Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕೆಡಿಪಿ ಸಭೆ ಕನ್ನಡ ಕಲಿಕೆ ಕುರಿತು ಸುದ್ದಿಮೂಲ ವಿಶೇಷ ವರದಿ ಪ್ರಸ್ತಾಪ ಸರಿಯಾಗಿ ಕರ್ತವ್ಯ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ

ಸುದ್ದಿಮೂಲ ವಾರ್ತೆ ಜೇವರ್ಗಿ, ೆ.06:
ಯಡ್ರಾಾಮಿಯ ಪ್ರಜಾಸೌಧದ ಕಾಮಗಾರಿ 14 ತಿಂಗಳ ಒಳಗಾಗಿ ಪೂರ್ಣಗೊಳಿಸಬೇಕು ಎಂದು ಕೆಕೆರ್‌ಡಿಬಿ ಅಧ್ಯಕ್ಷ ಹಾಗೂ ಜೇವರ್ಗಿ ಶಾಸಕ ಡಾ.ಅಜಯ್ ಸಿಂಗ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ತಾಲೂಕ ಮಟ್ಟದ ತ್ರೈಮಾಸಿಕ ಸಭೆಯಲ್ಲಿ ಅಧ್ಯಕ್ಷತೆವಹಿಸಿ ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳ ಜೊತೆ ಜೇವರ್ಗಿ ಮತ್ತು ಯಡ್ರಾಾಮಿ ತಾಲೂಕುಗಳಿಗೆ ಅಭಿವೃದ್ಧಿಿ ಕಾರ್ಯಗಳ ಕುರಿತು ಚರ್ಚೆ ಮಾಡಲಾಯಿತು.
ಲೋಕೋಪಯೋಗಿ ಇಲಾಖೆಯಲ್ಲಿರುವ ಗ್ರಾಾಮಗಳಿಗೆ ರಸ್ತೆೆ ನಿರ್ಮಾಣ ಮಾಡುವುದು ಕೂಡಲೇ ಪ್ರಾಾರಂಭಿಸಿ ಗ್ರಾಾಮಗಳ ರಸ್ತೆೆ ಡಾಂಬರೀಕರಣ ಆಗಬೇಕು. ಜೊತೆಗೆ ಬಿಜಾಪುರ್ ವೃತದಿಂದ ಷಣ್ಮುಖ ಶಿವಯೋಗಿ ರೂರಲ್ ಪಾಲಿಟೆಕ್ನಿಿಕಲ್ ಕಾಲೇಜಿನವರೆಗೆ ರಸ್ತೆೆ ಮಧ್ಯದಲ್ಲಿ ದೀಪಗಳು ಡೀವೈಡರರ್ ನಿರ್ಮಾಣ ಮಾಡುವಂತೆ ಸೂಚನೆ ನೀಡಿದರು. ಈಗಾಗಲೇ 32 ಕೋಟಿ ಅನುದಾನ ನೀಡಿದ ನರಿಬೋಳ ದಿಂದ ಚಾಮನೂರು ಬ್ರಿಿಜ್ ಶೀಘ್ರದಲ್ಲಿ ಕಾರ್ಯ ಪ್ರಾಾರಂಭ ಮಾಡಬೇಕು ಮತ್ತು ಅದರ ಮಾಹಿತಿ ಪಡೆದುಕೊಳ್ಳಿಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜೇವರ್ಗಿ ತಾಲೂಕಿಗೆ ಟ್ರಾಾಫಿಕ್ ಪೊಲೀಸ್ ಠಾಣೆ ನೀಡುವುದಾಗಿ ಹೇಳಿದ್ದೆವು. ಅದರಂತೆ ಸಿಪಿಐ ಮತ್ತು ಪಿಎಸ್ಐ ಮುತುವರ್ಜಿ ವಹಿಸಿ ಟ್ರಾಾಫಿಕ್ ಪೊಲೀಸ್ ಠಾಣೆ ಪ್ರಾಾರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಜೇವರ್ಗಿ ಮತ್ತು ಯಡ್ರಾಾಮಿಯಲ್ಲಿ ಅರಣ್ಯ ಇಲಾಖೆ ವತಿಯಿಂದ ಗ್ರೀೀನ್ ಪಾರ್ಕ್ ನಿರ್ಮಾಣ ಮಾಡುವುದಾಗಿ ಮತ್ತು ಚಿಗರಳ್ಳಿಿ ಹತ್ತಿಿರ ಪಾರ್ಕನ್ನು ಅಭಿವೃದ್ಧಿಿಪಡಿಸಲು ಅರಣ್ಯ ಇಲಾಖೆಗೆ ಸೂಚನೆ ನೀಡಲಾಗಿದೆ. ಗ್ರಾಾಮಗಳಲ್ಲಿ ಬಹುಗ್ರಾಾಮ ಕುಡಿಯುವ ನೀರು ಕಾಮಗಾರಿ ಶೀಘ್ರದಲ್ಲಿ ಪೂರ್ಣಗೊಳ್ಳಬೇಕು. ನಾಗರಹಳ್ಳಿಿ ನೆಲೋಗಿ ಮಂದೇವಾಲ ಜೇವರ್ಗಿ ಯಡ್ರಾಾಮಿ ಪ್ರವಾಸಿತಾಣವಾಗಿ ಅಭಿವೃದ್ಧಿಿಪಡಿಸಲು ವರದಿ ನೀಡುವಂತೆ ಲೋಕ ಉಪಯೋಗ ಇಲಾಖೆಗೆ ಸೂಚನೆ ನೀಡಿದರು.
ಸಣ್ಣ ನೀರಾವರಿ ಇಲಾಖೆಯಲ್ಲಿ ಅವಳಿ ತಾಲೂಕಿನಲ್ಲಿ ಯಾವ ಯಾವ ಗ್ರಾಾಮಗಳಿಗೆ ಕೆರೆ ಅವಶ್ಯಕತೆ ಇದೆ ಎನ್ನುವುದನ್ನು ಮಾಹಿತಿ ನೀಡಬೇಕು ಜೊತೆಗೆ ಹೊಸಕೆರೆಗಳು ಮತ್ತು ಹಳೇ ಕೆರೆಗಳು ಎಷ್ಟಿಿವೆ ಎನ್ನುವ ಮಾಹಿತಿ ನೀಡಬೇಕು ಎಂದು ಹೇಳಿದರು.
ಜೆಸ್ಕಾಾಂ ಇಲಾಖೆಯಿಂದ ಹೆಚ್ಚು ಕೇಂದ್ರಗಳು ಸ್ಥಾಾಪನೆ ಮಾಡಲು ಅಧಿಕಾರಿಗಳಿಗೆ ಮಾಹಿತಿ ನೀಡಿ ನೀಡುವಂತೆ ಸೂಚನೆ. ಈಗಾಗಲೇ ಯಡ್ರಾಾಮಿ ಜೇವರ್ಗಿ ಎರಡು ಅವಳಿ ತಾಲೂಕಿನಲ್ಲಿ ಆರು ಹೆಚ್ಚುವರಿ ಜೆಸ್ಕಾಾಂ ಕೇಂದ್ರಗಳು ನಿರ್ಮಾಣ ಸೂಚನೆ ನೀಡಿದರು.
ತಾಲೂಕ ಮಟ್ಟದ ಎಲ್ಲಾ ಇಲಾಖೆ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಬೇಕು ಮಾಡದೇ ಹೋದವರ ವಿರುದ್ಧ ಕ್ರಮ ಜರುಗಿಸುವಂತೆ ಯಡ್ರಾಾಮಿ ಮತ್ತು ಜೇವರ್ಗಿ ದಂಡಾಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ದಂಡಾಧಿಕಾರಿ ಮಲ್ಲಣ್ಣ ಯಲಗೋಡ, ಯಲ್ಲಪ್ಪ ಸುಬೇದಾರ, ರವಿಚಂದ್ರನ್ ರೆಡ್ಡಿಿ ಲಕ್ಕುಂಡಿ, ಶಂಕರ್ ರಾಠೋಡ, ಕ್ಷೇತ್ರ ಶಿಕ್ಷಣಾಧಿಕಾರಿ ವೀರಣ್ಣ ಬೊಮ್ಮನಹಳ್ಳಿಿ, ಶಿವಲಿಂಗಪ್ಪ, ಗಜಾನಂದ ಬಿರಾದರ ಜೇವರ್ಗಿ ಪಿಎಸ್‌ಐ, ಶಿವಾನಂದ ಹರವಾಳ, ಗುರು ಲಿಂಗಯ್ಯ ಗದಗಿಮಠ, ಉದಯ್ ಸಿಂಗ್, ಶ್ರೀನಿವಾಸ್, ಕೆಡಿಪಿ ಸದಸ್ಯರಾದ ಮಲ್ಲಿಕಾರ್ಜುನ್, ಚಂದ್ರಶೇಖರ್ ನೆರಡಗಿ, ಪಂಚ ಗ್ಯಾಾರಂಟಿ ಅಧ್ಯಕ್ಷ ಶೌಕತ್ ಅಲಿ ಆಲೂರು ಉಪಸ್ಥಿಿತರಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ