ಸುದ್ದಿಮೂಲ ವಾರ್ತೆ ಬಳ್ಳಾರಿ, ಜ.20:
ಅವಧಿ ಮುಗಿದ ಗ್ರಾಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿಯನ್ನು ನೇಮಕ ಮಾಡದೇ ಹಾಲಿ ಸದಸ್ಯರನ್ನೇ ಅಧಿಕಾರದಲ್ಲಿ ಮುಂದುವರೆಸಲು ಆಗ್ರಿಿಹಿಸಿ ಕರ್ನಾಟಕ ರಾಜ್ಯ ಗ್ರಾಾಮ ಪಂಚಯಿತಿ ಸದಸ್ಯರ ಮಹಾ ಒಕ್ಕೂಟವು ಆಗ್ರಹಿಸಿದೆ.
ಕರ್ನಾಟಕ ರಾಜ್ಯ ಗ್ರಾಾಮ ಪಂಚಯಿತಿ ಸದಸ್ಯರ ಮಹಾ ಒಕ್ಕೂಟದ ಬಳ್ಳಾಾರಿ ಜಿಲ್ಲಾಾ ಅಧ್ಯಕ್ಷರಾಗಿರುವ ಬಾಣಾಪುರದ ನಾಗರಾಜ್ ಅವರು, 2021ರಲ್ಲಿ ಗ್ರಾಾಮ ಪಂಚಾಯಿತಿ ಚುನಾವಣೆ ನಡೆದಿದ್ದು, 2026-27ರ ಮಧ್ಯದಲ್ಲಿ ಬಳ್ಳಾಾರಿ ಜಿಲ್ಲೆೆಯ ಗ್ರಾಾಮ ಪಂಚಾಯಿತಿಗಳ ಅವಧಿ ಮುಗಿಯಲಿದೆ ಎಂದರು.
ಆದರೆ, 2020 ರಲ್ಲಿ ಬಿಜೆಪಿ ಸರ್ಕಾರವು ಅಧಿಕಾರ ಪೂರ್ಣಗೊಂಡ ಗ್ರಾಾಮ ಪಂಚಾಯಿತಿಗಳ ಅಧಿಕಾವರಧಿಯನ್ನು ಆರು ತಿಂಗಳಿಗೆ ವಿಸ್ತರಿಸಿತ್ತು. ಆದರೆ, ಈಗ ಗ್ರಾಾಮ ಪಂಚಾಯಿತಿಗಳ ಅಧಿಕಾರ ಪೂರ್ಣಗೊಳ್ಳಲಿದೆ ಎಂಬ ಕಾರಣ ನೀಡಿ ಸರ್ಕಾರ ಆಡಳಿತಾಧಿಕಾರಿಗಳನ್ನು ನೇಮಕ ಮಾಡುತ್ತಿಿರುವುದು ಸಂವಿಧಾನ ವಿರೋಧಿ. ಸರ್ಕಾರ ಈ ಕುರಿತು ಬುಧವಾರ ಸಭೆಯನ್ನು ಏರ್ಪಡಿಸಿದ್ದು, ಗ್ರಾಾಮ ಪಂಚಾಯಿತಿಯ ಸದಸ್ಯರ ಪರವಾಗಿ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎ. ಶ್ರೀಧರ್, ಯು. ಗಣೇಶ್, ಲಕ್ಷ್ಮೀರೆಡ್ಡಿಿ, ಹೇಮಾ ಮಂಜುನಾಥ ಅವರು ಉಪಸ್ಥಿಿತರಿದ್ದರು.

