ಸುದ್ದಿಮೂಲ ವಾರ್ತೆ ರಾಯಚೂರು, ೆ.11:
ಚುನಾವಣಾ ಆಯೋಗ ಕೈಗೊಂಡ ವಿಶೇಷ ಮತದಾರರ ಪಟ್ಟಿಿ ಪರಿಷ್ಕರಣೆ ವಿರುದ್ಧ ರಾಜ್ಯ ಸರ್ಕಾರ ನಿರ್ಣಯ ಕೈಗೊಳ್ಳಲು ಆಗ್ರಹಿಸಿ ಸ್ಲಂ ನಿವಾಸಿಗಳ ಕ್ರಿಿಯಾ ವೇದಿಕೆ ಪ್ರತಿಭಟನೆ ನಡೆಸಿತು.
ಇಂದು ನಗರದ ಜಿಲ್ಲಾಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ರಾಜ್ಯದಲ್ಲಿ ಎಸ್ಐಆರ್ ನಡೆಸಲು ವಿರೋಧಿಸಿದರು.
ದೇಶದಲ್ಲಿ ಚುನಾವಣಾ ಆಯೋಗದಿಂದ ಮೊದಲ ಹಂತದಲ್ಲಿ 12 ರಾಜ್ಯಗಳಲ್ಲಿ ವಿಶೇಷ ತೀವ್ರವಾಗಿ ಮತ ಪರಿಷ್ಕರಣೆ ಮ್ಯಾಾಪಿಂಗ್ ಕೈಗೊಂಡಿರುವುದರ ವಿರುದ್ಧ ಎಲ್ಲ ರಾಜ್ಯಗಳಲ್ಲಿ ವಿರೋಧ ಪಕ್ಷದಿಂದ ತೀವ್ರ ವಿರೋಧ ವ್ಯಕ್ತವಾಗಿದೆ ಅಲ್ಲದೆ, ಕೇಂದ್ರ ಸರ್ಕಾರದ ಸಂವಿಧಾನ ಬದ್ಧ ಮತದಾನದ ಹಕ್ಕು ಕಸಿದುಕೊಳ್ಳುವ ಹುನ್ನಾಾರ ನಡೆಸುತ್ತಿಿದೆ ಎಂದು ದೂರಿದರು.
ಆಯೋಗ ತಮ್ಮ ಸಾಂವಿಧಾನಿಕ ಜವಾಬ್ದಾಾರಿ ಮರೆತು ಕೇಂದ್ರದ ಕೈಗೊಂಬೆಯಾಗಿ ವರ್ತಿಸುತ್ತಿಿದ್ದು ಇತ್ತೀಚೆಗೆ ಬಿಹಾರದಲ್ಲಿ ಚುನಾವಣಾ ಆಯೋಗ ಈ ಪ್ರಕ್ರಿಿಯೆಯಲ್ಲಿ 65 ಲಕ್ಷ ಮತದಾರರನ್ನು ಕೈಬಿಟ್ಟಿಿದ್ದಾಾರೆ. ಉತ್ತರ ಪ್ರದೇಶದಲ್ಲಿ 2ಕೋ 89 ಲಕ್ಷ ತೆಗೆದು ಹಾಕಲಾಗಿದೆ. ಇದರಲ್ಲಿ ಹೆಚ್ಚಿಿ ನದಾಗಿ ಬಡವರು, ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾಾತರು ಸಂವಿಧಾನಬದ್ಧ ಮತದಾನದ ಹಕ್ಕನ್ನು ಕಳೆದುಕೊಂಡಿದ್ದಾರೆ. ಈ ಪ್ರಕ್ರಿಿಯೆಯಿಂದ ಕೇವಲ 12 ರಾಜ್ಯಗಳಲ್ಲಿ 7ಕೋ 89 ಲಕ್ಷಕ್ಕೂ ಹೆಚ್ಚು ಮತದಾರರನ್ನು ತೆಗೆದುಹಾಕುವ ಕುತಂತ್ರ ನಡೆಸಲಾಗಿದೆ. ರಾಜಸ್ಥಾಾನದಲ್ಲಿ 41.85 ಲಕ್ಷ, ಮಧ್ಯಪ್ರದೇಶದಲ್ಲಿ 42 ಲ 74 ಸಾವಿರ, ತಮಿಳುನಾಡಿನಲ್ಲಿ 97 ಲಕ್ಷ ಮತದಾರರನ್ನು ತೆಗೆದುಹಾಕಲಾಗಿದ್ದು, ಪಶ್ಚಿಿಮ ಬಂಗಾಳದಲ್ಲಿ 58 ಲಕ್ಷ ತೆಗೆದುಹಾಕಲು ಈಗಾಗಲೇ
ಸೂಚಿಸಲಾಗಿದೆ. ಪುದುಚೇರಿಯಲ್ಲಿ 1 ಲಕ್ಷಕ್ಕೂ ಹೆಚ್ಚು ಮತದಾರರನ್ನು ತೆಗೆದುಹಾಕಲು ಸೂಚಿಸಲಾಗಿದೆ. ಇದರಂತೆ ಕರ್ನಾಟಕದಲ್ಲಿಯೆ ಲಕ್ಷಾಂತರ ಮತದಾರರು ಪಟ್ಟಿಿಯಿಂದ ಹೊರಬೀಳುವ ಭೀತಿ ಎದುರಾಗಿದೆ.
ಮತದಾರರ ಹಕ್ಕು ಕಸಿಯುವ ಸಂಚು ಪರಿಷ್ಕರಣೆಯ ಹೆಸರಿನಲ್ಲಿ ಒಂದು ವರ್ಗದ ಹಾಗೂ ಒಂದು ಸಮುದಾಯದ ಮತಗಳನ್ನು ಕಡಿತಗೊಳಿಸುವ ಸಂಚು ಮಾಡಲಾಗುತ್ತಿಿದೆ. ಬಡಜನ ವಿರೋಧಿ, ಕಾರ್ಮಿಕ, ದಲಿತ, ಹಿಂದುಳಿದ, ಅಲ್ಪಸಂಖ್ಯಾಾತರ ಹಾಗೂ ಮಹಿಳೆಯರ ಕರಾಳ ಕಾಯ್ದೆೆ ರಾಜ್ಯ ಸರ್ಕಾರದಿಂದ ಇದಕ್ಕೆೆ ವಿರೋಧ ವ್ಯಕ್ತ ಪಡಿಸಿ ನಿರ್ಣಯ ಕೈಗೊಳ್ಳಬೇಕೆಂದು ಆಗ್ರಹಿಸಲಾಯಿತು.
ಪ್ರತಿಭಟನೆಯಲ್ಲಿ ಜನಾರ್ಧನ ಹಳ್ಳಿಿಬೆಂಚಿ, ಬಸವರಾಜ, ನೂರಜಾನ್, ರಾಜಶೇಖರ, ಮಾಧವರೆಡ್ಡಿಿ, ಮಹೇಶ, ವೆಂಕಟೇಶ ಭಂಡಾರಿ, ನಿತಿನ್, ಜಂಬಣ್ಣಘಿ, ಆಂಜಿನೇಯ್ಯ ಸೇರಿ ಹಲವರು ಭಾಗವಹಿಸಿದ್ದರು.
ಸ್ಲಂ ಜನಾಂದೋಲನದಿಂದ ಪ್ರತಿಭಟನೆ ಕರ್ನಾಟಕದಲ್ಲಿ ಎಸ್ಐಆರ್ ವಿರುದ್ಧ ನಿರ್ಣಯಕ್ಕೆ ಆಗ್ರಹ

