ಸುದ್ದಿಮೂಲ ವಾರ್ತೆ ದೇವದುರ್ಗ, ೆ.10:
ದೇವದುರ್ಗ ಪಟ್ಟಣದಲ್ಲಿ ಡಾ.ಬಿಆರ್ ಅಂಬೇಡ್ಕರ್ ವೃತ್ತ ನಿರ್ಮಾಣ ಕಾಮಗಾರಿ ಕಳೆದ 2-3 ವರ್ಷಗಳಿಂದ ನಡೆಯುತ್ತಿಿದ್ದು ಇನ್ನೂ ಸಂಪೂರ್ಣ ಕಾಮಗಾರಿ ಆಗದೇ ಇರುವುದರಿಂದ ದಲಿತಪರ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ತೀವು ಅಕ್ರೋೋಶ ವ್ಯಕ್ತ ಪಡಿಸಿದ್ದಾರೆ.
ದೇವದುರ್ಗ ಪಟ್ಟಣದ ಬಿ.ಆರ್. ಅಂಬೇಡ್ಕರ ವೃತ್ತದ ನಿರ್ಮಾಣಕ್ಕೆೆ ಕಳೆದ ಅವಧಿಯಲ್ಲಿ ಅನುದಾನ ನೀಡಿದ್ದು, ಸ್ಥಳೀಯ ಶಾಸಕರು ಕೂಡ ಆಯ್ಕೆೆಯಾದ ನಂತರ ವೃತ್ತ ನಿರ್ಮಾಣಕ್ಕೆೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು,ಅದರಂತೆ ಅನುದಾನ ಲಭ್ಯವಿದ್ದರೂ ಕೂಡ ಇನ್ನೂವರೆಗೆ ಕಾಮಗಾರಿ ಸಂಪೂರ್ಣ ಆಗುತ್ತಿಿಲ್ಲ.
ಡಾ.ಬಿ.ಆರ್.ಅಂಬೇಡ್ಕರ ವೃತ್ತದ ಕಾಮಗಾರಿಯ ವಿಳಂಬ ನೀತಿ ಖಂಡಿಸಿ ಅಧಿಕಾರಿಗಳ ಮೇಲೆ ಸೂಕ್ತ ಕ್ರಮಕೈಗೊಳ್ಳುವಂತೆ ಪ್ರತಿಭಟನೆ ನಡೆಸಿದಾಗ ಸ್ಥಳಕ್ಕೆೆ ಆಗಮಿಸಿದ ಮೇಲಧಿಕಾರಿಗಳು ಅಕ್ಟೋೋಬರ ಕೊನೆ ವಾರದಲ್ಲಿ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಿದ್ದುಂದರೆ ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ.
ಕಳೆದ ಮೂರು ವರ್ಷಗಳಿಂದ ಅಧಿಕಾರಿಗಳು ಮತ್ತು ಕಾಮಗಾರಿ ಗುತ್ತಿಿಗೆ ಪಡೆದ ಗುತ್ತೇದಾರರು ಒಂದಿಲ್ಲೊಂದು ನೆಪ ಹೇಳುತಾ ಬಂದಿದ್ದು, ಕೂಡಲೇ ಕಾಮಗಾರಿ ಪೂರ್ಣ ಗೊಳಿಸಬೇಕೆಂದು ಕರ್ನಾಟಕ ರಾಜ್ಯ ಛಲುವಾದಿ ಮಹಾ ಸಭಾದ ಮುಖಂಡರಾದ ಮಹಾಂತೇಶ ಛಲುವಾದಿ, ನಾಗರಾಜ ಶಾವಂತಗೇರಿ, ಜಯ ಕರ್ನಾಟಕ ರಕ್ಷಣ ವೇದಿಕೆ ಮುಖಂಡರಾದ ಯಲ್ಲನ ಗೌಡ ಕೆ.ಇರಬಗೇರಾ, ಕರವೇ ಮುಖಂಡ ಶಿವುಕುಮಾರ ಛಲುವಾದಿ ಸೇರಿದಂತೆ ಅನೇಕರು ಒತ್ತಾಾಯಿಸಿದ್ದಾರೆ.

