ಸುದ್ದಿಮೂಲ ವಾರ್ತೆ ಕೊಪ್ಪಳ, ೆ.06:
ಕಳೆದ ವರ್ಷ ಇಡೀ ಜಗತ್ತಿಿನಲ್ಲಿ ಭಾರತದ ಮರ್ಯಾದೆ ತೆಗೆದಿದ್ದ ಸಾಣಾಪುರದಲ್ಲಿ ವಿದೇಶಿ ಹಾಗು ಹೊಟೆಲ್ ಮಾಲೀಕಳ ಮೇಲೆ ಅತ್ಯಾಾಚಾರವೆಸಗಿದ್ದು ತಡೆಯಲು ಬಂದ ಓಡಿ
ಸ್ಸಾಾ ಮೂಲದ ವ್ಯಕ್ತಿಿಯನ್ನು ಕಾಲುವೆ ನೂಕಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಭಾಗಿಯಾದ ಮೂವರು ಆರೋಪಿಗಳೆಂದು ಸಾಬೀತಾಗಿದೆ. ಅವರಿಗೆ ೆ 13 ರಂದು ಶಿಕ್ಷೆಯ ಪ್ರಮಾಣ ಘೋಷಿಸಲಾಗುವುದು.
ಪುಣ್ಯಭೂಮಿ ಅಂಜನಾದ್ರಿಿಯ ನಾಡಿನಲ್ಲಿ ನಡೆದಿದ್ದ ಆ ಒಂದು ಹೀನ ಕೃತ್ಯ ಇಡೀ ದೇಶವನ್ನೇ ತಲೆತಗ್ಗಿಿಸುವಂತೆ ಮಾಡಿತ್ತು. ಧರ್ಮ ಮತ್ತು ಸಂಸ್ಕೃತಿಯ ನೆಲೆವೀಡಿನಲ್ಲಿ ಕಾಮುಕರು ಅಂದು ನಡೆಸಿದ್ದ ಆ ರಾಕ್ಷಸೀ ಅಟ್ಟಹಾಸಕ್ಕೆೆ ಇಂದು ನ್ಯಾಾಯಾಲಯ ಅಂತಿಮ ಮುದ್ರೆೆ ಒತ್ತಿಿದೆ. ಪ್ರವಾಸಿಗರ ಸ್ವರ್ಗದಲ್ಲಿ ಮಹಿಳೆಯರ ಮೇಲೆ ಕೈಹಾಕಿ, ಅಡ್ಡ ಬಂದವರನ್ನು ಹತ್ಯೆೆಗೈದಿದ್ದ ಆ ಕಿರಾತಕರ ಕೃತ್ಯ ಸಾಬೀತಾಗಿದೆ. ದೂರು ದಾಖಲಾದ ಕೇವಲ 11 ತಿಂಗಳಲ್ಲೇ ನ್ಯಾಾಯಾಲಯ ನೀಡಿರುವ ಆ ಐತಿಹಾಸಿಕ ತೀರ್ಪು ಇಡೀ ರಾಜ್ಯದ ಗಮನ ಸೆಳೆದಿದೆ.
ಮಾರ್ಚ್ 6 2025. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿಿ ಬೆಟ್ಟದ ತಪ್ಪಲಿನ ಸಣಾಪುರ ಕೆರೆ ಹತ್ತಿಿರ ಆ ಕರಾಳ ಘಟನೆ ನಡೆದಿತ್ತು. ವಿದೇಶಿ ಹಾಗೂ ಹೊರರಾಜ್ಯದ ಮಹಿಳೆಯರು ಪ್ರಕೃತಿಯ ಸೌಂದರ್ಯ ಸವಿಯುತ್ತಿಿದ್ದಾಗ, ಅಲ್ಲಿಗೆ ಬಂದಿದ್ದ ಮೂವರು ಕಾಮುಕರು ಅತ್ಯಾಾಚಾರಕ್ಕೆೆ ಸಂಚು ರೂಪಿಸಿದ್ದರು. ಈ ಸಂದರ್ಭದಲ್ಲಿ ಕಾಮುಕರ ಅಟ್ಟಹಾಸವನ್ನು ತಡೆಯಲು ಹೊರರಾಜ್ಯದ ಯುವಕನೊಬ್ಬ ಮುಂದಾಗಿದ್ದ. ಆದರೆ, ಮನುಷ್ಯತ್ವ ಮರೆತಿದ್ದ ಆ ಕಿರಾತಕರು ಆತನನ್ನೇ ಬರ್ಬರವಾಗಿ ಕೊಲೆ ಮಾಡಿ ಅಟ್ಟಹಾಸ ಮೆರೆದಿದ್ದರು. ಈ ಹೀನ ಕೃತ್ಯದಿಂದ ಇಡೀ ದೇಶವೇ ಬೆಚ್ಚಿಿಬಿದ್ದಿತ್ತು.ಪ್ರಕರಣ ದಾಖಲಾದ ಕೂಡಲೇ ಎಚ್ಚೆೆತ್ತ ಪೊಲೀಸರು ಚುರುಕಾದ ಕಾರ್ಯಾಚರಣೆ ನಡೆಸಿ ಕಾಮುಕರನ್ನು ಜೈಲಿಗಟ್ಟಿಿದ್ದರು. ಗಂಗಾವತಿಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಾಯಾಲಯದಲ್ಲಿ ಸತತ 11 ತಿಂಗಳುಗಳ ಕಾಲ ವಿಚಾರಣೆ ನಡೆಯಿತು. ಸಾಯಿನಗರದ ಮಲ್ಲೇಶ್ ಅಲಿಯಾಸ್ ಹಂದಿಮಲ್ಲ, ಸಾಯಿ ಅಲಿಯಾಸ್ ಚೈತನ್ಯ ಸಾಯಿ ಹಾಗೂ ಶರಣಪ್ಪ ಮಾಡಿದ್ದ ತಪ್ಪಿಿಗೆ ಕ್ಷಮೆಯೇ ಇಲ್ಲ ಎಂಬುದು ವಿಚಾರಣೆ ವೇಳೆ ಸಾಬೀತಾಯಿತು. ಪ್ರವಾಸಿ ತಾಣದಲ್ಲಿ ಮಹಿಳೆಯರ ಸುರಕ್ಷತೆಗೆ ಧಕ್ಕೆೆ ತಂದ ಈ ಮೂವರ ವಿರುದ್ಧ ಬಲವಾದ ಸಾಕ್ಷ್ಯಗಳನ್ನು ಕೋರ್ಟ್ಗೆ ಹಾಜರುಪಡಿಸಲಾಗಿತ್ತು.
ಇಂದು ನ್ಯಾಾಯಪೀಠವು ಈ ಪ್ರಕರಣದಲ್ಲಿ ಐತಿಹಾಸಿಕ ತೀರ್ಪು ಪ್ರಕಟಿಸಿದೆ. ಕೃತ್ಯವೆಸಗಿದ ಮೂವರು ಅಪರಾಧಿಗಳೆಂದು ಸಾಬೀತಾಗಿದೆ.
ಅಂಜನಾದ್ರಿಿ ನಾಡಿನ ಪಾವಿತ್ರ್ಯತೆಗೆ ಮಸಿ ಬಳಿದ ಈ ಕಾಮುಕರಿಗೆ ಶಿಕ್ಷೆ ಸಾಬೀತಾಗಿದೆ. ೆಬ್ರವರಿ 16 ರಂದು ಶಿಕ್ಷೆಯ ಪ್ರಮಾಣ ಘೋಷಣೆಯಾಗಿದ್ದು, ಇದರ ಸಂಪೂರ್ಣ ವಿವರಗಳನ್ನು ಮತ್ತು ಮುಂದಿನ ಪ್ರಕ್ರಿಿಯೆಗಳನ್ನು ಮುಂದಿನ ವಿಚಾರಣೆಯ ದಿನದಂದು ನ್ಯಾಾಯಾಲಯ ಅಧಿಕೃತವಾಗಿ ಪ್ರಕಟಿಸಲಿದೆ.
ಸಾಣಾಪುರ ಅತ್ಯಾಚಾರ ಪ್ರಕರಣ ಆರೋಪ ಸಾಬೀತು

