ಸುದ್ದಿಮೂಲ ವಾರ್ತೆ ಬಳ್ಳಾರಿ, ನ.30:
ಶೈಕ್ಷಣಿಕ ಹಾಗೂ ಸಂಶೋಧನಾ ಸಂಸ್ಥೆೆಗಳಲ್ಲಿ ನಡೆಯುವ ಉಪನ್ಯಾಾಸಗಳಲ್ಲಿ ವಿದ್ಯಾಾರ್ಥಿಗಳು ಭಾಗವಹಿಸುವುದರಿಂದ ಜ್ಞಾಾನ ವೃದ್ಧಿಿಯಾಗುತ್ತದೆ ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಾಲಯದ ಪ್ರಭಾರ ಕುಲಸಚಿವ ಪ್ರೊೊ.ಜಿ.ಪಿ. ದಿನೇಶ್ ಅವರು ತಿಳಿಸಿದ್ದಾಾರೆ.
ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಾಲಯದ ರಸಾಯನಶಾಸ ವಿಭಾಗದಲ್ಲಿ ರಾಸಾಯನಿಕ ವಿಜ್ಞಾಾನದ ಇತ್ತೀಚಿನ ಪ್ರವೃತ್ತಿಿಗಳ ಕುರಿತು ಎರಡು ದಿನಗಳ ಹಳೆಯ ವಿದ್ಯಾಾರ್ಥಿಗಳ ಉಪನ್ಯಾಾಸ ಸರಣಿ ಉದ್ಘಾಾಟಿಸಿ ಅವರು ಮಾತನಾಡಿದರು.
ವಿದ್ಯಾಾರ್ಥಿಗಳು ಉಪನ್ಯಾಾಸ ಸರಣಿಗಳಿಂದ ಸಮಗ್ರ ವಾತಾವರಣ ಒದಗಿಸಿಕೊಳ್ಳಬಹುದು. ವಿದ್ಯಾಾರ್ಥಿಗಳ ಸಕ್ರಿಿಯ ಭಾಗವಹಿಸುವಿಕೆಯಿಂದ ಪ್ರಸ್ತುತ ವಿದ್ಯಾಾರ್ಥಿ ಹಾಗೂ ಸಂಸ್ಥೆೆಯ ಅಭಿವೃದ್ಧಿಿಗೆ ಶ್ರಮಿಸಿದಂತಾಗುತ್ತದೆ. ಸಮಾಜಕ್ಕೆೆ ಶೈಕ್ಷಣಿಕ ಸೇವೆ ಒದಗಿಸುವ ಮೂಲಕ ಜವಾಬ್ದಾಾರಿಯುತ ಸ್ಥಾಾನ ಪಡೆಯಬಹುದು ಎಂದು ಮಾತನಾಡಿದರು.
ಮೌಲ್ಯಮಾಪನ ಕುಲಸಚಿವರಾದ ಪ್ರೊೊ.ಎನ್.ಎಂ. ಸಾಲಿ ಅವರು, ಹಳೆಯ ವಿದ್ಯಾಾರ್ಥಿಗಳ ಸಂಘವು ವಿದ್ಯಾಾರ್ಥಿ ಮತ್ತು ಶಿಕ್ಷಣ ಸಂಸ್ಥೆೆಯ ನಡುವೆ ಬಲವಾದ ಬಾಂಧವ್ಯ ಸ್ಥಾಾಪಿಸಲು ಸಾಧ್ಯವಾಗುತ್ತದೆ. ವಿದ್ಯಾಾರ್ಥಿಗಳಿಗೆ ವಿಚಾರ ವಿನಿಮಯಕ್ಕಾಾಗಿ ಸೂಕ್ವವಾದ ವೇದಿಕೆ ಒದಗಿಸಿದಂತಾಗುತ್ತದೆ. ಶೈಕ್ಷಣಿಕ ಪ್ರಗತಿಯ ಜೊತೆಗೆ ದೇಶವನ್ನು ರೂಪಿಸಲು ಸಹಕಾರಿಯಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಶುದ್ಧ ವಿಜ್ಞಾಾನ ವಿಭಾಗದ ಡೀನ್ ಪ್ರೊೊ.ಖಡ್ಕೆೆ ಉದಯ ಕುಮಾರ್, ಕಾರ್ಯಕ್ರಮ ಸಂಚಾಲಕರಾದ ಪ್ರೊೊ.ಕೆ.ಎಸ್ ಲೋಕೇಶ್, ಸಹ ಸಂಚಾಲಕ ಡಾ.ಸಾದು ಸೂರ್ಯಕಾಂತ ಎಸ್., ಪ್ರೊೊ.ಅರುಣ್ಕುಮಾರ ಲಗಶೆಟ್ಟಿಿ ಉಪಸ್ಥಿಿತರಿದ್ದರು.
ಎರಡು ದಿನಗಳ ಹಳೆಯ ವಿದ್ಯಾಾರ್ಥಿಗಳ ಉಪನ್ಯಾಾಸ ಸರಣಿಯಲ್ಲಿ ವಿಭಾಗದ ಸುಮಾರು 100 ಕ್ಕೂ ಹೆಚ್ಚು ವಿದ್ಯಾಾರ್ಥಿಗಳು ಭಾಗವಹಿಸಿದ್ದರು.
ವಿದ್ಯಾರ್ಥಿಗಳು ಜ್ಞಾಾನ ವೃದ್ಧಿಸಿಕೊಳ್ಳಿ: ಪ್ರೊ.ಜಿ.ಪಿ ದಿನೇಶ್

