ಸುದ್ದಿಮೂಲ ವಾರ್ತೆ ರಾಯಚೂರು, ೆ.02:
ಎರಡು ದಶಕಗಳ ನಂತರ ರಾಯಚೂರು ಜಿಲ್ಲಾ ಉತ್ಸವಕ್ಕೆೆ ಕೆಲವೇ ದಿನಗಳು ಬಾಕಿ ಇರುವಾಗ ಜಿಲ್ಲಾಾಡಳಿತ ಬಿಡುಗಡೆ ಮಾಡಿದ ಆಮಂತ್ರಣ ಪತ್ರಿಿಕೆಯ ಉದ್ಘಾಾಟನೆ, ಸಮಾರೋಪದ ವೇದಿಕೆಯಲ್ಲಿ ರಾಜಕಾರಣಿಗಳದ್ದೆೆ ಸದ್ದು ಹೆಚ್ಚಿಿದ್ದು ಕಲೆ, ಸಾಹಿತ್ಯ,
ಸಂಗೀತ, ಜಾನಪದ ಹೀಗೆ ಸಾಂಸ್ಕೃತಿಕ ರಾಯಭಾರಿಗಳಿಗೆ ವೇದಿಕೆಯಲ್ಲಿ ಅವಕಾಶ ಇರದೇ ಇರುವುದು ಎಷ್ಟರ ಮಟ್ಟಿಿಗೆ ಸರಿ ಎಂದು ಸಾಹಿತಿ ಪಲುಗುಲ ನಾಗರಾಜ ಆಕ್ರೋೋಶ ವ್ಯಕ್ತಪಡಿಸಿದ್ದಾಾರೆ.
ಜಿಲ್ಲೆಯ ಉತ್ಸವ ಅಂದರೆ ಮನೆಯ ಹಬ್ಬ ಇದ್ದಂತೆ ಇಂತಹ ಉತ್ಸವಗಳಲ್ಲಿ ಜಿಲ್ಲೆಯ ಸಂಸ್ಕೃತಿಯ ಪ್ರತಿಬಿಂಬವಾದ ರಾಜ್ಯೋೋತ್ಸವ ಪುರಸ್ಕೃತರನ್ನು ಗೌರವಿಸುವ ಕರ್ತವ್ಯ ಆಗಬೇಕು. ಆದರೆ ರಾಯಚೂರು ಜಿಲ್ಲಾ ಉತ್ಸವ ಆಮಂತ್ರಣ ಪತ್ರಿಿಕೆಯ ಒಳಹೊಕ್ಕು ನೋಡಿದಾಗ ಉದ್ಘಾಾಟನೆ ಮತ್ತು ಸಮಾರೋಪ ಸಮಾರಂಭದಲ್ಲಿ ರಾಜಕಾರಣಿಗಳೇ ಕಾಣಿಸುತ್ತಿಿದ್ದಾರೆ ನಿಜಕ್ಕೂ ಇದು ಬೇಸರದ ಸಂಗತಿ, ಜಿಲ್ಲಾ ಉತ್ಸವಕ್ಕೆೆ ಸರ್ಕಾರ ಹಣ ಖರ್ಚು ಮಾಡುತ್ತಿಿರಬಹುದು ಆದರೆ ಅದು ಸಾರ್ವಜನಿಕ ತೆರಿಗೆ ಹಣ ಹೀಗಿರುವಾಗ ಕೇವಲ ರಾಜಕಾರಣಿಗಳಿಗೆ ವೇದಿಕೆ ಕೊಡುವುದು ಎಷ್ಟರ ಮಟ್ಟಿಿಗೆ ಸರಿ ?
ಸಾಂಸ್ಕೃತಿಕ ಸೇವೆಯಲ್ಲಿ ಜೀವನವನ್ನೇ ಮುಡುಪಾಗಿಟ್ಟು ದುಡಿದು ರಾಜ್ಯೋೋತ್ಸವ ಪಡೆದ ಹಿರಿಯರನ್ನು ವೇದಿಕೆ ಆಹ್ವಾಾನಿಸದೇ ಇರುವುದು ಸರಿಯೇ ? ನಮ್ಮವರಾದ ರಾಮಣ್ಣ ಹವಳೆ, ಡಾ.ಜಯಲಕ್ಷ್ಮಿಿ ಮಂಗಳಮೂರ್ತಿ, ನಾಟಕ ಕ್ಷೇತ್ರದಲ್ಲಿ ದುಡಿದ ಎನ್.ಸದಾಶಿವಪ್ಪ, ಸೂಲಗಿತ್ತಿಿ ಮಲ್ಲಮ್ಮ, ರತ್ನಮ್ಮ ದೇಸಾಯಿ, ಪಂ.ನರಸಿಂಹಲು ವಡವಾಟಿ ಹೀಗೆ ಹಲವರಿದ್ದರೂ ಅವರುಗಳನ್ನು ಉದ್ಘಾಾಟನೆ, ಸಮಾರೋಪ ಸಮಾರಂಭದ ವೇದಿಕೆಗೆ ಕರೆದ್ದರೆ ಜಿಲ್ಲೆಯ ಸಾಂಸ್ಕೃತಿಕ ಲೋಕಕ್ಕೆೆ ಮಾನ್ಯತೆ ನೀಡಿದಂತಾಗುತ್ತಿಿತ್ತು. ಈಗಲೂ ಕಾಲ ಮಿಂಚಿಲ್ಲ ಇಂತಹ ಅನೇಕ ಪ್ರತಿಭೆಗಳಿಗೆ ವೇದಿಕೆಗೆ ಅವಕಾಶ ನೀಡಿದರೆ ಈ ಎಡೆದೊರೆ ನಾಡಿನ ಕೀರ್ತಿ ಬೆಳೆದಂತಾಗುತ್ತದೆ ಜಿಲ್ಲಾಡಳಿತ ಅವಕಾಶ ಕೊಡಲು ಸಾಹಿತಿ ಪಲುಗುಲ ನಾಗರಾಜ ಮನವಿ ಮಾಡಿದ್ದಾಾರೆ.

