Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ವಿಶೇಷ ಚೇತನ ಮಕ್ಕಳಿಂದ ವಿಜ್ಞಾನ ವಸ್ತು ಪ್ರದರ್ಶನ ಬುದ್ದಿವಂತರಿದ್ದರೂ ದುರ್ಬಲಗೊಳ್ಳುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ - ನಾಗರತ್ನ ಕಳವಳ

ಸುದ್ದಿಮೂಲ ವಾರ್ತೆ ರಾಯಚೂರು, ಜ.08:
ಇತ್ತೀಚಿನ ದಿನಗಳಲ್ಲಿ ಮಕ್ಕಳು ಬುದ್ಧಿಿವಂತರಾಗಿ ಅತಿ ಚಟುವಟಿಕೆ ಉಳ್ಳವರಾಗಿದ್ದರೂ ಶಾರೀರಿಕವಾಗಿ ಮತ್ತು ಮಾನಸಿಕವಾಗಿ ದುರ್ಬಲ ಗೊಳ್ಳುತ್ತಿಿರುವ ಮಕ್ಕಳ ಸಂಖ್ಯೆೆ ಹೆಚ್ಚಾಾಗುತ್ತಿಿದ್ದು ವಿಶೇಷ ಮಕ್ಕಳಿಗೆ ವಿಶೇಷ ಶಾಲೆಗಳ ಅವಶ್ಯಕತೆ ಇದೆ ಎಂದು ರತ್ನ ಮಾಡ್ರನ್ ಸ್ಕೂಲ್ ಸಂಸ್ಥಾಾಪಕಿ ನಾಗರತ್ನ ಹೇಳಿದರು.
ಅವರಿಂದು ಲಿಂಗಸಗೂರು ರಸ್ತೆೆಯಲ್ಲಿರುವ ದಿಮಹಿ ಲರ್ನಿಂಗ್ ಮತ್ತು ಸ್ಕೂಲಿಂಗ್ ಅಕಾಡೆಮಿ ಶಾಲೆಯಲ್ಲಿ ವಿಶೇಷ ಮಕ್ಕಳಿಂದ ಏರ್ಪಡಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಾಟಿಸಿ ಮಾತನಾಡಿದರು. ನಿಧಾನವಾಗಿ ಕಲಿಯುವ ಮಕ್ಕಳು, ಗಮನಹರಿಸಲು ಕಷ್ಟವಾಗುತ್ತಿಿರುವ ಮಕ್ಕಳು, ಕಲಿಕಾ ಅಸಮರ್ಥತೆ, ಶ್ರವಣ ಸಮಸ್ಯೆೆ, ಅಭಿವೃದ್ಧಿಿ ಕುಂಠಿತ ಮಕ್ಕಳು ಇವರಿಗಾಗಿ ಶಾಲೆ ಸಹಕಾರಿಯಾಗಿದೆ ಎಂದು ಹೇಳಿದರು.
ಈ ಮಕ್ಕಳಿಗೆ ವೈಯಕ್ತಿಿಕ ಗಮನಹರಿಸುವುದರ ಮೂಲಕ ಒತ್ತಡ ಮುಕ್ತ ಬೆಂಬಲಿತ ವಾತಾವರಣ, ಆತ್ಮವಿಶ್ವಾಾಸವನ್ನು ನಿರ್ಮಿಸಲು ಶಿಕ್ಷಕರ ಪಾತ್ರ ಬಹು ಮುಖ್ಯವಾದರೆ, ಪಾಲಕರ ಸಹಕಾರವೂ ಮಹತ್ವದ್ದಾಾಗಿದೆ ಎಂದರು.
ತೆರಿಗೆ ಸಲಹೆಗಾರ ಸುಬ್ರಹ್ಮಣ್ಯಂ ಮಾತನಾಡಿ, ವಿಶೇಷವಾದ ಚೈತನ್ಯ ಶಕ್ತಿಿ ಹೊಂದಿದ್ದು ಅದಕ್ಕಾಾಗಿ ಅವರಿಗೆ ವಿಶೇಷ ಮಕ್ಕಳೆಂದು ಗುರುತಿಸಲ್ಪಡುತ್ತದೆ ಇಂತಹ ಮಕ್ಕಳಿಗೆ ವಿಶೇಷ ತರಬೇತಿ ನೀಡಿ ಉತ್ತಮ ವಾತಾವರಣವನ್ನು ಕಲ್ಪಿಿಸುವ ಕಾರ್ಯ ದಿಮಹಿ ಲರ್ನಿಂಗ್ ಆ್ಯಂಡ್ ಸ್ಕೂಲಿಂಗ್ ಮಾಡುತ್ತಿಿರುವುದಕ್ಕೆೆ ಮೆಚ್ಚುಗೆ ವ್ಯಕ್ತಪಡಿಸಿದರು.
ದಿಮಹಿ ಲರ್ನಿಂಗ್ ಸ್ಕೂಲ್, ಸಂಸ್ಥಾಾಪಕರಾದ ಹಿಮಬಿಂದು ಬಿ ಚಿಕ್ಕಮಠ್ ಮಕ್ಕಳು ಇಂದು ವಿಜ್ಞಾನ ವಸ್ತು ಪ್ರದರ್ಶನವನ್ನು ಸ್ವತಹ ತಾವೇ ತಯಾರಿಸಿ ಹೆಚ್ಚಿಿನ ವಿವರ ನೀಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಇವರಲ್ಲಿ ಒಂದು ವಿಶೇಷವಾದ ಶಕ್ತಿಿ ಅಡಗಿರುತ್ತದೆ ಅದನ್ನು ಹೊರ ತೆಗೆಯುವ ಕಾರ್ಯ ನಮ್ಮ ಸಂಸ್ಥೆೆ ಮಾಡುತ್ತಿಿದೆ ಎಂದು ಹೇಳಿದರು.
ಸುಮಾರು 25 ವಿವಿಧ ವಿಜ್ಞಾನ ಮತ್ತು ಸಮಾಜ ವಿಷಯಕ್ಕೆೆ ಸಂಬಂಧಿಸಿದಂತೆ ವಸ್ತು ಪ್ರದರ್ಶನವನ್ನು ಮಕ್ಕಳು ಏರ್ಪಡಿಸಿ ಶಿಕ್ಷಕರ ಮತ್ತು ಪಾಲಕರ ಮೆಚ್ಚುಗೆಗೆ ಪಾತ್ರರಾದರು
ಈ ಸಂದರ್ಭದಲ್ಲಿ ಅಕಾಡೆಮಿಯ ಪದಾಧಿಕಾರಿಗಳಾದ ಬಂಡಯ್ಯ ಸ್ವಾಾಮಿ ಚಿಕ್ಕಮಠ್, ರಾಘವೇಂದ್ರ ಡಿ.ವಕೀಲರು, ಉದ್ಯಮಿಗಳಾದ ರಾಘವೇಂದ್ರ, ದೇವೇಂದ್ರಪ್ಪ ಬೆಂಗಳೂರು ಪಾಲಕರು, ಪೋಷಕರು ಮತ್ತು ಮಕ್ಕಳು ಉಪಸ್ಥಿಿತರಿದ್ದರು.

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ