ಸುದ್ದಿಮೂಲ ವಾರ್ತೆ
ಆನೇಕಲ್, ನ. 28 : ತಾಲ್ಲೂಕಿನ ಮಾಯಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇಡಹಳ್ಳಿ ಗ್ರಾಮದ ಸಮೀಪದಲ್ಲಿರುವ ಶುಭ ಬಡಾವಣೆಯಲ್ಲಿನಟ ಪುನೀತ್ ರಾಜ್ ಕುಮಾರ್ ಪುತ್ಥಳಿ ಅನಾವರಣ ಮಾಡಲಾಯಿತು.
ಸುವರ್ಣ ಕರ್ನಾಟಕ ಹಿತಕ್ಷಣಾ ವೇದಿಕೆಯ ಆನೇಕಲ್ ತಾಲ್ಲೂಕು ಅಧ್ಯಕ್ಷ ಎ.ಎಂ ವೆಂಕಟೇಶ್ ಹಾಗೂ ಮಾಯಸಂದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ನವೀನಾ ಹರೀಶ್ ಗೌಡರು ಹಾಗೂ ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಸಹಯೋಗದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪುತ್ಥಳಿ ಅನಾವರಣ ಕಾರ್ಯಕ್ರಮ ಸಡಗರ ಸಂಭ್ರಮದಿಂದ ನೆರವೇರಿತು.
ಕಾರ್ಯಕ್ರಮದಲ್ಲಿ ರಾಷ್ಠೀಯ ಯುವ ಪ್ರಶಸ್ಥಿ ವಿಜೇತ ಡಾ. ಚಿನ್ನಪ್ಪ ಚಿಕ್ಕಹಾಗಡೆ, ರಾಜ್ಯಾಧ್ಯಕ್ಷ ಎನ್.ನಾಗರಾಜ್, ಡಾ. ರಾಜ್ ಕುಮಾರ್ ಸೇನೆ ತ್ಯಾಗರಾಜ್, ನಾರಾಯಣ, ವಿಶ್ವನಾಥ್, ಪ್ರವೀಣ್. ಮುರುಗೇಶ್, ವಿಶ್ವ, ಚೇತನ್, ವಜ್ರಪ್ಪ, ಪುನೀತ್. ಸಂಪತ್. ಮಣಿ, ರವಿ, ಲಷ್ಮಣಪ್ಪ, ರಮೇಶ್, ವೇಣು, ರಂಗರಾಜು. ಸಂಪತ್, ಕುಮಾರ್ ಮತ್ತು ಶುಭ ಬಡಾವಣೆಯ ನಿವಾಸಿಗಳು ಭಾಗವಹಿಸಿದ್ದರು.