ಸುದ್ದಿಮೂಲ ವಾರ್ತೆ ಮೈಸೂರು, ಜ.12:
ಕಾಂಗ್ರೆೆಸ್ ನಾಯಕರಾದ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮಂಗಳವಾರ (ಜ. 13) ತಮಿಳುನಾಡು ಪ್ರವಾಸ ಕೈಗೊಂಡಿದ್ದು ಈ ವೇಳೆ ಮೈಸೂರಿನ ಮಂಡಕಳ್ಳಿಿ ವಿಮಾನ ನಿಲ್ದಾಾಣದಲ್ಲಿ ಆಗಮಿಸಿ ಇಲ್ಲಿಂದ ತೆರಳಲಿದ್ದಾರೆ.
ರಾಹುಲ್ ಗಾಂದಿ ಅವರನ್ನು ಸ್ವಾಾಗತಿಸಲು ಸಿಎಂ ಸಿದ್ದರಾಮಯ್ಯ ಬೆಂಗಳೂರಿನಿಂದ ಮೈಸೂರಿಗೆ ಆಗಮಿಸಲಿದ್ದು, ಮಧ್ಯಾಾಹ್ನ ಮಂಡಕಳ್ಳಿಿ ವಿಮಾನ ನಿಲ್ದಾಾಣದಲ್ಲಿ ವಿಮಾನ ಬದಲಾವಣೆಗೆ ರಾಹುಲ್ ಗಾಂಧಿ ಕೆಲ ಕಾಲ ತಂಗಲಿದ್ದಾರೆ. ಈ ಸಂದರ್ಭ ರಾಹುಲ್ ಗಾಂಧಿಗೆ ಸ್ವಾಾಗತ ಕೋರಲು ಮುಖ್ಯಮಂತ್ರಿಿ ಸಿದ್ದರಾಮಯ್ಯ ಅವರು ಬೆಂಗಳೂರಿನಿಂದ ಮೈಸೂರಿಗೆ ವಿಶೇಷ ವಿಮಾನದ ಮೂಲಕ ಆಗಮಿಸುತ್ತಿಿದ್ದಾರೆ. ಈ ವೇಳೆ ಉಪಮುಖ್ಯಮಂತ್ರಿಿ ಡಿ.ಕೆ. ಶಿವಕುಮಾರ್ ಸಹ ಸಿಎಂ ಜೊತೆ ಪ್ರಯಾಣ ಬೆಳೆಸಲಿದ್ದಾರೆ.
ಮಧ್ಯಾಾಹ್ನ 2.20ಕ್ಕೆೆ ಆಗಮಿಸುವ ರಾಹುಲ್ ಗಾಂಧಿ ಅವರು 2.35ಕ್ಕೆೆ ನೀಲಲಗಿರಿ ಜಿಲ್ಲೆಯ ಗೂಡ್ಲುರಿಗೆ ತೆರಳಿ ಖಾಸಗಿ ಶಾಲೆಯ ಗೋಲ್ಡನ್ ಜ್ಯೂಬ್ಲಿಿ ಸಮಾರಂಭದಲ್ಲಿ ಭಾಗವಹಿಸಿ ಸಂಜೆ ಮತ್ತೆೆ ಮೈಸೂರು ವಿಮಾನ ನಿಲ್ದಾಾಣಕ್ಕೆೆ ಆಗಮಿಸಿ ಅಲ್ಲಿಂದ ದೆಹಲಿಗೆ ತೆರಳುವರು.
ನಾಳೆ ಮಧ್ಯಾಾಹ್ನ ರಾಹುಲ್ ಆಗಮಿಸಿದಾಗ ಸ್ವಾಾಗತಿಸಿ, ಬಳಿಕ ಸಂಜೆ ಹಿಂದಿರುಗುವಾಗ ಬೀಳ್ಕೊೊಡುಗೆ ನೀಡಲು (ಸಂಜೆ 5.45 ಕ್ಕೆೆ ಆಗಮನ, 6 ಗಂಟೆಗೆ ನಿರ್ಗಮನ) ಸಿಎಂ ಸಿದ್ದರಾಮಯ್ಯ ಮೈಸೂರಿಗೆ ಬರುತ್ತಿಿರುವುದು. ಇದು ರಾಜಕೀಯ ವಲಯದಲ್ಲಿ ಹಲವು ವ್ಯಾಾಖ್ಯಾಾನಗಳಿಗೆ ಕಾರಣವಾಗಿದೆ.
ಮಂಡಕಳ್ಳಿಿ ವಿಮಾನ ನಿಲ್ದಾಾಣದಲ್ಲಿ ಕೆಲಕಾಲ ತಂಗಲಿರುವ ರಾಹುಲ್ ಗಾಂಧಿ ಸ್ವಾಾಗತಿಸಲು ಸಿಎಂ ಸಿದ್ದರಾಮಯ್ಯ ಖುದ್ದು ಧಾವಿಸುತ್ತಿಿರುವುದು, ಪಕ್ಷದ ಒಳಗಿನ ಶಕ್ತಿಿ ಸಮತೋಲನ, ನಾಯಕತ್ವದ ಗೌರವ ಹಾಗೂ ರಾಜಕೀಯ ಸಂದೇಶದ ದೃಷ್ಟಿಿಯಿಂದ ಮಹತ್ವ ಪಡೆದುಕೊಂಡಿದೆ.
ಹೈಕಮಾಂಡ್ಗೆ ನಿಷ್ಠೆೆ ಸಂದೇಶ ರವಾನೆ?
ಸಾಮಾನ್ಯವಾಗಿ ಪ್ರೋೋಟೋಕಾಲ್ ಮಟ್ಟದ ಭೇಟಿಗೆ ಉನ್ನತ ಮಟ್ಟದ ಅಧಿಕಾರಿಗಳು ಅಥವಾ ಪಕ್ಷದ ನಾಯಕರು ಹೋಗುವುದು ರೂಢಿ. ಆದರೆ ಈ ಬಾರಿ ಮುಖ್ಯಮಂತ್ರಿಿಗಳೇ ತಾವೇ ಬೆಂಗಳೂರಿನಿಂದ ಮೈಸೂರಿಗೆ ಬರುತ್ತಿಿದ್ದಾರೆ. ಕೆಲ ನಿಮಿಷಗಳಾದರೂ ರಾಹುಲ್ ಗಾಂಧಿ ಜತೆಗೆ ಸಮಯ ಕಳೆಯುವುದು, ಹೈಕಮಾಂಡ್ಗೆ ನಿಷ್ಠೆೆ, ಕೇಂದ್ರ ನಾಯಕತ್ವದೊಂದಿಗೆ ಆತ್ಮೀಯ ಸಂಬಂಧ ಎಂಬ ಸಂದೇಶವನ್ನು ಸ್ಪಷ್ಟವಾಗಿ ರವಾನಿಸುವ ಉದ್ದೇಶವಿರಬಹುದೇ ? ಎಂದು ಹೇಳಲಾಗುತ್ತಿಿದೆ.
ಇನ್ನೊೊಂದು ಕಡೆ, ರಾಜ್ಯದ ಆಡಳಿತದ ಹೊಣೆ ಹೊತ್ತಿಿರುವ ಮುಖ್ಯಮಂತ್ರಿಿ ತಮ್ಮ ದಿನನಿತ್ಯದ ಕಾರ್ಯಕ್ರಮಗಳನ್ನು ಬಿಟ್ಟು ಕೇವಲ ವಿಮಾನ ಬದಲಾವಣೆಯ ಸಂದರ್ಭಕ್ಕೆೆ ತೆರಳಿರುವುದನ್ನು ವಿರೋಧ ಪಕ್ಷಗಳ ಕೆಂಗಣ್ಣಿಿಗೆ ಗುರಿಯಾಗುವ ಸಾಧ್ಯತೆಯೂ ಇದೆ.
ಒಟ್ಟಾಾರೆ, ಈ ಘಟನೆ ಕೇವಲ ಪ್ರೋೋಟೋಕಾಲ್ ವಿಷಯವಲ್ಲ, ಬದಲಾಗಿ ಕಾಂಗ್ರೆೆಸ್ ಪಕ್ಷದ ಒಳರಾಜಕೀಯ, ನಾಯಕತ್ವದ ಮಹತ್ವ ಹಾಗೂ ಹೈಕಮಾಂಡ್-ರಾಜ್ಯ ಸರ್ಕಾರದ ಸಂಬಂಧದ ರಾಜಕೀಯ ಸಂಕೇತವಾಗಿ ವಿಶ್ಲೇಷಿಸಲಾಗುತ್ತಿಿದೆ.

