ಸುದ್ದಿಮೂಲ ವಾರ್ತೆ ಬೆಂಗಳೂರು, ಜ.28:
ಕೃತಕ ಕಾಲು ಜೋಡಣೆ ಸೌಲಭ್ಯ ಪಡೆಯಲು ಮಾನದಂಡಗಳ ಸರಳೀಕರಣ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಿ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವೆ ಲಕ್ಷ್ಮೀ ಹೆಬ್ಬಾಾಳ್ಕರ್ ತಿಳಿಸಿದರು.
ಇಂದು ವಿಧಾನಸಭೆಯ ಕಲಾಪದದಲ್ಲಿ ಪ್ರಶ್ನೋೋತ್ತರ ವೇಳೆಯಲ್ಲಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಸದಸ್ಯರಾದ ಶ್ರೀವತ್ಸ ಟಿ.ಎಸ್ ಅವರ ಪ್ರಶ್ನೆೆಗೆ ಉತ್ತರಿಸಿದ ಸಚಿವರು, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಸಾಧನ ಸಲಕರಣೆ ಯೋಜನೆಯಡಿ ವಿಕಲಚೇತನರಿಗೆ ಅವಶ್ಯಕವಾಗಿರುವ ಸಾಧನ ಸಲಕರಣೆಗಳನ್ನು ನೀಡಲಾಗುತ್ತಿಿದ್ದು ಈ ಯೋಜನೆಯಡಿ ವಿಕಲಚೇತನ ವ್ಯಕ್ತಿಿಗಳು ಹೆಚ್ಚಿಿನ ಸೌಲಭ್ಯ ಪಡೆಯಲು ಅನುವಾಗುವಂತೆ ಮಾನದಂಡಗಳನ್ನು ಮಾರ್ಪಡಿಸಿ ಆದೇಶಿಸಲಾಗಿದೆ ಎಂದರು.
ಈ ಯೋಜನೆಯಡಿ ಅಂಗವಿಕಲ ಅಭ್ಯರ್ಥಿಗಳು ರಾಜ್ಯದಲ್ಲಿ 7 ವರ್ಷಗಳಿಂದ ವಾಸ ಮಾಡುತ್ತಿಿರುವ ಬಗ್ಗೆೆ ವಾಸ ಸ್ಥಳ ದೃಢೀಕರಣ ಪ್ರಮಾಣ ಪತ್ರ ಹಾಗೂ ಆದಾಯ ಮಿತಿಯನ್ನು ನಗರ ವಾಸಿಗಳಾಗಿದ್ದಲ್ಲಿ 2.50 ಲಕ್ಷಗಳು ಮತ್ತು ಗ್ರಾಾಮೀಣ ನಿವಾಸಿಗಳಾಗಿದ್ದಲ್ಲಿ 2.00ಲಕ್ಷಗಳ ಮಿತಿಯನ್ನು ನಿಗದಿಪಡಿಸಲಾಗಿದೆ ಎಂದು ಹೇಳಿದರು.
ಇಲಾಖೆ ಯೋಜನೆಯಾದ 21 ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರವನ್ನು ಭಾರತೀಯ ರೆಡ್ ಕ್ರಾಾಸ್ ಸಂಸ್ಥೆೆ, ವೈದ್ಯಕೀಯ ಮಹಾಮಂಡಳಿ ಹಾಗೂ ಸ್ವಯಂ ಸೇವಾ ಸಂಸ್ಥೆೆಗಳ ಮೂಲಕ ನಡೆಸಲಾಗುತ್ತಿಿದ್ದು, ಈ ಕೇಂದ್ರಗಳಲ್ಲಿ ವಿಕಲಚೇನರಿಗೆ ಅಗತ್ಯವಿರುವ ವೈದ್ಯಕೀಯ ಸೇವೆ, ವೃತ್ತಿಿ ಚಿಕಿತ್ಸೆೆ, ವಿವಿಧ ರೀತಿಯ ಸಾಧನ ಸಲಕರಣೆಗಳನ್ನು, ಕೃತಕ ಕಾಲುಗಳನ್ನು ತಯಾರಿಸಿ ಒದಗಿಸಲಾಗುತ್ತಿಿದೆ.
ಕೇಂದ್ರ ಸರ್ಕಾರದ ಅಲಿಂಕೋ ಸಂಸ್ಥೆೆಯ ವತಿಯಿಂದಲೂ ಸಹ ಜಿಲ್ಲೆಗಳಲ್ಲಿ ಶಿಬಿರಗಳನ್ನು ಏರ್ಪಡಿಸಿ, ಜಿಲ್ಲಾ ಅಂಗವಿಕಲರ ಕಲ್ಯಾಾಣಾಧಿಕಾರಿಗಳ ಸಹಯೋಗದೊಂದಿಗೆ ವಿಕಲಚೇತನರನ್ನು ಗುರುತಿಸಿ ಉಚಿತವಾಗಿ ಅಗತ್ಯವಿರುವ ಕೃತಕ ಅಂಗಾಂಗಗಳನ್ನು ವಿತರಿಸಲಾಗುತ್ತಿಿದೆ ಎಂದು ತಿಳಿಸಿದರು.

