Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬಿಎಸ್ವೈ, ವಿಜಯೇಂದ್ರ ಭೇಟಿ ಬಳಿಕ ಶ್ರೀರಾಮುಲು ಹೇಳಿಕೆ ಬಳ್ಳಾಾರಿ ಗಲಭೆ ಖಂಡಿಸಿ ಜ.17ರಂದು ಬಳ್ಳಾರಿಯಲ್ಲಿ ಸಮಾವೇಶ

ಸುದ್ದಿಮೂಲ ವಾರ್ತೆ ಬೆಂಗಳೂರು, ಜ.12:
ಬಳ್ಳಾಾರಿಯಲ್ಲಿ ಕಾಂಗ್ರೆೆಸ್ ಶಾಸಕರಿಂದ ನಡೆದ ಗಲಭೆಯನ್ನು ಖಂಡಿಸಿ ಜ.17ರಂದು ಬಳ್ಳಾಾರಿಯಲ್ಲಿ ಬೃಹತ್ ಸಮಾವೇಶ ನಡೆಸಲಿದ್ದು, ರಾಜ್ಯ ನಾಯಕರೆಲ್ಲರೂ ಪಾಲ್ಗೊೊಳ್ಳಲಿದ್ದಾರೆ ಎಂದು ಮಾಜಿ ಸಚಿವ ಶ್ರೀರಾಮುಲು ಹೇಳಿದರು.
ಬಿಜೆಪಿ ಕಚೇರಿಯಲ್ಲಿ ಪಕ್ಷದ ಹಿರಿಯ ನಾಯಕರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಳ್ಳಾಾರಿ ಸಮಾವೇಶದ ಬಗ್ಗೆೆ ಮಾಜಿ ಮುಖ್ಯಮಂತ್ರಿಿಗಳಾದ ಬಿ.ಎಸ್. ಯಡಿಯೂರಪ್ಪ, ಸದಾನಂದಗೌಡ, ಸಂಸದ ಗೋವಿಂದ ಕಾರಜೋಳ ಸೇರಿ ಹಲವು ನಾಯಕರ ಜೊತೆ ಚರ್ಚೆ ಮಾಡಿದ್ದೇನೆ. ಎಲ್ಲರೂ ಸಮಾವೇಶಕ್ಕೆೆ ಬೆಂಬಲ ಸೂಚಿಸಿದ್ದಾರೆ ಎಂದು ಹೇಳಿದರು.
ಬಳ್ಳಾಾರಿಯಿಂದ ಬೆಂಗಳೂರುವರೆಗೆ ಪಾದಯಾತ್ರೆೆ ನಡೆಸುವ ಸಂಬಂಧ ಅನುಮತಿ ಕೇಳಿದ್ದೇನೆ. ಈ ಸಂಬಂಧ ಚರ್ಚಿಸಿ ನಿರ್ಧಾರ ತಿಳಿಸುವುದಾಗಿ ಪಕ್ಷದ ರಾಜ್ಯಾಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಅವರು ಹೇಳಿದ್ದಾರೆ ಎಂದು ಶ್ರೀರಾಮುಲು ತಿಳಿಸಿದರು.
ಜನವರಿ 1ರಂದು ಬಳ್ಳಾಾರಿಯಲ್ಲಿ ನಡೆದ ದುರ್ಘಟನೆ ಕಾಂಗ್ರೆೆಸ್ ನಾಯಕರ ಕುತಂತ್ರದಿಂದ ನಡೆದಿದೆ. ಘಟನೆಯಲ್ಲಿ ಒಬ್ಬ ಅಮಾಯಕನ ಸಾವು ಸಂಭವಿಸಿತು. ವಿಜಯೇಂದ್ರ ಅವರು ಕೂಡಲೇ ಬಳ್ಳಾಾರಿಗೆ ಬಂದು ನಮಗೆಲ್ಲಾ ಶಕ್ತಿಿ ತುಂಬಿದರು. ಕೇಂದ್ರ ಸಚಿವ ವಿ. ಸೋಮಣ್ಣ, ಪ್ರತಿಪಕ್ಷ ನಾಯಕರುಗಳಾದ ರ್ಆ. ಅಶೋಕ್, ಛಲವಾದಿ ನಾರಾಯಣಸ್ವಾಾಮಿ ಅನೇಕರು ಬಂದು ಪಕ್ಷದ ಕಾರ್ಯಕರ್ತರಿಗೆ ಧೈರ್ಯ ತುಂಬಿದ್ದಾರೆ.
ಇತಿಹಾಸ ಮರುಕಳಿಸುತ್ತದೆ ಎಂಬ ಮಾತು ಸತ್ಯ. ಆಗ ಸಿದ್ದರಾಮಯ್ಯ ಅವರು ವಿಪಕ್ಷ ನಾಯಕರಾಗಿದ್ದಾಗ ರೆಡ್ಡಿಿ ಕುಟುಂಬದ ವಿರುದ್ಧ ಸದನದಲ್ಲಿ ತೊಡೆ ತಟ್ಟಿಿ ಬಳ್ಳಾಾರಿವರೆಗೂ ಪಾದಯಾತ್ರೆೆ ನಡೆಸಿದರು. ಆದರೆ, ಇಂದು ಅವರ ಪಕ್ಷದ ಶಾಸಕ ಮತ್ತು ಅವರ ಅಂಗರಕ್ಷಕರು ಸಾಮಾನ್ಯ ಜನರ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಶ್ರೀರಾಮುಲು ಟೀಕಿಸಿದರು.
ಶಾಸಕ ನಾರಾ ಭರತ್ ರೆಡ್ಡಿಿ ದುರ್ವರ್ತನೆಗೆ ಸಿದ್ದರಾಮಯ್ಯ ಸಹಕಾರ ಕೊಡುತ್ತಿಿದ್ದಾರೆ. ಭರತ್ ರೆಡ್ಡಿಿ ಮೇಲೆ ಸೆಕ್ಷನ್ 302 ಕೇಸ್ ಹಾಕಬೇಕಿತ್ತು. ಅದರ ಬದಲಿಗೆ ಸೆಕ್ಷನ್ 307 ಕೇಸ್ ಹಾಕಿ ರಕ್ಷಣೆ ಮಾಡುತ್ತಿಿದ್ದಾರೆ. ಘಟನೆ ನಡೆದು 12 ದಿನ ಆದರೂ ನಾರಾ ಭರತ್ ರೆಡ್ಡಿಿ ಬಂಧನ ಆಗಿಲ್ಲ. ಒಬ್ಬ ಅಜ್ಞಾನಿ ಶಾಸಕನ ಪರ ಸರ್ಕಾರ ನಿಂತಿದೆ ಎಂದು ಕಿಡಿಕಾರಿದರು.
ಕಾಂಗ್ರೆೆಸ್ ಸರ್ಕಾರದ ನಡೆ ಮತ್ತು ಸ್ಥಳೀಯ ಶಾಸಕನ ದುರ್ವರ್ತನೆ ಖಂಡಿಸಿ ಪಾದಯಾತ್ರೆೆ ನಡೆಸಲು ಮುಂದಾಗಿದ್ದೆವು. ಈ ಬಗ್ಗೆೆ ಜನಾರ್ದನ ರೆಡ್ಡಿಿ ಅವರೂ ಪಕ್ಷದ ಮುಖಂಡರೊಂದಿಗೆ ಮಾತನಾಡಲು ಉದ್ದೇಶಿಸಿದ್ದಾರೆ. ಈ ಮಧ್ಯೆೆ ಜ.17 ರಂದು ಬಳ್ಳಾಾರಿಯಲ್ಲಿ ಸಮಾವೇಶ ಮಾಡುತ್ತೇವೆ ಎಂದು ಶ್ರೀರಾಮುಲು ಹೇಳಿದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ