Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಈಡಿಗ ಸಮಾಜದ ಬೇಡಿಕೆಗಳ ಈಡೇರಿಕೆಗಾಗಿ 700 ಕಿ.ಮೀ ಐತಿಹಾಸಿಕ ಪಾದಯಾತ್ರೆೆ-ಡಾ.ಶ್ರೀ ಪ್ರಣವಾನಂದ ಸ್ವಾಾಮೀಜಿ

ಸುದ್ದಿಮೂಲ ವಾರ್ತೆ ಮಾನ್ವಿ, ಜ.17:
26 ಪಂಗಡಗಳನ್ನು ಹೊಂದಿದ ಈಡಿಗ ಸಮಾಜದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಜನವರಿ 6 ನೇ ತಾರೀಖಿನಂದು ಚಿತ್ತಾಾಪೂರದ ಬ್ರಹ್ಮಶ್ರೀ ನಾರಾಯಣಗುರು ಶಕ್ತಿಿ ಪೀಠ ಕರದಾಳನಿಂದ ಬೆಂಗಳೂರುವರೆಗೆ 41 ದಿನಗಳ 700 ಕಿ.ಮೀ ಐತಿಹಾಸಿಕ ಪಾದಯಾತ್ರೆೆ ಹಮ್ಮಿಿಕೊಳ್ಳಲಾಗಿದೆ ಎಂದು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಿ ಪೀಠದ ಪೀಠಾಧಿಪತಿ ಡಾ.ಶ್ರೀ ಪ್ರಣವಾನಂದ ಸ್ವಾಾಮೀಜಿ ತಿಳಿಸಿದರು.
ಶನಿವಾರ ಪಾದಯಾತ್ರೆೆ ಮೂಲಕ ಮಾನ್ವಿಿಗೆ ಆಗಮಿಸಿದ ಅವರು ಪತ್ರಿಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿಿದ್ದರು.
700 ಕಿ.ಮೀ 41 ದಿನಗಳ ಪಾದಯಾತ್ರೆೆಯು ೆ.2 ರಂದು ಬೆಂಗಳೂರಿನ ಫ್ರೀೀಡಂ ಪಾರ್ಕಿನಲ್ಲಿ ಸಮಾವೇಶಗೊಳ್ಳುವುದು. ಈ ಸಮಾವೇಶದಲ್ಲಿ ನಮ್ಮ ಬೇಡಿಕೆಗಳ ಕುರಿತು ಮುಖ್ಯಮಂತ್ರಿಿಗಳಿಗೆ ಮನವಿ ಸಲ್ಲಿಸಲಾಗುವುದು. ಪ್ರಮುಖ ಬೇಡಿಕೆಗಳಾದ ನಮ್ಮ ಸಮುದಾಯವನ್ನು ಈಗಿರುವ 2 ಎ ಯಿಂದ ಎಸ್.ಟಿ ಮೀಸಲಾತಿ ನೀಡುವುದಕ್ಕೆೆ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆೆ ಶಿಾರಸ್ಸು ಮಾಡಬೇಕು, ನಮ್ಮ ಸಮುದಾಯದ ಕುಲ ಕಸುಬಾಗಿರುವ ಸೇಂದಿ ಇಳಿಸುವುದನ್ನು ಉಡುಪಿ, ಮಂಗಳೂರಿನಂತೆ ಎಲ್ಲಾ ಜಿಲ್ಲೆಗಳಲ್ಲಿ ಅನುಮತಿ ನೀಡಬೇಕು, ಕುಲ ಕಸುಬು ಕಳೆದು ಕೊಂಡಿರುವ ಕಲ್ಯಾಾಣ ಕರ್ನಾಟಕದ ಸಂತ್ರಸ್ತ ಈಡಿಗ ಸಮುದಾಯದ ಪ್ರತಿ ಕುಟುಂಬಕ್ಕೆೆ 5 ಎಕರೆ ಕೃಷಿ ಜಮೀನು ಮಂಜೂರು ಮಾಡಬೇಕು, ಬ್ರಹ್ಮಶ್ರೀ ನಾರಾಯಣಗುರು ಅಭಿವೃದ್ದಿ ನಿಗಮಕ್ಕೆೆ 500 ಕೋಟಿ ರೂ. ಅನುದಾನ ಬಿಡುಗಡೆ ಮಾಡಬೇಕು, ಬೆಂಗಳೂರಿನ ವಿಧಾನಸೌಧದ ಆವರಣದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ಪುತ್ಥಳಿ ಸ್ಥಾಾಪಿಸಬೇಕು, ಈಡಿಗ ಸಮಾಜದ ಶ್ರದ್ದಾ ಕೇಂದ್ರವಾದ ಶ್ರೀ ಸಿಗಂದೂರು ಚೌಡೇಶ್ವರಿ ದೇವಸ್ಥಾಾನಕ್ಕೆೆ ಸೂಕ್ತವಾದ ಭದ್ರತೆಯನ್ನು ನೀಡಿ ಅಗತ್ಯ ಭೂಮಿ ಮಂಜೂರು ಮಾಡಬೇಕು, ಮದ್ಯ ಮಾರಾಟದಲ್ಲಿ ಸಮುದಾಯದ 26 ಪಂಗಡಗಳಿಗೆ ಶೇ. 50 ರಷ್ಟು ಮೀಸಲಾತಿ ನೀಡಬೇಕು, ಕೋಟಿ ಚೆನ್ನಯ್ಯರ ಹೆಸರನ್ನು ಮಂಗಳೂರು ವಿಮಾನ ನಿಲ್ದಾಾಣಕ್ಕೆೆ ಇಡುವುದಕ್ಕೆೆ ಕೇಂದ್ರಕ್ಕೆೆ ಶಿಾರಸ್ಸು ಮಾಡಬೇಕು, ಶರಣ ಕೋಟಿ ಚೆನ್ನಯ್ಯರ ಜನ್ಮಸ್ಥಳ ಮತ್ತು ಐಕ್ಯಸ್ಥಳಗಳ ಅಭಿವೃದ್ದಿಗೆ 100 ಕೋಟಿ ಅನುದಾನ ನೀಡಬೇಕು, ನಾರಾಯಣ ಗುರುಗಳ ಅಧ್ಯಯನ ಪೀಠವನ್ನು ವಿಶ್ವವಿದ್ಯಾಾಲಯಗಳಲ್ಲಿ ಸ್ಥಾಾಪಿಸಬೇಕು, ಹಾಗೂ ವಿಶ್ವವಿದ್ಯಾಾಲಯಕ್ಕೆೆ ಬ್ರಹ್ಮಶ್ರೀ ನಾರಾಯಣಗುರುಗಳ ಹೆಸರನ್ನು ಘೋಷಣೆ ಮಾಡಬೇಕು, ಬ್ರಹ್ಮಶ್ರೀ ನಾರಾಯಣಗುರುಗಳ ಜಯಂತಿಯಂದು ಅವರ ಹೆಸರನ್ನು ಒಳಗೊಂಡ ರಾಜ್ಯ ಮಟ್ಟದ 5 ಲಕ್ಷ ನಗದು ಪುರಸ್ಕಾಾರ ಹೊಂದಿದ ಪ್ರಶಸ್ತಿಿಯನ್ನು ಸಮುದಾಯದ ಸಾಧಕರಿಗೆ ನೀಡಬೇಕು, ಉತ್ತರ ಕನ್ನಡ ಭಾಗದಲ್ಲಿನ ಅರಣ್ಯ ಪ್ರದೇಶದಲ್ಲಿ ಉಳುಮೆ ಮಾಡಿಕೊಂಡಿರುವ ಹಾಗೂ ಮನೆಗಳನ್ನು ಕಟ್ಟಿಿಕೊಂಡಿರುವ ಸಮುದಾಯದವರಿಗೆ ಸಕ್ರಮ ಗೊಳಿಸಬೇಕು, ಶರಣರಾದ ಹೆಂಡದ ಮಾರಯ್ಯನವರ ಜಯಂತಿಯನ್ನು ಸರ್ಕಾರದಿಂದ ಆಚರಣೆ ಮಾಡಬೇಕು, ಶಿವಮೊಗ್ಗ ಜಿಲ್ಲೆಯ ಹೊಸನಗರ ಕ್ಷೇತ್ರವನ್ನು ವಿಧಾನಸಭಾ ಕ್ಷೇತ್ರವನ್ನಾಾಗಿಸಬೇಕು ಹಾಗೂ ಜಿಲ್ಲೆಯಲ್ಲಿನ ಮುಳುಗಡೆ ಸಂತ್ರಸ್ಥರಿಗೆ ಸೂಕ್ತ ಪರಿಹಾರ ವಸತಿ ಕಲ್ಪಿಿಸಿ ಕೃಷಿ ಜಮೀನು ನೀಡಬೇಕು, ರಾಜ್ಯದಲ್ಲಿ ಸಮುದಾಯದವರಿಗೆ ವಿವಿಧ ವಸತಿ ಯೋಜನೆಗಳಡಿಯಲ್ಲಿ 25 ಸಾವಿರ ಮನೆಗಳನ್ನು ಮಂಜೂರು ಮಾಡಬೇಕು ಸಮುದಾಯದ ಟ್ರಸ್ಟ್ ವೊಂದಕ್ಕೆೆ ವೈದ್ಯ ಕಾಲೇಜು ಮಂಜೂರು ಮಾಡಬೇಕು, ರಾಜ್ಯದ ಶಿವಮೊಗ್ಗ, ಮಂಗಳೂರು, ಕಾರವಾರ, ಉಡುಪಿ, ಜಿಲ್ಲೆಯಲ್ಲಿ 5 ಎಕರೆ ಜಮೀನಿನಲ್ಲಿ ಐಎಎಸ್, ಕೆಎಎಸ್, ಐಪಿಎಸ್ ಸೇರಿದಂತೆ ಉನ್ನತ ಆಡಳಿತ ತರಬೇತಿ ಕೇಂದ್ರಗಳನ್ನು ಸ್ಥಾಾಪಿಸಬೇಕು ಎನ್ನುವ ಪ್ರಮುಖ ಬೇಡಿಕೆಗಳನ್ನು ಸರಕಾರದ ಮುಂದೆ ಇಟ್ಟು ಒತ್ತಾಾಯಿಸಲಾಗುವುದು ಎಂದು ಸ್ವಾಾಮೀಜಿಗಳು ತಿಳಿಸಿದರು.
ಪತ್ರಿಿಕಾಗೋಷ್ಠಿಿಯಲ್ಲಿ ಈಡಿಗ ಸಮುದಾಯದ ಮುಖಂಡರಾದ ಶ್ರೀರಾಮುಲು ನೀರಮಾನ್ವಿಿ, ಲಕ್ಷ್ಮಣ ಮಾನ್ವಿಿ, ಹನುಮಂತ ವಲ್ಕಂದಿನ್ನಿಿ, ಚಂದ್ರಶೇಖರ, ಆಶೋಕ ಚಾಗಭಾವಿ, ಆಶೋಕ ಮುಸ್ಟೂರು, ಶರಣಬಸವ ನೀರಮಾನ್ವಿಿ, ಸತ್ಯಪ್ಪ ಮಾನ್ವಿಿ, ಗುರುರಾಜ ಜೂಕೂರು, ಎಸ್.ರಂಗನಾಥ, ವಿನೋದ, ದೇವಪ್ಪ ಸಾದಾಪುರ ಸೇರಿದಂತೆ ಇನ್ನಿಿತರರು ಇದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ