ಸುದ್ದಿಮೂಲ ವಾರ್ತೆ ರಾಯಚೂರು, ಡಿ.25:
ಲೆಕ್ಕಚಾರವು ನಮ್ಮ ದೈನಂದಿನ ಬದುಕಿಗೆ ಬಹುಮುಖ್ಯ ಹೀಗಾಗಿ ಗಣಿತದ ಮಹತ್ವದ ಬಗ್ಗೆೆ ಎಲ್ಲರಲ್ಲೂ ಜಾಗೃತಿ ಮೂಡಿಸಿದ ಶ್ರೇಯಸ್ಸು ಶ್ರೀನಿವಾಸ ರಾಮಾನುಜನ್ ಅವರಿಗೆ ಸಲ್ಲುತ್ತದೆ ಎಂದು ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಾಲಯದ ಗಣಿತ ವಿಭಾಗದ ಸಹಾಯಕ ಪ್ರಾಾಧ್ಯಾಾಪಕ ಡಾ.ಎ.ಪದ್ಮನಾಭ ರೆಡ್ಡಿಿ ಹೇಳಿದರು.
ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಾಲಯದ ಗಣಿತ ವಿಭಾಗದಲ್ಲಿ ಬುಧವಾರ ಆಯೋಜಿಸಲಾಗಿದ್ದ ರಾಷ್ಟ್ರೀಯ ಗಣಿತ ದಿನ ಅಂಗವಾಗಿ ಗಣಿತ ಶಾಸಜ್ಞ ಶ್ರೀನಿವಾಸ ರಾಮಾನುಜನ್ ಅವರ ಜನ್ಮದಿನದ ಅಂಗವಾಗಿ ಸಿಕ್ವೆೆನ್ಸ್ ಅಂಡ್ ಸಿರೀಸ್ ಆ್ ಂಕ್ಷನ್ ವಿಷಯ ಕುರಿತು ವಿಶೇಷ ಉಪನ್ಯಾಾಸ ನೀಡಿದರು. ರಾಮಾನುಜನ್ ಅವರ ಕಲಿಕೆ ಮತ್ತು ಸಾಧನೆಗೆ ಬಡತನ ಎಂದಿಗೂ ಅಡ್ಡಿಿಯಾಗಲಿಲ್ಲ. ಅವರಿಗಿದ್ದ ಗಣಿತದ ಮೇಲಿನ ಪ್ರೀೀತಿ ಇವರ ಉನ್ನತ ಸಾಧನೆಗೆ ಮೆಟ್ಟಿಿಲಾಯಿತು ಎಂದರು.
ಗಣಿತದಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದರೂ ಅನೇಕ ಸಂಕೀರ್ಣ ಗಣಿತ ವಿಷಯಗಳ ಮೇಲೆ ಕೆಲಸ ಮಾಡಿದರು. ಸಂಖ್ಯಾಾ ಸಿದ್ಧಾಾಂತ, ಅನಂತ ಸರಣಿಗಳಂತಹ ವಿಷಯಗಳಲ್ಲಿ ಸುಮಾರು 3900 ಸೂತ್ರಗಳು ಮತ್ತು ಲಿತಾಂಶಗಳನ್ನು ಪ್ರಸ್ತುತಪಡಿಸಿದ ಕೀರ್ತಿ ರಾಮಾನುಜನ್ ಅವರಿಗೆ ಸಲ್ಲುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಣಿತ ವಿಭಾಗದ ಮುಖ್ಯಸ್ಥ ಪ್ರೊೊ.ಪಿ.ಭಾಸ್ಕರ್ ವಹಿಸಿದ್ದರು. ಅತಿಥಿ ಉಪನ್ಯಾಾಸಕರಾದ ಡಾ.ಹನುಮಂತ, ಪೂರ್ಣಿಮಾ, ಲುಬುನಾ ಸಿದ್ದಿಕ್ವ, ಅಶ್ವಿಿನಿ ಸೇರಿ ವಿದ್ಯಾಾರ್ಥಿಗಳು ಉಪಸ್ಥಿಿತರಿದ್ದರು.
ಶ್ರೀನಿವಾಸ ರಾಮಾನುಜನ್ ಗಣಿತ ಸೂತ್ರ ಲೆಕ್ಕದ ಬದುಕಿಗೆ ಸ್ಪೂರ್ತಿ- ಡಾ.ಪದ್ಮನಾಭರೆಡ್ಡಿ

