Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕಸಾಪ ದತ್ತಿ ಉಪನ್ಯಾಸ ಮಾಲಿಕೆ, ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆ ಕೋಮು ಸಂಘರ್ಷ ಪ್ರಜಾಪ್ರಭುತ್ವಕ್ಕೆ ಮಾರಕ - ಮುರ್ತುಜಾ

ಸುದ್ದಿಮೂಲ ವಾರ್ತೆ ಸಿಂಧನೂರು, ಡಿ.14
ಭಾರತೀಯರಲ್ಲಿ ಸಮಾನತೆ, ಪ್ರಜಾಸತ್ತಾಾತ್ಮಕ, ಭ್ರಾಾತೃತ್ವ ಭಾವನೆ, ಸೌಹಾರ್ದತೆ ಮತ್ತು ರಾಷ್ಟ್ರಪ್ರೇೇಮ ಅಳವಡಿಸಿಕೊಂಡರೆ ಸಮೃದ್ಧ ದೇಶ ನಿರ್ಮಾಣವಾಗುತ್ತದೆ. ಕೋಮು ಸಂಘರ್ಷದ ಭಾವನೆ ಪ್ರಜಾಪ್ರಭುತ್ವ ವ್ಯವಸ್ಥೆೆಗೆ ಮಾರಕವಾಗಿದೆ ಎಂದು ಉಪನ್ಯಾಾಸಕ ಮಮ್ಮದ್ ಅಲಿ ಮುರ್ತುಜಾ ಹೇಳಿದರು.
ಮೆಟ್ರಿಿಕ್ ಪೂರ್ವ ಬಾಲಕಿಯರ ಅಂಬೇಡ್ಕರ್ ವಸತಿ ನಿಲಯದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಾ ಹಾಗೂ ತಾಲೂಕಾ ಘಟಕಗಳಿಂದ ಹಮ್ಮಿಿಕೊಂಡಿದ್ದ ದಿ.ಬಸಪ್ಪ ಪಿ, ದಿ.ಚನ್ನನಗೌಡ ಪಾಟೀಲ್ ದತ್ತಿಿ ಉಪನ್ಯಾಾಸ ಮಾಲಿಕೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಾಸ ನೀಡಿದರು. ಸಮಾಜದಲ್ಲಿ ಏಕತೆ, ಸೌಹಾರ್ದತೆ ಮರೆಯಾಗುತ್ತಿಿದೆ. ಅಸಹಿಷ್ಣುತೆ, ಪೂರ್ವಗ್ರಹ, ಹಿಂಸೆಗಳು ತಾಂಡವವಾಡುತ್ತಿಿವೆ. ಶಾಂತಿ, ನೆಮ್ಮದಿ ಇಲ್ಲದ ಸಮಾಜ ಎಂದಿಗೂ ಆರ್ಥಿಕವಾಗಿ ಪ್ರಗತಿ ಸಾಧಿಸಲಾರದು. ಭಾರತದಲ್ಲಿ ಧಾರ್ಮಿಕ ಸಾಮರಸ್ಯದ ಸುಂದರ ಉದಾಹರಣೆಗಳನ್ನು ಹುಡುಕಲು ನಾವು ಸುತ್ತಲೂ ನೋಡಬೇಕಾಗಿತ್ತು. ಅಲ್ಲಿ ವಿವಿಧ ಧರ್ಮಗಳ ಜನರು ಮಾನವೀಯತೆಯ ಮನೋಭಾವದಿಂದ ಒಟ್ಟುಗೂಡುತ್ತಾಾರೆ. ಭಾರತದ ವೈವಿಧ್ಯತೆ ಮತ್ತು ಸಹಿಷ್ಣುತೆಯ ಶ್ರೀಮಂತ ಪರಂಪರೆ ಹೊಂದಿದೆ ಎಂದರು.
ನಗರಸಭೆ ಮಾಜಿ ಅಧ್ಯಕ್ಷೆ ಮಂಜುಳಾ ಪಾಟೀಲ್ ಮಾತನಾಡಿ, ಕಲಿಕೆಯೆ ಸಾಧನೆಯ ಮೂಲ ಭದ್ರ ಬುನಾದಿಯಾಗಿದೆ. ಮಕ್ಕಳು ಚೆನ್ನಾಾಗಿ ವಿದ್ಯಾಾಭ್ಯಾಾಸ ಮಾಡಿ ಸಾಧಕರ ಸಾಲಿಗೆ ಯುವ ಜನಾಂಗ ಮುಂದೆ ಬರಬೇಕು ಎಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮವನ್ನು ವೆಂಕಟೇಶ ಉದ್ಘಾಾಟಿಸಿದರು. ಕಸಾಪ ಅಧ್ಯಕ್ಷ ಹೆಚ್.ಎ್.ಮಸ್ಕಿಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅನ್ವಿಿತಾ ಕಾಲೇಜಿನ ಆಡಳಿತ ಅಧಿಕಾರಿ ಗಂಗನಗೌಡ ಪೊಲೀಸ್ ಪಾಟೀಲ್, ವರ್ತಕ ಅಮರೇಶ ಮಾಡಸಿರವಾರ, ಉದಯವಾಣಿ ವರದಿಗಾರ ಯಮನಪ್ಪ ಪವಾರ, ಮುಖಂಡ ವೆಂಕಟೇಶ ನಂಜಲದಿನ್ನಿಿ, ನಿವೃತ್ತ ಶಿಕ್ಷಕರಾದ ಚಂದ್ರಶೇಖರ ಕಗ್ಗೋೋಡ, ಬೀರಪ್ಪ ಸಂಭೋಜಿ, ಉಪನ್ಯಾಾಸಕ ಡಾ.ಬಸವರಾಜ ಪಿ.ನಾಯಕ ಇದ್ದರು.
ವೀರೇಶ ನಾಯಕ ಕನ್ನಾಾರಿ ಸ್ವಾಾಗತಿಸಿದರು. ಕಸಾಪ ಗೌರವ ಕಾರ್ಯದರ್ಶಿ ನಾಗರಾಜ ಅರಳಿಮರದ್ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಹೆಚ್.ಎಂ.ಶ್ರೀಶೈಲ ವಂದಿಸಿದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ