ಸುದ್ದಿಮೂಲ ವಾರ್ತೆ ಬೆಳಗಾವಿ, ಡಿ.08:
ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಕಲ್ಯಾಾಣ ಮಂಡಳಿಯಲ್ಲಿ ರಾಜ್ಯದ 32 ಕಡೆಗಳಲ್ಲಿ ಸುಮಾರು 784 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಶ್ರಮಿಕ ವಸತಿ ಸಹಿತ ಶಾಲೆಗಳ ಟೆಂಡರ್ ಪ್ರಕ್ರಿಿಯೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.
ವಿಧಾನ ಪರಿಷತ್ನಲ್ಲಿ ಸದಸ್ಯ ಗೋವಿಂದ ರಾಜು ಅವರ ಗಮನ ಸೆಳೆಯುವ ಸೂಚನೆಗೆ ಉತ್ತರ ನೀಡಿರುವ ಅವರು, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಾಣ ಮಂಡಳಿಯ ವತಿಯಿಂದ ಅವರ ಮಕ್ಕಳ ವಿದ್ಯಾಾಭ್ಯಾಾಸಕ್ಕೆೆ ಪ್ರೋೋತ್ಸಾಾಹ ನೀಡಲು ವಸತಿ ಶಾಲೆಗಳನ್ನು ನಿರ್ಮಾಣ ಮಾಡಲು ಸರ್ಕಾರದ ಆಡಳಿತಾತ್ಮಕ ಅನುಮೋದನೆಯನ್ವಯ ಟೆಂಡರ್ಕರೆಯಲಾಗಿದ್ದು, ಪ್ರಸ್ತುತ ವಿವಿಧ ಬಿಡ್ದಾರರ ಬಿಡ್ಗಳ ಮೌಲ್ಯಮಾಪನ ಕಾರ್ಯ ನಡೆಸಲಾಗುತ್ತಿಿದೆ ಎಂದರು.
ಕೆಟಿಪಿಪಿ ಕಾಯ್ದೆೆ ಮತ್ತು ನಿಯಮಗಳನ್ವಯ ಇ-ಪ್ರೊೊಕ್ಯೂರ್ಮೆಂಟ್ ಪೋರ್ಟಲ್ನಲ್ಲಿ ಮುಕ್ತ ಟೆಂಡರ್ ಕರೆಯಲಾಗಿದ್ದು, ಅರ್ಹತಾ ಮಾನದಂಡಗಳನ್ನು ಪೂರೈಸುವ ಯಾವುದೇ ಬಿಡ್ದಾರರು ಟೆಂಡರ್ಪ್ರಕ್ರಿಿಯೆಯಲ್ಲಿ ಭಾಗವಹಿಸಲು ಅವಕಾಶವನ್ನು ನೀಡಲಾಗಿರುತ್ತದೆ. ಈ ಕಾಮಗಾರಿಯ ಸಮರ್ಪಕ ನಿರ್ವಹಣೆ ಅನುಷ್ಠಾಾನ ಹಾಗೂ ಮೇಲುಸ್ತುವಾರಿಗೆ ಅನುಕೂಲವಾಗುವಂತೆ ರಾಜ್ಯದ ಕಂದಾಯ ವಿಭಾಗವಾರು ಟೆಂಡರ್ ಕರೆಯಲಾಗಿರುತ್ತದೆ ಎಂದರು.
ಕೇಂದ್ರ ಕಾರ್ಮಿಕ ಮತ್ತು ಉದ್ಯೋೋಗ ಮಂತ್ರಾಾಲಯವು ಹೊರಡಿಸಿರುವ ಸುತ್ತೋೋಲೆಯನ್ವಯ ಮಂಡಳಿಯ ವತಿಯಿಂದ ವಸತಿ ಶಾಲೆಯನ್ನು ನಿರ್ಮಿಸಲು ಕ್ರಮಕೈಗೊಳ್ಳಲಾಗುತ್ತಿಿದೆ. ಮಂಡಳಿಯಿಂದ ಸ್ಥಾಾಪಿಸಲು ಉದ್ದೇಶಿಸಿರುವ ಶಾಲೆಗಳು ವಸತಿ ಶಾಲೆಗಳಾಗಿದ್ದು ಸರ್ಕಾರಿ ಶಾಲೆಗಳು ವಸತಿ ಶಾಲೆಗಳಾಗಿರುವುದಿಲ್ಲ. ಆದುದರಿಂದ, ಈ ಯೋಜನೆಯ ಪ್ರಸ್ತಾಾವನೆಯ ಹಂತದಲ್ಲಿ ವಸತಿ ಶಾಲೆಗಳನ್ನು ನಿರ್ಮಿಸಿ ನಿರ್ವಹಿಸುತ್ತಿಿರುವ ಸಮಾಜ ಕಲ್ಯಾಾಣ ಇಲಾಖೆಯ ಅಧೀನದ ಸರ್ಕಾರದ ಸಂಸ್ಥೆೆಯಾದ ಕೆರೈಸ್ ನಿಂದ ಅಗತ್ಯ ಮಾಹಿತಿ ಪಡೆಯಲಾಗಿದೆ ಎಂದು ಹೇಳಿದ್ದಾರೆ.
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ (ಉದ್ಯೋೋಗದ ಕ್ರಮೀಕರಣ ಮತ್ತು ಸೇವಾ ಷರತ್ತುಗಳು) ಕಾಯ್ದೆೆ, 1996 ಮತ್ತು ಕರ್ನಾಟಕ ನಿಯಮಗಳು 2006 ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಮತ್ತು ಅವರ ಅವಲಂಬಿತರ ಕಲ್ಯಾಾಣ ಮತ್ತು ಸಾಮಾಜಿಕ ಸುರಕ್ಷತೆಗಾಗಿ ಇರುವ ಶಾಸನವಾಗಿದ್ದು, ಈ ಕಾಯ್ದೆೆಯಡಿ ಸಂಗ್ರಹವಾದ ಸುಂಕ ಮೊತ್ತವನ್ನು ಸರ್ಕಾರದ ಯಾವುದೇ ಯೋಜನೆಗಳಿಗೆ ವಿನಿಯೋಗಿಸಲು ಅವಕಾಶವಿರುವುದಿಲ್ಲ ಎಂದಿದ್ದಾರೆ.

