ಸುದ್ದಿಮೂಲ ವಾರ್ತೆ ರಾಯಚೂರು, ಜ.21:
ಸಮಾಜದಲ್ಲಿನ ಅನಾಚಾರ, ಅಪನಂಬಿಕೆಗಳನ್ನು ನಿರ್ಭೀತಿ ಯಿಂದ ಟೀಕಿಸಿ ಕ್ರಾಾಂತಿಕಾರಿ ಶರಣರು ಎಂದು ಹೆಸರಾದ ನಿಜಶರಣ ಅಂಬಿಗರ ಚೌಡಯ್ಯ ನವರ ಆಚಾರ,ವಿಚಾರಗಳನ್ನು ನಾವೆಲ್ಲರು ಅರಿತು ನಡೆಯಬೇಕು ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜ್ ಹೇಳಿದರು.
ನಗರದ ಪಂ. ಸಿದ್ಧರಾಮ ಜಂಬಲದಿನ್ನಿಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಯಚೂರು ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಾಶ್ರಯದಲ್ಲಿ ಹಮ್ಮಿಿಕೊಂಡಿದ್ದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮ ಉದ್ಘಾಾಟಿಸಿ ಮಾತನಾಡಿದರು.
ಅಂಬಿಗರ ಚೌಡಯ್ಯನವರು ತಮ್ಮ ವಚನ ಸಾಹಿತ್ಯದ ಮೂಲಕ ಸಮಾಜದಲ್ಲಿ ಸಮಾನತೆ ಎತ್ತಿಿ ಹಿಡಿದರು. ಬಸವಣ್ಣನವರ ಅನುಯಾಯಿಗಳಾದ ಅಂಬಿಗರ ಚೌಡಯ್ಯನವರ ವಚನಗಳಲ್ಲಿ ಜೀವನದ ಸಾರವೇ ಅಡಗಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಡಾ.ಶಿವರಾಜ ಪಾಟೀಲ ಮಾತನಾಡಿ, ಅಂಬಿಗರ ಚೌಡಯ್ಯನವರು ವಚನಗಳ ಮೂಲಕ ಸಮ ಸಮಾಜ ಕಟ್ಟುವ ಕೆಲಸ ಮಾಡಿದರು ಎಂದು ತಿಳಿಸಿದರು.
ಬಹುಸಂಖ್ಯಾಾತರಾದ ಗಂಗಾಮಸ್ಥರಿಗೆ ಸಮಾಜದಲ್ಲಿ ಸರಿಯಾದ ರೀತಿಯಲ್ಲಿ ಪ್ರಾಾತಿನಿಧ್ಯ ಸಿಗಬೇಕು. ಈ ನಿಟ್ಟಿಿನಲ್ಲಿ ಸಮಾಜದ ಕೆಲಸ ಕಾರ್ಯಗಳನ್ನು ಪಕ್ಷಾತೀತವಾಗಿ ಮಾಡಲಾಗುತ್ತದೆ. ಸಮಾಜದ ವಿದ್ಯಾಾರ್ಥಿಗಳು ಉನ್ನತ ಶಿಕ್ಷಣ ಪಡೆದು ದೊಡ್ಡದೊಡ್ಡ ಹುದ್ದೆಗಳನ್ನು ಅಲಂಕರಿಸಬೇಕು ಎಂದು ಸಲಹೆ ನೀಡಿದರು.
ಗಂಗಾಮತಸ್ಥ ಸಮಾಜದ ಜಿಲ್ಲಾಧ್ಯಕ್ಷ ಕೆ.ಶಾಂತಪ್ಪ ವಿಶೇಷ ಉಪನ್ಯಾಾಸ ನೀಡಿ, ಚೌಡಯ್ಯನವರು ಯಾವುದೇ ಜಾತಿಗೆ ಸೀಮಿತವಲ್ಲ. ಅವರು ಮೂರ್ತಿ ಪೂಜೆಗೆ ಅವಕಾಶ ಕೊಡಲಿಲ್ಲ. ಅಂತಹ ನೇರ ನಿಷ್ಟುರ ಅಂಬಿಗರ ಚೌಡಯ್ಯನವರ ತಿಳಿಸಿದ ಸನ್ಮಾಾರ್ಗದಲ್ಲಿ ನಾವು ನಡೆಯಬೇಕು. ಚೌಡಯ್ಯನವರು ಬಸವಣ್ಣನ ತತ್ವವನ್ನು ಒಪ್ಪಿಿ ಅನುಭವ ಮಂಟಪಕ್ಕೆೆ ಹೋದರು. ಮೂಢನಂಬಿಕೆಯಲ್ಲಿ ನಾವು ಮುಳುಗಿ ಹೋಗಿದ್ದೇವೆ. ಅಂತಹ ಮೂಢನಂಬಿಕೆಗಳಿಂದ ನಾವು ಹೊರ ಬರಬೇಕು. ನಮಗೆ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠ ಇದ್ದು, ಆ ಗುರುಗಳ ಮಾರ್ಗದರ್ಶನದಲ್ಲಿ ನಾವೆಲ್ಲರೂ ನಡೆಯಬೇಕು. ನಮ್ಮ ಆಚಾರ ವಿಚಾರ, ಸಂಸ್ಕೃತಿಯನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯವಾಗಬೇಕು. ವಿದ್ಯಾಾರ್ಥಿಗಳಲ್ಲಿ ಸಂಸ್ಕಾಾರ ಕಲಿಸಬೇಕು. ಸಮಾಜದ ಬಗ್ಗೆೆ ತಿಳಿಹೇಳಬೇಕು ಎಂದರು.
ಸಾಧಕರಿಗೆ ಸನ್ಮಾಾನ : ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಂಗಾಮತಸ್ಥ ಸಮಾಜದ ಸಾಧಕರಿಗೆ ಸನ್ಮಾಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಸಿಂಧನೂರು ಕ್ಷೇತ್ರದ ಶಾಸಕ ಹಂಪನಗೌಡ ಬಾದರ್ಲಿ, ವಿಧಾನ ಪರಿಷತ್ ಶಾಸಕ ಎ.ವಸಂತಕುಮಾರ, ಜಿಲ್ಲಾಧಿಕಾರಿಗಳಾದ ಕೆ.ನಿತೀಶ್, ಜಿಲ್ಲಾ ಪೊಲೀಸ್ ವರಿಷ್ಠಾಾಧಿಕಾರಿ ಅರುಣಾಂಗ್ಷು ಗಿರಿ, ರಾಯಚೂರು ಮಹಾನಗರ ಪಾಲಿಕೆಯ ಉಪ ಆಯುಕ್ತರಾದ ಸಂತೋಷಿ ರಾಣಿ ಸೇರಿದಂತೆ ಇತರರಿದ್ದರು.
ಮಾಲಾರ್ಪಣೆ, ಶಿಲಾಮಂಟಪ ಲೋಕಾರ್ಪಣೆ : ವೇದಿಕೆ ಕಾರ್ಯಕ್ರಮಕ್ಕೂ ಮೊದಲು ನಗರದ ಬಿಆರ್ಬಿ ಕಾಲೇಜ್ ಬಳಿಯ ನಿಜಶರಣ ಅಂಬಿಗರ ಚೌಡಯ್ಯನವರ ಪುತ್ಥಳಿಗೆ ಹಾಗೂ ಶಿಲಾಮಂಟಪ ಲೋಕಾರ್ಪಣೆಯನ್ನು ಕಿಲ್ಲೆ ಬೃಹನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಾಮೀಜಿ, ಸೋಮವಾರ ಪೇಟೆ ಹಿರೇಮಠದ ಅಭಿನವ ರಾಚೋಟಿ ವೀರ ಶಿವಾಚಾರ್ಯ ಸ್ವಾಾಮೀಜಿ ಹಾಗೂ ಸಚಿವ ಎನ್.ಎಸ್ ಬೋಸರಾಜ್, ಸಂಸದ ಜಿ.ಕುಮಾರ ನಾಯಕ, ಶಾಸಕ ಡಾ.ಎಸ್.ಶಿವರಾಜ ಪಾಟೀಲ್, ವಿಧಾನ ಪರಿಷತ್ ಶಾಸಕ ಎ.ವಸಂತಕುಮಾರ ಲೋಕಾರ್ಪಣೆ ಮಾಡಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಮಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ.ನಿತೀಶ್ ಕೆ., ಎಸ್ಪಿ ಅರುಣಾಂಗ್ಷು ಗಿರಿ, ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತ ಜುಬಿನ್ ಮೊಹಪಾತ್ರ, ಮಾಜಿ ಸಂಸದ ಬಿ.ವಿ.ನಾಯಕ, ಮಾಜಿ ಶಾಸಕ ಎ.ಪಾಪಾರೆಡ್ಡಿಿಘಿ, ನಗರಸಭೆಯ ಮಾಜಿ ಅಧ್ಯಕ್ಷೆೆ ಲಲಿತಾ ಕಡಗೋಳ, ಸಮಾಜದ ಜಿಲ್ಲಾಾಧ್ಯಕ್ಷ ಕೆ.ಶಾಂತಪ್ಪ, ಕಾಂಗ್ರೆೆಸ್ ಮುಖಂಡರಾದ ಜಿ.ಶಿವಮೂರ್ತಿ, ಜಯಣ್ಣಘಿ, ಅಮರೇಗೌಡ ಹಂಚಿನಾಳ, ಸಮಾಜದ ಕೆ.ಶರಣಪ್ಪ, ಕುರ್ಡಿ ಲಕ್ಷ್ಮಣ ಸೇರಿದಂತೆ ಇತರರಿದ್ದರು.
ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ, ಮಾಲಾರ್ಪಣೆ ಶರಣರ ನಿಷ್ಠುರತೆ, ಜೀವನ ಮೌಲ್ಯ ನಮ್ಮ ಬದುಕಿನ ಭಾಗವಾಗಲಿ – ಬೋಸರಾಜ್

