ಸುದ್ದಿಮೂಲ ವಾರ್ತೆ ರಾಯಚೂರು, ಡಿ.23:
ಪೆನ್ಕಾಕ್ ಸಿಲಾಟ್ ಆಗ್ನೇಯ ಏಷ್ಯಾಾದ ಸಾಂಪ್ರದಾಯಿಕ ಸಮರ ಕಲೆ ಇದು ಕೇವಲ ಆತ್ಮರಕ್ಷಣೆಗಷ್ಟೇ ಸೀಮಿತವಾಗಿಲ್ಲ ಬದಲಿಗೆ ದೈಹಿಕ ಸಾಮರ್ಥ್ಯ, ಮಾನಸಿಕ ಶಿಸ್ತು, ಆಧ್ಯಾಾತ್ಮಿಿಕ ಸಮತೋಲನ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಒಳಗೊಂಡಿದೆ ಎಂದು ಕೆಪಿಸಿಎಲ್ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರಾದ ಮಹೇಶ್ ಪೊಲೀಸ್ ಪಾಟೀಲ್ ಹೇಳಿದರು.
ಅವರಿಂದು ತಾಲೂಕಿನ ಶಕ್ತಿಿನಗರದ ಬಸವ ಕಲ್ಯಾಾಣ ಮಂಟಪದಲ್ಲಿ ಪೆನ್ಕಾಕ್ ಸಿಲತ್ ಸ್ಪೋೋರ್ಟ್ಸ್ ಅಸೋಸಿಯೇಷನ ಸಂಸ್ಥೆೆ ನೇತೃತ್ವದಲ್ಲಿ ರಾಯಚೂರು ಜಿಲ್ಲಾ ಮಟ್ಟದ ಪೆನ್ಕಾಕ್ ಪಂದ್ಯಾಾವಳಿಗೆ ಚಾಲನೆ ನೀಡಿ ಮಾತನಾಡಿದರು. ಪೆನ್ಕಾಕ್ ಸಿಲಾಟ್ನ ಮುಖ್ಯವಾಗಿ ಇದು ನೈಸರ್ಗಿಕ ದೇಹದ ಚಲನೆಗಳನ್ನು ಬಳಸುತ್ತದೆ ಸಮತೋಲನ ಮತ್ತು ಚಲನೆಯನ್ನು ಸುಧಾರಿಸುತ್ತದೆ ಇದು ಇಂಡೋನೇಷ್ಯಾಾ ಮತ್ತು ಮಲೇಷಿಯಾದಿಂದ ಬಂದ ಆಟವಾಗಿದೆ ಎಂದರು.
ಸಂಸ್ಕೃತಿ ಮತ್ತು ಜೀವನ ತತ್ವಗಳನ್ನು ಒಳಗೊಂಡಿದೆ. ಇದು ಶಿಸ್ತು, ಗೌರವ ಮತ್ತು ಜವಾಬ್ದಾಾರಿ ಕಲಿಸುತ್ತದೆ. ಇದನ್ನು ಕ್ರೀಡೆಯಾಗಿ ಏಷ್ಯನ್ ಆಟಗಳಂತಹ ದೊಡ್ಡ ಪಂದ್ಯಾಾವಳಿಗಳಲ್ಲಿ ಸೇರಿಸಲಾಗಿದೆ ಮತ್ತು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆಗಳು ನಡೆಯುತ್ತವೆ ಎಂದರು.
ನಂತರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಪಿಸಿಎಲ್ನ ಔಷಧ ವಿಭಾಗದ ಜೆಸಿಐ ಅಧ್ಯಕ್ಷ ಗೌತಮ್ ಕಟ್ಟಿಿಮನಿ ಮಾತನಾಡಿ ಪೆನ್ಕಾಾಕ್ ಸಿಲಾಟ್ ಒಂದು ಸಂಪೂರ್ಣ ಕಲಾ ಪ್ರಕಾರವಾಗಿದೆ.
ಆತ್ಮರಕ್ಷಣೆ, ದೈಹಿಕ ಮತ್ತು ಮಾನಸಿಕ ತರಬೇತಿ, ಮತ್ತು ಸಾಂಸ್ಕೃತಿಕ ಪ್ರಜ್ಞೆಯನ್ನು ಒದಗಿಸುತ್ತದೆ ಹೃದಯ ಸಂಬಂಧಿ ಫಿಟ್ನೆೆಸ್, ನಮ್ಯತೆ ಮತ್ತು ಒಟ್ಟಾಾರೆ ದೈಹಿಕ ಸಾಮರ್ಥ್ಯ ಹೆಚ್ಚಿಿಸುತ್ತದೆ ಭಾರತೀಯ ಪೆನ್ಕಾಾಕ್ ಸಿಲಾಟ್ ೆಡರೇಶನ್ ಭಾರತದಲ್ಲಿ ಕ್ರೀೆಡೆಯನ್ನು ಉತ್ತೇಜಿಸಲು ರಾಷ್ಟ್ರೀಯ ಕ್ರೀೆಡಾ ೆಡರೇಶನ್ ಇದೆ. ಇದು ಭಾರತ ಸರ್ಕಾರದ ಯುವಜನ ಸೇವೆ ಮತ್ತು ಕ್ರೀೆಡಾ ಸಚಿವಾಲಯದಿಂದ ಗುರುತಿಸಲ್ಪಟ್ಟಿಿದೆ ಎಂದರು.
ಮುದಗಲ್ನ ರೆಹಮಾನ್ ತಂಡ, ಲಕ್ಕಿಿ ಫಿಟ್ನೆೆಸ್ನ ತಂಡ, ಕೆಪಿಸಿಎಲ್ ಡಿಎವಿ ಶಾಲಾ ತಂಡ, ಗಂಜಳ್ಳಿಿ ಸರ್ಕಾರಿ ಕಿರಿಯ ಪ್ರಾಾಥಮಿಕ ಶಾಲೆ, ಯದ್ಲಾಾಪುರ ಸರ್ಕಾರಿ ಹಿರಿಯ ಪ್ರಾಾಥಮಿಕ ಶಾಲೆಯ ಮಕ್ಕಳು ಬಹಳ ಅತ್ಯುತ್ಸಾಾಹದಿಂದ ಪಂದ್ಯಾಾವಳಿಗಳಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಮಾಸ್ಟರ್ ಲಕ್ಷ್ಮೀಘಿ, ಗುತ್ತಿಿಗೆದಾರ ಶರಣೇಗೌಡ, ಕಾರ್ಯದರ್ಶಿ ಸಿದ್ಧಪ್ಪ , ಖಜಾಂಚಿ ಬಸವನಗೌಡ ಸುಜಾತಾ, ಸವಿತಾ ಮುರಳಿಕೃಷ್ಣ ಪಾಲಕರು, ಪೋಷಕರು ಇದ್ದರು.
ಶಕ್ತಿಿನಗರ : ಜಿಲ್ಲಾ ಮಟ್ಟದ ಪೆನ್ಕಾಕ್ ಪಂದ್ಯಾಾವಳಿಗೆ ಚಾಲನೆ ಪೆನ್ಕಾಕ್ ಸಾಂಪ್ರದಾಯಿಕ ಕಲೆ, ಆಟಗಳ ಕೂಟ- ಮಹೇಶಪಾಟೀಲ

