ಸುದ್ದಿಮೂಲ ವಾರ್ತೆ ರಾಯಚೂರು, ಡಿ.16:
ತಾಲೂಕು ಆಡಳಿತ, ತಾಲೂಕು ಪಂಚಾಯತ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಇವರುಗಳ ಸಂಯುಕ್ತಾಾಶ್ರಯದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆಯ ಅಂಗವಾಗಿ ರಾಯಚೂರು ತಾಲೂಕಾ ಮಟ್ಟದ ಪ್ರಬಂಧ ಸ್ಪರ್ಧೆ ಕಾರ್ಯಕ್ರಮವು ನಗರದ ಹಾಶ್ಮಿಿಯ ಸರ್ಕಾರಿ ಹಿರಿಯ ಪ್ರಾಾಥಮಿಕ ಶಾಲೆಯಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮಕ್ಕೆೆ ರಾಯಚೂರು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಡಾ. ಈರಣ್ಣ ಕೋಸಗಿ ಅವರು ಸಸಿಗೆ ನೀರು ಹಾಕುವುದರ ಮೂಲಕ ಉದ್ಘಾಾಟಿಸಿ, ಅವರು ಮಾತನಾಡಿ, ಚುನಾವಣೆಯ ಸಂದರ್ಭದಲ್ಲಿ ಒಂದೊಂದು ಮತವು ಅತ್ಯಮೂಲ್ಯವಾಗಿದೆ. ವಿದ್ಯಾಾರ್ಥಿಗಳಲ್ಲಿ ಮತದಾನದ ಜಾಗೃತಿಯ ಮೂಡಿಸಲು ಪ್ರತಿ ವರ್ಷ ರಾಷ್ಟ್ರೀಯ ಮತದಾರ ದಿನಾಚರಣೆ ಹಿನ್ನೆೆಲೆಯಲ್ಲಿ ಹಲವಾರು ಸ್ಪರ್ಧೆಗಳನ್ನು ಆಯೋಜನೆ ಮಾಡಲಾಗುತ್ತದೆ. ಸ್ಪರ್ಧೆಯಲ್ಲಿ ವಿದ್ಯಾಾರ್ಥಿಗಳು ಅಚ್ಚುಕಟ್ಟಾಾಗಿ ಭಾಗವಹಿಸಬೇಕು. ವಿದ್ಯಾಾರ್ಥಿಗಳು ಜಿಲ್ಲಾ, ರಾಜ್ಯಮಟ್ಟಕ್ಕೆೆ ಆಯ್ಕೆೆ ಆಗುವುದರ ಮೂಲಕ ರಾಯಚೂರು ತಾಲೂಕಿಗೆ ಕೀರ್ತಿ ತರಬೇಕೆಂದರು.
ಈ ವೇಳೆ ಮತದಾರರ ಸಾಕ್ಷರತಾ ಕ್ಲಬ್ ಜಿಲ್ಲಾ ನೋಡಲ್ ಅಧಿಕಾರಿ ಡಾ.ದಂಡಪ್ಪ ಬಿರಾದಾರ್ ಅವರು ಮಾತನಾಡಿ, ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ. ಲಿಖಿತ ಸಂವಿಧಾನ ಹೊಂದಿರುವಂತಹ ದೇಶ. ನಮ್ಮ ದೇಶದಲ್ಲಿ ಜನನಾಯಕನ ಆಯ್ಕೆೆ ಮಾಡಲು ಮತದಾನದ ಮೂಲಕ ಆಯ್ಕೆೆ ಮಾಡುತ್ತಿಿರುವುದು ತಮಗೆಲ್ಲ ತಿಳಿದಿರುವ ವಿಷಯ.
ಈ ಒಂದು ಪ್ರಬಂಧ ಸ್ಪರ್ಧೆಯನ್ನು ಶಾಲಾ ಮಟ್ಟದಲ್ಲಿ ಮುಖ್ಯ ಗುರುಗಳು ನೇತೃತ್ವದಲ್ಲಿ ನಡೆಯುತ್ತದೆ. ತಾಲೂಕ ಮಟ್ಟದಲ್ಲಿ ಕ್ಷೇತ್ರ ಶಿಕ್ಷಣ ಅಧಿಕಾರಿಗಳ ಮಾರ್ಗದರ್ಶನದಲ್ಲಿ ನಡೆಯುತ್ತದೆ. ವಿದ್ಯಾಾರ್ಥಿಗಳು ಈ ಒಂದು ಸ್ಪರ್ಧೆಯಲ್ಲಿ ಪ್ರಥಮ, ದ್ವಿಿತೀಯ ಹಾಗೂ ತೃತೀಯ ಸ್ಥಾಾನ ಆಯ್ಕೆೆ ಮಾಡಲಾಗುತ್ತದೆ ಎಂದರು.
ಜಿಲ್ಲಾ ಮಟ್ಟಕ್ಕೆೆ ಪ್ರಥಮ ಹಾಗೂ ದ್ವಿಿತೀಯ ಸ್ಥಾಾನವನ್ನು ಪಡೆದಂತ ವಿದ್ಯಾಾರ್ಥಿಗಳ ಹೆಸರನ್ನ ಕಳಿಸಿಕೊಡಲಾಗುತ್ತದೆ. ತಾಲೂಕ ಜಿಲ್ಲಾ ಮತ್ತು ರಾಜ್ಯ ಮಟ್ಟಕೆ ಆಯ್ಕೆೆ ಆದಂತಹ ವಿದ್ಯಾಾರ್ಥಿಗಳಿಗೆ ರಾಷ್ಟ್ರೀಯ ಮತದಾರ ದಿನಾಚರಣೆ ದಿನದಂದು ಪ್ರಶಸ್ತಿಿ ಪತ್ರ ಮತ್ತು ಬಹುಮಾನ ಕೊಟ್ಟು ಗೌರವಿಸಲಾಗುವುದು ಎಂದರು.
ಈ ವೇಳೆ ಹಾಸ್ಮಿಿಯ ಸರ್ಕಾರಿ ಹಿರಿಯ ಪ್ರಾಾಥಮಿಕ ಶಾಲೆಯ ಮುಖ್ಯ ಗುರುಗಳಾದ ಮಹದೇವಪ್ಪ ಮಿರ್ಜಾಪುರ್ ಅವರು ಮಾತನಾಡಿ, ವಿದ್ಯಾಾರ್ಥಿಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆೆ, ಮತದಾನದ ಬಗ್ಗೆೆ ಜೊತೆಗೆ ರಾಷ್ಟ್ರೀಯ ಮತದಾರರ ದಿನಾಚರಣೆಯ ವಿಷಯ ತಿಳಿದುಕೊಳ್ಳಲು ಇದು ಅತ್ಯುತ್ತಮ ಕಾರ್ಯಕ್ರಮ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ತಾಲೂಕ ಮತದಾರ ಸಾಕ್ಷರತಾ ಕ್ಲಬ್ ನೋಡಲ್ ಸಂಯೋಜಕ ಸಿ.ಪಿ.ಓದಿಸೋಮಠ, ಶಿಕ್ಷಣ ಸಂಯೋಜಕ ರಾಘವೇಂದ್ರ, ಶಿಕ್ಷಕರಾದ ಸೌಮ್ಯಶ್ರೀ, ವೆಂಕಟೇಶ ನವಲಿ ಸೇರಿದಂತೆ ತಾಲ್ಲೂಕಿನ ವಿವಿಧ ಪ್ರೌೌಢ ಶಾಲಾ ವಿದ್ಯಾಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊೊಂಡಿದ್ದರು.
ಪ್ರಜಾಪ್ರಭುತ್ವದಲ್ಲಿ ಮತದಾನದ ಪಾತ್ರ ಮಹತ್ವದ್ದು : ಡಾ.ಈರಣ್ಣ ಕೋಸಗಿ

