ಸುದ್ದಿಮೂಲ ವಾರ್ತೆ ಬೀದರ್, ೆ.03:
ಎಸ್ ಐ ಅರ್ ಜಾರಿಗೊಳಿಸುತ್ತಿಿರುವವರು ತುಂಬಾ ಸ್ಮಾಾರ್ಟ್ ಇದ್ದಾರೆ. ಇಂಡಿಯಾ ದೇಶಕ್ಕೆೆ ಇಸ್ರೇೇಲ್ ಮಾಡುತ್ತಿಿದ್ದಾರೆ. ಹಾಗಾಗಿ ತುಂಬಾ ಜಾಗರುಕರಾಗಬೇಕಿದೆ. ಭಾರತ ದೇಶ ಇಸ್ರೇೇಲೀಕರಣ ಆಗುತ್ತಿಿರುವುದು ಖಚಿತವಿದೆ. ಇದರ ವಿರುದ್ಧ ಯಾವುದೇ ಪಕ್ಷಗಳು ಧ್ವನಿ ಎತ್ತುವುದಿಲ್ಲ. ಇದರ ವಿರುದ್ಧ ಜನರು ಬೀದಿಗಿಳಿಯಬೇಕಾಗಿದೆ. ಆವಾಗ ಮಾತ್ರ ಇದನ್ನು ತಡೆಯಲು ಸಾಧ್ಯವಿದೆ ಎಂದು ಆರ್ಥಿಕ ತಜ್ಞ ಪರಕಾಲ್ ಪ್ರಭಾಕರ್ ಅವರು ಹೇಳಿದರು.
ನಗರದ ಡಾ. ಚನ್ನಬಸವ ಪಟ್ಟದೇವರು ರಂಗ ಮಂದಿರದಲ್ಲಿ ಮಂಗಳವಾರ ನಡೆದ ಎಸ್ಐಆರ್ ಕುರಿತು ಚಿಂತನ-ಮಂಥನ ಸಮಾವೇಶ ಸಮಾರಂಭದಲ್ಲಿ ಮಾತನಾಡಿದ ಅವರು, ನಾವು ಎಷ್ಟು ದಿನ ಇಂತಹ ಚರ್ಚೆ, ಕಾರ್ಯಕ್ರಮ ಮಾಡುತ್ತೇವೆಯೋ ಗೊತ್ತಿಿಲ್ಲ. 15ನೇ ಆಗಸ್ಟ್ ದಂದು ಇನ್ನು ಎಷ್ಟು ವರ್ಷ ಕೆಂಪು ಕೋಟೆ ಮೇಲೆ ರಾಷ್ಟ್ರ ಧ್ವಜ ಹಾರಿಸುತ್ತೇವೋ ಗೊತ್ತಿಿಲ್ಲ. ಭವಿಷ್ಯ ಈ ವರ್ಷ ಹಾರಿಸಬಹುದು, ಆದರೆ ಮುಂದಿನ ವರ್ಷ ಹಾರಿಸಲಾಗುತ್ತದೆ ಎಂದು ನನಗೆ ಹೇಳುವುದಕ್ಕೆೆ ಆಗುವುದಿಲ್ಲ. ಧ್ವಜ ಹಾರಿಸಲಾಗುವುದು. ಆದರೆ ಅದು ತಿರಂಗಾ ಇರುತ್ತದೆಯೋ ಇಲ್ಲವೋ ಎನ್ನುವುದು ನನಗೆ ಗೊತ್ತಿಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಭಾರತದಲ್ಲಿ ಎಸ್ಐಆರ್ ಎರಡನೇ ಹಂತದಲ್ಲಿ 6.5 ಕೋಟಿ ಜನರು ಮತದಾರರ ಪಟ್ಟಿಿಯಿಂದ ಅಳಿಸುವ ಪಟ್ಟಿಿಯಲ್ಲಿದ್ದಾರೆ. ಇದು ಸಣ್ಣ ಸಂಖ್ಯೆೆಯಲ್ಲ, ಜಗತ್ತಿಿನ ಶೇ. 85ರಷ್ಟು ದೇಶಗಳಲ್ಲಿ ಇಷ್ಟೊೊಂದು ಸಂಖ್ಯೆೆಯಲ್ಲಿ ಬದುಕುತ್ತಾಾರೆ. ಈ ಎ ಎಸ್ ಐ ಅರ್ ಮುಗಿಯುವವರೆಗೂ 16.5 ಕೋಟಿ ಜನರ ನಾಗರೀಕತೆ ರದ್ದುಗೊಳಿಸಲಾಗುತ್ತಿಿದೆ. ನಾಗರೀಕತೆಯ ಹತ್ಯೆೆಯಾಗುತ್ತಿಿದೆ. ಆದರೆ ರಕ್ತ ಹರಿಯುತ್ತಿಿಲ್ಲ ಎಂದು ತಿಳಿಸಿದರು.
ಖ್ಯಾಾತ ಅಂಕಣಕಾರ, ಚಿಂತಕ ಶಿವಸುಂದರ್ ಅವರು ಮಾತನಾಡಿ, ಕೆಲ ವರ್ಷಗಳ ಹಿಂದಿನಿಂದ ಸಂವಿಧಾನದ ಮೇಲೆ ನಿರಂತರವಾಗಿ ದಾಳಿ ನಡೆಯುತ್ತಿಿವೆ. ಆ ದಾಳಿ ಈವಾಗ ಕೊನೆ ಹಂತಕ್ಕೆೆ ಬಂದು ತಲುಪಿದೆ. ಆ ದಾಳಿಯ ಒಂದು ಪ್ರಮುಖ ಭಾಗವೇ ಈ ಎಸ್ ಐ ಅರ್ ಆಗಿದೆ ಎಂದು ಹೇಳಿದರು.
ಎಸ್ ಐ ಅರ್ ಎಂದರೆ ಮೋದಿ ಸರ್ಕಾರ ಭಾರತದ 140ಕೋಟಿ ಜನರು ವಿದೇಶಿಗರಿದ್ದಾರೆ ಎಂದು ಅವರ ಮೇಲೆ ಹಾಕಿದ ಎ್ಐಆರ್ ಆಗಿದೆ. ವಿದೇಶಿ ನುಸುಳುಕೋರರನ್ನು ಚುನ್ ಚುನ್ ಕೆ ಭಗಾವುಂಗಾ ಎಂದು ಅಮಿತ್ ಷಾ ಅವರು ಮಾತನಾಡಿದರು. ಆದರೆ ಇವರು ವಿದೇಶಿ ನುಸುಳುಕೊರರನ್ನು ಹುಡುಕುತ್ತಿಿಲ್ಲ. ಬದಲಾಗಿ ಎಲ್ಲ ಭಾರತೀಯರು ನಾವು ಭಾರತೀಯರು ಎಂದು ಅವರನ್ನು ದಾಖಲೆಗಳ ಮೂಲಕ ತಿಳಿಸಬೇಕಾಗಿದೆ. ಅವರು ಕೇಳುವ ದಾಖಲೆ ನಮ್ಮ ಹತ್ತಿಿರ ಇರುವುದಿಲ್ಲ. ನಾವು ಕೊಡುವ ದಾಖಲೆ ಅವರು ಒಪ್ಪುುವುದಿಲ್ಲ ಎಂದು ಕಿಡಿ ಕಾರಿದರು.
ನಾಗರೀಕ ಹಕ್ಕುಗಳ ಪ್ರತಿಪಾದಕಿ ತಾರಾ ರಾವ್ ಅವರು ಮಾತನಾಡಿ, ನಾವೆಲ್ಲರೂ ಇವಾಗ ಮಾತನಾಡಿ ಕುಗ್ಗಿಿದ್ದೇವೆ. ಮಾತಾಡುವುದರ ಜೊತೆಗೆ ನಾವು ಹೋರಾಟ ಮಾಡಬೇಕಾಗಿದೆ. ಎಸ್ ಐ ಅರ್ ವಿರುದ್ಧ ಬೀದಿಗಿಳಿದು ಹೋರಾಟ ಮಾಡಿ ಜಯ ಗಳಿಸಬೇಕಿದೆ ಎಂದರು.
ಎಸ್ಐಆರ್ – ಚಿಂತನ ಮಂಥನ : ಭಾರತ ಇಸ್ರೇಲೀಕರಣ ಮಾಡುವ ಹುನ್ನಾರ : ಪರಕಾಲ ಪ್ರಭಾಕರ್

