ಸುದ್ದಿಮೂಲ ವಾರ್ತೆ ಜಾಲಹಳ್ಳಿ, ಜ.31:
ಸಂಸ್ಕಾಾರ ಇಲ್ಲದೇ ಇರುವ ಸಮಾಜದಲ್ಲಿ ಜೀವನ ನಡೆಸುತ್ತಿಿರುವ ಜನಕ್ಕೆೆ ಸಂಸ್ಕಾಾರ ಕಲಿಸಿದವರು ಕನಕಗುರು ಪೀಠದ ಸಿದ್ದರಾಮಾನಂದ ಸ್ವಾಾಮೀಜಿ ಅವರು ಎಂದು ಇಲಕಲ್ ಮಠದ ಮಹಾಂತ ಸ್ವಾಾಮೀಜಿ ಸ್ಮದರು.
ಅವರು ಶನಿವಾರ ತಿಂಥಣಿ ಬ್ರಿಿಜ್ ಹತ್ತಿಿರದ ಕಲಬುರ್ಗಿ ವಿಭಾಗದ ಕಾಗಿನೆಲೆ ಕನಕಗುರು ಪೀಠದಲ್ಲಿ ಹಮ್ಮಿಿಕೊಂಡ ನುಡಿ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಜ.15 ರಂದು ಈ ಮಠದ ಸಿದ್ದರಾಮಾನಂದ ಸ್ವಾಾಮೀಜಿ ಅವರು ಹೃದಯಾಘಾತದಿಂದ ಅಕಾಲಿಕವಾಗಿ ಮರಣಹೊಂದಿರುವ ಸುದ್ದಿ ಹಾಲುಮತ ಸಮಾಜಕ್ಕೆೆ ಸಹಿಸಿಕೊಳ್ಳಲು ಸಾಧ್ಯವಾಗಿಲ್ಲ.
ಕಾರಣ ಪ್ರತಿ ವರ್ಷ ಜ. 12ರಿಂದ 14 ರ ವರೆಗೆ ಮೂರು ದಿನಗಳ ಮಟ್ಟಿಿಗೆ ಕಳೆದ 16 ವರ್ಷಗಳಿಂದ ನಿರಂತರವಾಗಿ ಹಾಲುಮತ ಸಾಂಸ್ಕೃತಿಕ ವೈಭವದ ಹೆಸರಿನಲ್ಲಿ ಕಾರ್ಯಕ್ರಮ ನಡೆಸುವ ಮೂಲಕ ಈ ಭಾಗದ ಕುರುಬ ಜಾತಿಯ ಎಲ್ಲಾ ಒಳ ಪಂಗಡಗಳನ್ನು ಒಂದುಗೂಡಿಸುವ ಕೆಲಸ ಮಾಡಿ ಸಂಘಟಿಸಿದ್ದರು. ಯಾವುದೇ ಸಂಸ್ಕಾಾರ ಇಲ್ಲದೆ ಇರುವಂತಹ ಜನತೆಯನ್ನು ಸುಸಂಸ್ಕೃತವಾಗಿ ಸಮಾಜದಲ್ಲಿ ಬದುಕುವುದನ್ನು ಕಲಿಸಿದ್ದಾರೆ.
ರಾಜ್ಯದಲ್ಲಿ ಹಾಗೂ ದೇಶದಲ್ಲಿ ಯಾವುದೇ ಸಮಾಜ ಬಲಿಷ್ಠವಾಗಿ ಬೆಳೆಯಬೇಕಾದರೆ, ಮಠ ಮಾನ್ಯಗಳು ಬೇಕು. ಇಲ್ಲಿಯ ವರೆಗೆ ರಾಜ್ಯದಲ್ಲಿ ಮಠ, ಮಾನ್ಯ ಗಳ ಕೊಡುಗೆ ಅಪಾರವಾಗಿದೆ. ಮಠಗಳು ಬೆಳೆದರೆ, ಆ ಸಮಾಜದ ಮಕ್ಕಳ ವಿದ್ಯಾಾಭ್ಯಾಾಸಕ್ಕೆೆ ಅನುಕೂಲವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಕಾಗಿನೆಲೆ ಪೀಠದ ನಿರಂಜನಾನಂದಪುರಿ ಸ್ವಾಾಮೀಜಿ, ಕೆ.ಆರ್.ನಗರದ ಕನಕ ಗುರು ಪೀಠದ ಶಿವಾನಂದ ಪುರಿ ಸ್ವಾಾಮೀಜಿ, ಹೊಸ ದುರ್ಗದ ಕನಕಗುರು ಪೀಠದ ಈಶ್ವರಾನಂದ ಸ್ವಾಾಮೀಜಿ, ತಿಂಥಣಿ ಬ್ರಿಿಜ್ ಕನಕ ಮಠದ ಶಿವಸಿದ್ದೇಶ್ವರ ಸ್ವಾಾಮೀಜಿ, ಶಿರೂರು ಕನಕ ಬ್ರಹ್ಮ ವಿದ್ಯಾಾ ಆಶ್ರಮದ ಚಿನ್ಮಯಾನಂದ ಸ್ವಾಾಮೀಜಿ,ಅಗತೀರ್ಥ ರೇವಣಸಿದ್ದೇಶ್ವರ ಮಠದ ರೇವಣಸಿದ್ದೇಶ್ವರ ಶಾಂತಮಯ ಸ್ವಾಾಮೀಜಿ, ಮಖಣಾಪುರದ ಸೋಮಲಿಂಗೇಶ್ವರ ಸ್ವಾಾಮೀಜಿ ಸೇರಿದಂತೆ 30ಕ್ಕೂ ಹೆಚ್ಚು ಸ್ವಾಾಮೀಜಿಗಳು ವಹಿಸಿದ್ದರು.
ಈ ಸಂದರ್ಭದಲ್ಲಿ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಹೆಚ್. ವಿಶ್ವನಾಥ, ಧರ್ಮಾಧಿಕಾರಿ ಭೀಮಣ್ಣ ಮೇಟಿ, ರೇವಣಸಿದ್ದಪ್ಪ , ಚಂದಪ್ಪ ಬುದ್ದಿನ್ನಿಿ, ಗೋವಿಂದರಾಯ ಚಿಂಚೋಡಿ, ಶಿಕ್ಷಕ ರಾಮಣ್ಣ ಸುಬೇದಾರ ಸೇರಿದಂತೆ ಅನೇಕರು ಇದ್ದರು. ಸ್ವಾಾಗತ ನಿರೂಪಣೆ ಚಿದಾನಂದ ಗುರುವಿನ ಮಾಡಿದರು.
ಸಂಸ್ಕಾರ ಇಲ್ಲದ ಸಮಾಜಕ್ಕೆ ಸಂಸ್ಕಾರ ಕಲಿಸಿದ ಸಿದ್ದರಾಮಾನಂದ ಸ್ವಾಮೀಜಿ : ಇಲಕಲ್ ಶ್ರೀ

