Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಂಗೀತ ಸಮ್ಮೇಳನ ಸಮಾರೋಪ ಮೊಬೈಲ್‌ಗೀಳು ತಪ್ಪಿಸಲು ಸಂಗೀತ ಕಲಿಸಿ - ಇಲ್ಲೂರು ಗೋಪಾಲಯ್ಯ

ಸುದ್ದಿಮೂಲ ವಾರ್ತೆ ರಾಯಚೂರು , ಡಿ.15:
ಮಕ್ಕಳಿಗೆ ಮೊಬೈಲ್ ಗೀಳಿನಿಂದ ಹೊರ ತರಲು ಸಂಗೀತದ ಅಭಿರುಚಿ ಹಚ್ಚಿಿಸಬೇಕು ಎಂದು ವರ್ತಕರಾದ ಇಲ್ಲೂರು ಅನಂತ ಗೋಪಾಲಯ್ಯ ಶೆಟ್ಟಿಿ ಹೇಳಿದರು.
ನಗರದ ಸೋಮವಾರಪೇಟೆ ಮಠದಲ್ಲಿ ಡಾ.ಪಂ. ಪುಟ್ಟರಾಜ ಕವಿ ಗವಾಯಿಗಳವರ 15ನೇ ವರ್ಷದ ಪುಣ್ಯಸ್ಮರಣೆಯ ನಿಮಿತ್ಯ ಎರಡು ದಿನಗಳ ಸಂಗೀತ ಸಮ್ಮೇಳನದ ಕೊನೆಯ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊೊಂಡು ಮಾತನಾಡಿದರು. ಶರಣ ಸಂತರ, ಗವಾಯಿಗಳವರ ಕಾರ್ಯಕ್ರಮಗಳನ್ನು ಹೆಚ್ಚೆೆಚ್ಚು ಆಯೋಜಿಸಿ ಚಿಕ್ಕ ಮಕ್ಕಳು ಹಾಗೂ ಯುವ ಪೀಳಿಗೆ ಮೊಬೈಲ್ ವ್ಯಸನಿಗಳಾಗುವುದನ್ನು ತಪ್ಪಿಿಸಬೇಕು ಎಂದರು.
ಪಂ. ಸೂಗೂರೇಶ ಅಸ್ಕಿಿಹಾಳ ಮಾತನಾಡಿ, ಒಬ್ಬ ಕಲಾವಿದ ಶ್ರೇಷ್ಠ ಸಂಗೀತಗಾರನಾಗಿ ಬೆಳೆಯಬೇಕಾದರೆ ಉತ್ತಮ ಗುರುವಿನ ಹತ್ತಿಿರ ಕಠಿಣ ಅಭ್ಯಾಾಸ ಮಾಡಿರಬೇಕು. ಇತ್ತೀಚೆಗೆ ಮಾಧ್ಯಮಗಳಲ್ಲಿ ಮತ್ತು ಯು ಟ್ಯೂಬ್ ಗಳಲ್ಲಿ ಪುಟ್ಟ ಮಕ್ಕಳು ಉತ್ತಮವಾಗಿ ಹಾಡುತ್ತಾಾರೆ ಅವರಿಗೆ ಒಳ್ಳೇ ಗುರುಗಳ ಅವಶ್ಯಕತೆ ಇದೆ ಎಂದರು.
ಹಾಡುಗಾರರೆಲ್ಲರೂ ಶ್ರೇಷ್ಠ ಗಾಯಕರಾಗಲು ಸಾಧ್ಯವಿಲ್ಲ, ಒಬ್ಬ ಕಲಾವಿದನನ್ನು ಬೆಳೆಸುವ ಗುಣ ಗುರುವಿನಲ್ಲಿರುತ್ತದೆ. ತಮ್ಮ ಮಕ್ಕಳಿಗೆ ಸಂಗೀತ ಅಭ್ಯಾಾಸ ಮಾಡಿಸುವುದಾದರೆ ಒಬ್ಬ ಗುರುವಿನ ಹತ್ತಿಿರ ಸಂಗೀತ ಕಲಿಸಿ ಆಗ ಆತನ ಬದುಕು ಬಂಗಾರವಾಗುತ್ತದೆ ಎಂದು ಪಾಲಕರಿಗೆ ಹೇಳಿದರು.
ನಂತರ ಪಂ.ಡಾ.ನರಸಿಂಹಲು ವಡವಾಟಿ, ಪಂ.ಸೂಗೂರೇಶ ಅಸ್ಕಿಿಹಾಳ, ರೇವಣಸಿದ್ಧ ಪುಂಡಲೀಕ ಪುಲಾರಿ, ವಿರುಪಾಕ್ಷಯ್ಯ ಸ್ವಾಾಮಿ ವಂದಲಿ, ಸಮೀರಣ ಜೋಶಿ, ಕುಮಾರಿ ಪೂರ್ವಿ ಅರಳಿಕಟ್ಟಿಿ ಸೇರಿ ಹಲವರು ಎರಡನೇ ದಿನದ ಸಂಗೀತ ಕಾರ್ಯಕ್ರಮ ಪ್ರಸ್ತುತ ಪಡಿಸಿದರು.
ಈ ಸಂದರ್ಭದಲ್ಲಿ ಡಾ.ಪಂ. ಪುಟ್ಟರಾಜ ಸಾಂಸ್ಕೃತಿಕ ಟ್ರಸ್ಟಿಿನ ಅಧ್ಯಕ್ಷ ಈರಣ್ಣ ಹೂಗಾರ ಜಾಲಿಬೆಂಚಿ, ಪಿ. ಚಿನ್ನಯ್ಯ ಸ್ವಾಾಮಿ, ಎ.ಎಸ್.ರಘುಕುಮಾರ, ಚೇತನಕುಮಾರ, ಕಲಾವಿದರು, ಕಲಾಭಿಮಾನಿಗಳು, ಸ್ಥಳಿಯ ಕಲಾವಿದರು, ಸಾರ್ವಜನಿಕರು ಮಹಿಳೆಯರು ಉಪಸ್ಥಿಿತರಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ