ಸುದ್ದಿಮೂಲ ವಾರ್ತೆ ರಾಯಚೂರು, ಜ.04:
ಜನವರಿ 29, 30 ಹಾಗೂ 31ರಂದು ನಿಗದಿಯಾದ ರಾಯಚೂರು ಉತ್ಸವ-2026ರ ವೇದಿಕೆಯ ಹಾಗೂ ನಾನಾ ಕಾರ್ಯಕ್ರಮಗಳ ಸಮಗ್ರ ಸ್ವರೂಪದ ಪ್ರಾಾತ್ಯಕ್ಷಿಕೆಯನ್ನು ಸಚಿವರಾದ ಡಾ.ಶರಣಪ್ರಕಾಶ ಪಾಟೀಲ, ಎನ್ ಎಸ್ ಬೋಸರಾಜು, ಶಾಸಕರಾದ ಹಂಪನಗೌಡ ಬಾದರ್ಲಿ, ಬಸನಗೌಡ ದದ್ದಲ್, ಡಾ.ಎಸ್.ಶಿವರಾಜ ಪಾಟೀಲ, ಬಸನಗೌಡ ತುರವಿಹಾಳ, ಹಂಪಯ್ಯ ನಾಯಕ, ಎ ವಸಂತಕುಮಾರ ಹಾಗೂ ಇನ್ನಿಿತರರು ವೀಕ್ಷಣೆ ನಡೆಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜನವರಿ 4ರಂದು ನಡೆದ ಜನಪ್ರತಿನಿಧಿಗಳೊಂದಿಗಿನ ಸಭೆಯಲ್ಲಿ ಸಚಿವರು ಹಾಗೂ ಶಾಸಕರು ಮಾತನಾಡಿ, ಉತ್ಸವಕ್ಕೆೆ ಸಂಬಂಧಿಸಿದಂತೆ ನಾನಾ ಸಲಹೆಗಳು ಮತ್ತು ಸೂಚನೆ ನೀಡಿದರು.
ಎಲ್ಲ ಸಮಿತಿಗಳ ಮೇಲೆ ಮೇಲ್ವಿಿಚಾರಣಾ ಸಮಿತಿ ರಚಿಸಿ ಪ್ರತಿ ನಿತ್ಯ ಎಲ್ಲ ತಯಾರಿಯ ಮೇಲ್ವಿಿಚಾರಣೆ ಆಗಬೇಕು. ಕೂಡಲೇ ಜಿಲ್ಲೆಯ ಎಲ್ಲ ಸಂಘ-ಸಂಸ್ಥೆೆಗಳ, ಅಂಗಡಿಕಾರರ ಸಭೆ ನಡೆಸಿ ಅವರ ಸಲಹೆ ಪಡೆಯಬೇಕು. ಆಯಾ ತಹಸೀಲ್ದಾಾರರು ಹಾಗೂ ತಾಪಂ ಇಒಗಳು ಆಯಾ ತಾಲೂಕಿನಲ್ಲಿ ಸಭೆ ನಡೆಸಬೇಕು. ಅಧಿಕಾರಿಗಳು ಮತ್ತು ಸಿಬ್ಬಂದಿ ತಂಡವಾಗಿ ಕೆಲಸ ಮಾಡಿ ಕಾರ್ಯನಿರ್ವಹಿಸಬೇಕು.ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳ ಆಡಳಿತ ಮಂಡಳಿಯ ಮುಖ್ಯಸ್ಥರ ಸಭೆ ನಡೆಸಬೇಕು. ಜಿಲ್ಲೆಯ ಎಲ್ಲ ಸಾಹಿತಿಗಳು, ಕಲಾವಿದರು, ಕವಿಗಳು, ವಕೀಲರು, ಮಹಿಳಾ ಸಂಘಗಳು, ಆಟೋ ಹಾಗೂ ವಿವಿಧ ವಾಹನ ಚಾಲಕರು, ಯುವ ಸಂಘಟನೆಗಳು ಮತ್ತು ನಾಗರಿಕ ಸಮಿತಿಗಳು ಸೇರಿದಂತೆ ಬೇರೆಲ್ಲ ಜನ ಸಮುದಾಯಗಳ ಸಭೆಗಳು ಆಗಬೇಕು. ಎಲ್ಲ ಶಾಲೆಗಳ ಶಿಕ್ಷಕರ ಹಾಗೂ ಕಾಲೇಜು ಉಪನ್ಯಾಾಸಕರ ಸಭೆಗಳು ಆಗಬೇಕು ಎಂದು ಸಚಿವರು ಶಾಸಕರು ಸಲಹೆ ಮಾಡಿದರು. ವಾಲ್ಮೀಕಿ ವಿಶ್ವವಿದ್ಯಾಾಲಯ ಸೇರಿದಂತೆ ಮಹತ್ವದ ಬೇರೆ ಬೇರೆ ವಿದ್ಯಾಾ ಸಂಸ್ಥೆೆಗಳಲ್ಲಿ ಸಹ ಬೇರೆ ಬೇರೆ ಕಾರ್ಯಕ್ರಮಗಳ ಆಯೋಜನೆ ಮಾಡಲು ಸಲಹೆ ಮಾಡಿದರು.
ಉತ್ಸವದ ಲೋಗೋ ವೀಕ್ಷಣೆ: ಸಭೆಯಲ್ಲಿ ಮೊದಲಿಗೆ ರಾಯಚೂರು ಉತ್ಸವದ ಲೋಗೊ ವೀಕ್ಷಣೆ ನಡೆಯಿತು. ಮುಖ್ಯ ಕಾರ್ಯಕ್ರಮದ ವೇದಿಕೆ ಹಾಗೂ ಹೆಸರಾಂತ ಕಲಾವಿದರು ಭಾಗಿಯಾಗುವ ಬೃಹತ್ ವೇದಿಕೆಗಳ ಪ್ರಾಾತ್ಯಕ್ಷಿಕೆಯ ವೀಕ್ಷಣೆಯ ನಡೆಯಿತು.
ಈ ವೇಳೆ ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿ, ಹತ್ತಾಾರು ವರ್ಷಗಳ ನಂತರ ಉತ್ಸವ ನಡೆಯುತ್ತಿಿದೆ. ಹಾಗಾಗಿ ಎಲ್ಲರನ್ನು ಒಳಗೊಂಡು ಉತ್ಸವ ನಡೆಯಬೇಕು. ಅಧಿಕಾರಿಗಳು ಉತ್ಸವದ ಕಾರ್ಯಗಳನ್ನು ಹಗರುವಾಗಿ ತೆಗೆದುಕೊಳ್ಳಬಾರದು. ಇದು ರಾಯಚೂರು ಸಿಟಿ ಉತ್ಸವ ಅಲ್ಲ; ಜಿಲ್ಲಾ ಉತ್ಸವವಾಗಿದೆ. ಹಾಗಾಗಿ ಎಲ್ಲರೂ ಪಕ್ಷಭೇದ ಮರೆತು ಒಗ್ಗೂಡಿ ಉತ್ಸವ ಮಾಡೋಣ ಎಂದು ಸಲಹೆ ಮಾಡಿದರು.
ಉತ್ಸವ ಬೇರೆ ಬೇರೆ ರೀತಿ ನಡೆಯುತ್ತದೆ. ಕ್ರೀೆಡಾ ಚಟುವಟಿಕೆ ಈಗ ಆರಂಭವಾಗಿವೆ. ರಾಜ್ಯಮಟ್ಟದ ವಾಲಿಬಾಲ್, ಕಬ್ಬಡ್ಡಿಿ ಪಂದ್ಯ ನಡೆಯಲಿವೆ. ಸೈಕ್ಲಿಿಂಗ್ ಮ್ಯಾಾರಾಥಾನ್, ಸೈಕ್ಲಿಿಂಗ್ ಓಟ, ಕುಸ್ತಿಿ ಪಂದ್ಯ, ಸಂಗ್ರಾಾಣಿ ಕಲ್ಲು ಎತ್ತುವ ಸ್ಪರ್ಧೆಗಳು ನಡೆಯಲಿವೆ. ಜನವರಿ 29ರಂದು ಬೆಳಗ್ಗೆೆ ಮೆರವಣಿಗೆ, ಸಂಜೆ 5ರಿಂದ ಉತ್ಸವದ ಉದ್ಘಾಾಟನೆ ನಡೆಯಲಿದೆ. ಜಿಲ್ಲಾ ರಂಗಮಂದಿರ, ಕೃಷಿ ವಿವಿ ಆವರಣದಲ್ಲಿನ ಕಾನ್ಫರೆನ್ಸ್ ಹಾಲ್ ಸೇರಿದಂತೆ ಒಟ್ಟು ನಾಲ್ಕು ಕಡೆಗಳಲ್ಲಿ ಏಕಕಾಲಕ್ಕೆೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವ್ಯವಸ್ಥೆೆ ಮಾಡಲಾಗಿದೆ. ಜನವರಿ 30 ರಂದು ಬೆಳಗ್ಗೆೆ ಉದ್ಯೋೋಗ ಮೇಳ ನಡೆಯಲಿದೆ. ಲಪುಷ್ಪ ಮೇಳ ದೊಡ್ಡ ಪ್ರಮಾಣದಲ್ಲಿ ಮಾಡಲಾಗುತ್ತಿಿದೆ. ಮತ್ಸ್ಯಮೇಳ, ಡಾಗ್ ಶೋ, ಶಾಲಾ ಮಕ್ಕಳಿಗಾಗಿ ಪ್ರಬಂಧ, ಸಾಹಿತಿಗಳಿಂದ ಕವಿಗೋಷ್ಟಿಿ, ಮಹಿಳಾ ಗೋಷ್ಠಿಿ, ಮಾಧ್ಯಮ ಗೋಷ್ಠಿಿ ನಡೆಸಲಾಗುತ್ತದೆ.
ಆಹಾರ ಮೇಳ ನಡೆಸಿ100 ಸ್ಟಾಾಲಗಳ ಅಳವಡಿಕೆಗೆ ಯೋಜನೆ ಮಾಡಿದ್ದೇವೆ. ಜನವರಿ 31ರಂದು ಗ್ಯಾಾರಂಟಿ ಮೇಳ ಬೆಳಗ್ಗೆೆ 10 ದಿಂದ 2 ಗಂಟೆವರೆಗೆ ಜೊತೆಗೆ ಕೃಷಿ ಮೇಳ ನಡೆಸಲು ಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೀಶ್ ಕೆ ಅವರು ಸಭೆಗೆ ವಿವರಿಸಿದರು.
ಸಭೆಯಲ್ಲಿ ತಾಲೂಕು ಗ್ಯಾಾರಂಟಿ ಸಮಿತಿಯ ಪವನ್ ಕಿಶೋರ್ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಾಧಿಕಾರಿ ಅರುಣಾಂಕ್ಷು ಗಿರಿ, ಮಹಾನಗರ ಪಾಲಿಕೆಯ ಆಯುಕ್ತ ಜುಬಿನ್ ಮೊಹಪಾತ್ರ, ಅಪರ ಜಿಲ್ಲಾಧಿಕಾರಿ ಶಿವಾನಂದ, ಪಾಲಿಕೆಯ ಸಮಿತಿ ಕಾರ್ಯದರ್ಶಿ ಕೃಷ್ಣ ಶಾವಂತಗೇರಿ, ತಹಸೀಲ್ದಾಾರ ಸುರೇಶ ವರ್ಮಾ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ಧರು.
ರಾಯಚೂರು ಉತ್ಸವ ಸಿದ್ಧತೆ; ಎಲ್ಲ ಜನಪ್ರತಿನಿಧಿಗಳ ಸಭೆ ಉತ್ಸವದ ಬೃಹತ್ ವೇದಿಕೆಗಳ, ನಾನಾ ಕಾರ್ಯಕ್ರಮಗಳ ಸ್ವರೂಪದ ಪ್ಲಾಾನ್ ವೀಕ್ಷಣೆ ನಡೆಸಿದ ಸಚಿವರು, ಶಾಸಕರು

