ಎಚ್.ಎಂ. ಮಹೇಂದ್ರ ಕುಮಾರ್ ಬಳ್ಳಾರಿ, ೆ.11:
ಇಂಡಸ್ಟ್ರಿಿಯಲ್ ಸೆಕ್ಯುರಿಟಿ ೆರ್ಸ್ (ಸಿಐಎಸ್ಎ್)ನ ಕಣ್ಗಾಾವಲಿನಲ್ಲಿ ಇರುವ ರಾಷ್ಟ್ರೀಯ ಖನಿಜ ಅಭಿವೃದ್ಧಿಿ ನಿಗಮ (ಎನ್ಎಂಡಿಸಿ)ಯ ಗಣಿ ಗುತ್ತಿಿಗೆ ಸಂಖ್ಯೆೆ 1111ರ ಸಿ-ಬ್ಲಾಾಕ್ನಿಂದ ಉತ್ಕೃಷ್ಟದರ್ಜೆಯ ಕಬ್ಬಿಿಣದ ಅದಿರು ಕಳ್ಳತನದ ಜಾಲವನ್ನು ಪೊಲೀಸರು ಬಯಲು ಮಾಡುತ್ತಿಿದ್ದಂತೆ.
ಎನ್ಎಂಡಿಸಿಯ ಎಕ್ಸಕ್ಯೂಟಿವ್ ಡೈರೆಕ್ಟರ್ (ಕಾರ್ಯನಿರ್ವಾಹಕ ನಿರ್ದೇಶಕರು) ಅವರನ್ನು ವರ್ಗಾವಣೆ ಮಾಡಿ, ಕೆಲ ಅಧಿಕಾರಿಗಳು – ಸಿಬ್ಬಂದಿಗಳನ್ನು ಅಮಾನತು ಮಾಡಿ, ನಿಗಮದ ಆಂತರಿಕ ತನಿಖೆಗೆ ಆದೇಶ ನೀಡಿದೆ.
ಪೊಲೀಸ್ ಮೂಲಗಳ ಪ್ರಕಾರ, 1000 ಟನ್ಗೂ ಹೆಚ್ಚಿಿನ ಪ್ರಮಾಣದಲ್ಲಿ ಉತ್ಕೃಷ್ಟ ದರ್ಜೆಯ ಕಬ್ಬಿಿಣದ ಅದಿರು ಕಳ್ಳತನವಾಗಿದೆ. ಬಳ್ಳಾಾರಿ ಮೂಲದ ಮೂವರು ಈ ಕಳ್ಳತನದ ‘ಸೂತ್ರಧಾರಿ’ಗಳು ಎನ್ನಲಾಗಿದೆ. ಪೊಲೀಸರು ತಮಗೆ ಸಿಕ್ಕ ಮಾಹಿತಿ ಆಧರಿಸಿ, ಲಾರಿಗಳನ್ನು ಹಿಂಬಾಲಿಸಿ ಗಣಿ ಮತ್ತು ಭೂ ವಿಜ್ಞಾಾನ ಇಲಾಖೆಯ ಪರವಾನಿಗೆಗಳನ್ನು ಪರಿಶೀಲಿಸಿದಾಗ, ಈ ಪ್ರಕರಣ ಬಯಲಾಗಿದೆ.
ಪ್ರಕರಣಕ್ಕೆೆ ಸಂಬಂಧಿಸಿದಂತೆ ನಾಗಲಾಪುರ ನಿವಾಸಿ ತಿಪ್ಪೇಸ್ವಾಾಮಿ ಸೇರಿ ಅನೇಕರನ್ನು ಪೊಲೀಸರು ವಿಚಾರಣೆ ನಡೆಸಿದಾಗ, ಕಬ್ಬಿಿಣದ ಅದಿರು ಕಳ್ಳತನ ಪ್ರಕರಣ ಬಯಲಾಗಿದೆ. ಪ್ರಾಾಥಮಿಕ ಹಂತದಲ್ಲಿ, ಪ್ರಕರಣದಲ್ಲಿ ಅನೇಕರು ಪಾಲ್ಗೊೊಂಡಿರುವ ಮಾಹಿತಿ ಲಭ್ಯವಿದೆ. ಆದರೆ, ಚಾಲಕ ತಿಪ್ಪೇಸ್ವಾಾಮಿ ಮತ್ತು ಇನ್ನಿಿತರರು ನೀಡಿರುವ ಮಾಹಿತಿ ಆಧರಿಸಿ, ಬಳ್ಳಾಾರಿ ಮೂಲದ ಮೂವರು ಮತ್ತು ಇನ್ನಿಿತರರನ್ನು ಪೊಲೀಸರು ಹಿಂಬಾಲಿಸಿದ್ದು, ಇವರು ಸಿಕ್ಕಲ್ಲಿ ಎನ್ಎಂಡಿಸಿ ಮತ್ತು ಕಳ್ಳತನ ಮಾಡಿರುವ ಕಬ್ಬಿಿಣದ ಅದಿರನ್ನು ಖರೀದಿಸುವವರ ‘ಮಧ್ಯಸ್ಥಿಿಕೆ’ವಹಿಸಿದವರು ಸಿಕ್ಕಲ್ಲಿ ಕಳ್ಳತನದ ಒಟ್ಟು ಪ್ರಮಾಣ ಸಿಗಲಿದೆ ಎಂದು ಅಂದಾಜಿಸಲಾಗಿದೆ.
ಕಬ್ಬಿಿಣದ ಅದಿರು ಕಳ್ಳತನಕ್ಕೆೆ ಸಂಬಂಧಿಸಿದಂತೆ ಐದು ಲಾರಿಗಳನ್ನು ವಶಕ್ಕೆೆ ಪಡೆಯಲಾಗಿದೆ. ಈ ಲಾರಿಗಳು ಸಾಗಿದ ಕರ್ನಾಟಕ ಮತ್ತು ಆಂಧ್ರಪ್ರದೇಶದ ಟೋಲ್ಗೇಟ್ಗಳಲ್ಲಿ ಮೂರು ತಿಂಗಳ ದಾಖಲೆಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿಿದ್ದಾಾರೆ.
ಪೊಲೀಸರು ಆಂಧ್ರಪ್ರದೇಶದ ಕರ್ನಾಟಕದ ಗಡಿಗೆ ಸಮೀಪದಲ್ಲಿ ಇರುವ ನೇಮಕಲ್ಲು ಗ್ರಾಾಮದ ಶ್ರೀ ಸಾಯಿ ಬಾಲಾಜಿ ಸ್ಪಾಾಂಜ್ ಐರನ್ ಇಂಡಿಯ ಪ್ರೈವೇಟ್ ಲಿಮಿಟೆಡ್ಗೆ ಹೋಗಿ, ್ಯಾಕ್ಟರಿಯಿಂದ 1,050 ಮೆಟ್ರಿಿಕ್ ಟನ್ ಕಬ್ಬಿಿಣದ ಅದಿರು ಹಾಗು ಬಳ್ಳಾಾರಿಯ ಸಿರಿವಾರ ಗ್ರಾಾಮದ ಬಳಿ ಇರುವ ನೋಬಲ್ ಇಸ್ಪಾಾತ್ ಅಂಡ್ ಎನರ್ಜೀಸ್ ಲಿಮಿಟೆಡ್ ್ಯಾಕ್ಟರಿಯಿಂದ 1,437 ಮೆಟ್ರಿಿಕ್ ಟನ್ ಕಬ್ಬಿಿಣದ ಅದಿರನ್ನು ಮತ್ತು ಎರೆಡು ಟಿಪ್ಪರ್ ಲಾರಿಗಳನ್ನು ವಶಕ್ಕೆೆ ಪಡೆದಿದ್ದಾಾರೆ.
ಜಿಲ್ಲಾಾ ಪೊಲೀಸ್ ವರಿಷ್ಠಾಾಧಿಕಾರಿ ಡಾ. ಸುಮನ್ ಡಿ. ಪನ್ನೇಕರ್ ಅವರು, ‘ಪ್ರಕರಣದ ತನಿಖೆ ನಡೆದಿದೆ. ಎನ್ಎಂಡಿಸಿಯ ಕಬ್ಬಿಿಣದ ಅದಿರು ಕಳ್ಳತನ ಪ್ರಕರಣದಲ್ಲಿ ಶಾಮೀಲು ಆಗಿರುವವರನ್ನು ತಪ್ಪದೇ ಬಂಧಿಸಿ, ಕಾನೂನು ಕ್ರಮಕ್ಕೆೆ ಒಳಪಡಿಸಲಾಗುತ್ತದೆ’ ಎಂದು ತಿಳಿಸಿದ್ದಾಾರೆ.
ಎನ್ಎಂಡಿಸಿಯ ಕಬ್ಬಿಣದ ಅದಿರು ಕಳ್ಳತನ ‘ಮಧ್ಯಸ್ಥಿಕೆದಾರ’ರ ಹುಡುಕಾಟ

