಗ್ ಅಂಶದಲ್ಲಿ ಯಾವುದೇ ಆಸ್ತಿಿಯನ್ನು ಉಲ್ಲೇಖಿಸಿಲ್ಲ. ಯಂಗ್ ಇಂಡಿಯಾ ಲಿಮಿಟೆಡ್ ಲಾಭೇತರ ಸಂಸ್ಥೆೆಯಾಗಿದ್ದು, ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ಅನ್ನು ಸಾಲ ಮುಕ್ತಗೊಳಿಸಲು ಮಾತ್ರ ಕಾರ್ಯನಿರ್ವಹಿಸಿದೆ. ಪ್ರತಿಯೊಂದು ಕಂಪನಿಯು ಸಾಲದಿಂದ ಮುಕ್ತವಾಗಲು ಕಾನೂನುಬದ್ಧ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಜಾರಿ ನಿರ್ದೇಶನಾಲಯವು ವರ್ಷಗಳಿಂದ ನಿಷ್ಕ್ರಿಿಯವಾಗಿದೆ. ಕೇವಲ ಖಾಸಗಿ ದೂರಿನ ಆಧಾರದ ಮೇಲೆ ವಿಚಾರಣೆ ಪ್ರಾಾರಂಭಿಸಿದೆ ಎಂದರು.
ಮೇ 2ರಂದು ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಇತರೆ ಐವರು ಆರೋಪಿಗಳ ವಿರುದ್ಧ ಕೋರ್ಟ್ ನೋಟಿಸ್ ಜಾರಿ ಮಾಡಿತು. ಏಪ್ರಿಿಲ್ 5ರಂದು ಇಡಿ ಪ್ರಾಾಸಿಕ್ಯೂಷನ್ ದೂರು ದಾಖಲಿಸಿತ್ತು. ಅದರಲ್ಲಿ ಸೋನಿಯಾ ಗಾಂಧಿ ಮತ್ತು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಸ್ಯಾಾಮ್ ಪಿತ್ರೋೋಡಾ ಅವರನ್ನು ಆರೋಪಿಗಳನ್ನಾಾಗಿಸಿದ್ದು, ಪಿಎಂಎಲ್ಎ ಸೆಕ್ಷನ್ 44 ಮತ್ತು 45ರ ಅಡಿ ದೂರು ದಾಖಲಿಸಿತ್ತು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ