Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕಾರ್ಖಾನೆ ತ್ಯಾಜ್ಯ ನೀರು ನದಿ, ಹಳ್ಳಗಳಿಗೆ ಬಿಟ್ಟರೆ ಕ್ರಮ: ಖಂಡ್ರೆ

 ಸುದ್ದಿಮೂಲ ವಾರ್ತೆ ಬೆಂಗಳೂರು, ಜ.29:
ರಾಜ್ಯದ ಯಾವುದೇ ಕಾರ್ಖಾನೆಗಳು ತ್ಯಾಾಜ್ಯ ನೀರುಗಳನ್ನು ನದಿ, ಹಳ್ಳಗಳಿಗೆ ಬಿಡದಂತೆ ನಿರ್ಬಂಧ ಹೇರಲಾಗಿದೆ. ಇದನ್ನು ಉಲ್ಲಂಘಿಸುವ ಕಾರ್ಖಾನೆಗಳ ವಿರುದ್ಧ ಜಲ ಕಾಯ್ದೆೆಯಡಿ ಕ್ರಮ ಕೈಗೊಳ್ಳಲಾಗುತ್ತಿಿದೆ ಎಂದು ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆೆ ಹೇಳಿದರು.
ವಿಧಾನಸಭೆಯ ಪ್ರಶ್ನೋೋತ್ತರ ಅವಧಿಯಲ್ಲಿ ಬಿಜೆಪಿಯ ಹರೀಶ್ ಅವರು ವಿಜಯನಗರ ಜಿಲ್ಲೆಯ ಹರಪನಹಳ್ಳಿಿ ತಾಲ್ಲೂಕು ದುಗ್ಗಾಾವತಿ ಗ್ರಾಾಮದ ವ್ಯಾಾಪ್ತಿಿಯಲ್ಲಿ ಶಾಮನೂರು ಶುಗರ್ಸ್ ಲಿ. ಮತ್ತು ಇಂಡಿಯನ್ ಕೇನ್ ಪವರ್ ಲಿ. ಕಾರ್ಖಾನೆಗಳು ಕೊಳಚೆ ನೀರನ್ನು ಹಳ್ಳಗಳಿಗೆ ಬಿಟ್ಟು ಅದು ತುಂಗಭದ್ರಾಾ ನದಿ ಸೇರುವ ಹಾಗೆ ಮಾಡಿದ್ದಾರೆ. ಈ ಬಗ್ಗೆೆ ಸರ್ಕಾರ ಕ್ರಮ ಕೈಗೊಂಡಿಲ್ಲ. ಸದನದಲ್ಲಿ ನೀಡಿರುವ ಉತ್ತರವೂ ತಪ್ಪಾಾಗಿದೆ ಎಂದು ಹೇಳಿದಾಗ, ಸಚಿವ ಈಶ್ವರಖಂಡ್ರೆೆ ಅವರು, ಉತ್ತರ ತಪ್ಪುು ನೀಡಿದ್ದರೆ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಕಾರ್ಖಾನಗಳು ತ್ಯಾಾಜ್ಯ ನೀರನ್ನು ನದಿ ಹಾಗೂ ಹಳ್ಳಗಳಿಗೆ ಬಿಡಬಾರದು ಎಂದು ನಿರ್ಬಂಧ ವಿಧಿಸಲಾಗಿದೆ. ಇದರ ವಿರುದ್ಧ ಸೂಕ್ತ ಕೈಗೊಳ್ಳುತ್ತೇವೆ ಎಂದರು.
ಶಾಮನೂರು ಶುಗರ್ ಲಿ., ಇಂಡಿಯನ್ ಕೇನ್ ಪವರ್ ಲಿ. ಕಾರ್ಖಾನೆಗಳಿಗೆ ಮಾಲಿನ್ಯ ಉಂಟಾಗುತ್ತಿಿರುವ ಕುರಿತು ಕಳೆದ ಎರಡು ವರ್ಷಗಳ ಅವಧಿಯಲ್ಲಿ ಯಾವುದೇ ಲಿಖಿತ ದೂರು ಬಂದಿಲ್ಲ. ಇದೇ ಜನವರಿ 26 ರಂದು ವಿಜಯನಗರ ಪ್ರಾಾದೇಶಿಕ ಅಧಿಕಾರಿಯ ಶಾಮನೂರು ಶುರ್ಗ ಲಿ. ಇಂಡಿಯನ್ ಕೇನ್ ಪವರ್ ಘಟಕಗಳನ್ನು ಪರಿವೀಕ್ಷಿಸಿದ್ದು, ಪರಿವೀಕ್ಷಣೆ ಸಂದರ್ಭದಲ್ಲಿ ಶಾಮನೂರು ಶುಗರ್ ಲಿ. ಘಟಕವು ಕಾರ್ಯನಿರ್ವಹಿಸುತ್ತಿಿಲ್ಲ ಎಂದು ಹೇಳಿದ್ದಾರೆ. ಇಂಡಿಯನ್ ಕೇನ್ ಲಿ. ಕಾರ್ಯನಿರ್ವಹಿಸುತ್ತಿಿದ್ದು, ತ್ಯಾಾಜ್ಯ ನೀರನ್ನು ಹದ್ದಿನಗಿಡಗ ಹಳ್ಳಕ್ಕೆೆ ವಿಸರ್ಜಿಸದ್ದು ಕಂಡು ಬಂದಿದೆ. ತ್ಯಾಾಜ್ಯ ನೀರಿನ ಮಾದರಿಯನ್ನು ಸಂಗ್ರಹಿಸಿ ಮಂಡಳಿಯ ಪ್ರಯೋಗ ವಿಶ್ಲೇಷಣೆಗೆ ಸಲ್ಲಿಸಲಾಗಿದೆ. ವರದಿ ಬಂದ ನಂತರ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಅವರು ಹೇಳಿದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ