ಸುದ್ದಿಮೂಲ ವಾರ್ತೆ ಸಿರವಾರ, ೆ.21:
ದೇಶದ ಹಾಗೂ ಧರ್ಮದ ಕಾರ್ಯಗಳನ್ನು ಮಾಡುವ ವ್ಯಕ್ತಿಿಯನ್ನು ಸಮಾಜ ಯಾವತ್ತೂ ಮರೆಯಲು ಸಾಧ್ಯವಿಲ್ಲ ಎಂದು ನವಲಕಲ್ ಬೃಹನ್ಮಠದ ಪೀಠಾಧಿಪತಿ ಅಭಿನವಶ್ರೀ ಸೋಮನಾಥ ಶಿವಾಚಾರ್ಯ ಮಹಾಸ್ವಾಾಮಿಗಳು ನುಡಿದರು.
ಅವರು ಶನಿವಾರ ವಿರಾಟ್ ಹಿಂದೂ ಸಮ್ಮೇಳನ ಕಾರ್ಯಕ್ರಮ ಜ್ಯೋೋತಿ ಬೆಳಗಿಸುವ ಮೂಲಕ ಉದ್ಘಾಾಟಿಸಿ ಮಾತನಾಡಿದರು. ನಮ್ಮ ಪರಂಪರೆ ಹಿಂದಿನ ಕಾಲದಿಂದ ಹಿರಿಯರು ಆಚರಣೆ ಮಾಡಿಕೊಂಡು ಬಂದಿದ್ದಾರೆ. ಧರ್ಮದ ಹಾಗೂ ದೇಶದ ರಕ್ಷಣೆಗೆ ಪ್ರತಿಯೊಬ್ಬರು ಬದ್ಧರಾಗಿ ಕೆಲಸ ಮಾಡಬೇಕು ಎಂದರು.
ಕಲ್ಲೂರು ಶಂಕರಾಚಾರ್ಯರ ಮಠದ ಶಿವಾರಾಮಾನಂದಾ ಸ್ವಾಾಮೀಜಿ ವಿದೇಶಿ ವಸ್ತುಗಳನ್ನು ಬಳಸಿ ಅದರ ಲಾಭವನ್ನು ಪಡೆಯಲು ಸಾಧ್ಯ ಎಂದರು.
ಬೆಂಗಳೂರು ವಿಶ್ಬಹಿಂದೂ ಪರಿಷತ್ ಕ್ಷೇತ್ರಿಿಯ ಅರ್ಚಕ ಪುರೋಹಿತ ಪ್ರಮುಖರಾದ ಬಸವರಾಜ.ಜಿ, ವಿಶೇಷ ಉಪನ್ಯಾಾಸದಲ್ಲಿ ಆರ್.ಎಸ್.ಎಸ್ 100 ವರ್ಷದ, ಉತ್ಸವದ ಅಂಗವಾಗಿ ದೇಶದ ತುಂಬಾ ವಿರಾಟ್ ಹಿಂದೂ ಉತ್ಸವ ನಡೆಯುತ್ತಿಿದೆ ಎಂದು ವಿರಾಟ್ ಹಿಂದೂ ಸಮ್ಮೇಳನ ಸಮಿತಿಯ ಅಧ್ಯಕ್ಷ ಜಿ.ಲೋಕರಡ್ಡಿಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಇದರಲ್ಲಿ ಮಾಜಿ ಶಾಸಕ ಬಸನಗೌಡ ಬ್ಯಾಾಗವಾಟ್ ಜೆ.ಶರಣಪ್ಪಗೌಡ, ಆರ್.ಕೆ.ಅಮರೇಶ ಸಾಹುಕಾರ್, ಮಲ್ಲಿಕಾರ್ಜುನ ಜಕ್ಕಲದಿನ್ನಿಿ, ಜೆ.ದೇವರಾಜಗೌಡ, ಅಯ್ಯನಗೌಡ ಎರಡ್ಡಿಿ ಸೇರಿದಂತೆ ಪಟ್ಟಣದ ಮುಖಂಡರು, ಮಹಿಳೆಯರು, ಯುವಕರು, ಹಿಂದೂ ಕಾರ್ಯಕರ್ತರು ಭಾಗವಹಿಸಿದ್ದರು.
ಅದ್ದೂರಿ ಮೆರವಣಿಗೆ : ಪಟ್ಟಣದ ಬಸವೇಶ್ವರ ವೃತ್ತದಿಂದ ಬಸ್ ನಿಲ್ದಾಾಣದ ಜೆ.ಶರಣಪ್ಪಗೌಡ ಇವರ ಜಾಗದ ಆವರಣದ ವರೆಗೆ ಭಾರತಮಾತೆ, ಶ್ರೀರಾಮ, ಛತ್ರಪತಿ ಶಿವಾಜಿ ಭಾವಚಿತ್ರ ಮೆರವಣಿಗೆ ಕವಿತಾಳ ಕಲ್ಮಠದ ಪೀಠಾಧಿಪತಿ ಶ್ರೀ ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಾಮಿಗಳು ಪುಷ್ಪಾಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು. ಕಣಿ ಮಜಲು, ಕುದುರೆ ಕುಣಿತ, ಡೊಳ್ಳು ಕುಣಿತ , ಕುಂಭ, ಕಳಸ ದೊಂದಿಗೆ ಅದ್ದೂರಿಯಾಗಿ ಶೋಭಾ ಯಾತ್ರೆೆ ಜರುಗಿತು. ಮಕ್ಕಳ ಛದ್ಮವೇಷ ಗಮನ ಸೆಳೆಯಿತು.
ಸಿರವಾರ : ವಿರಾಟ್ ಹಿಂದೂ ಬೃಹತ್ ಶೋಭಾ ಯಾತ್ರೆ ದೇಶದ ಸಂಸ್ಕಾರ, ಸಂಸ್ಕೃತಿ ಮರುಕಳಿಸುತ್ತಿದೆ – ನವಲಕಲ್ ಶ್ರೀಗಳು

