ಸುದ್ದಿಮೂಲ ವಾರ್ತೆ ಬಳ್ಳಾರಿ, ನ.27:
ಬಳ್ಳಾಾರಿಯ ಬಸವ ಭವನ ಹತ್ತಿಿರದ ಹಿಂದುಳಿದ ವರ್ಗಗಳ ಬಾಲಕಿಯರ ವಸತಿ ನಿಲಯಕ್ಕೆೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ಅವರು ಗುರುವಾರ ಭೇಟಿ ನೀಡಿ, ಕೊಠಡಿ, ಶೌಚಾಲಯ, ಉಗ್ರಾಾಣ, ಕುಡಿಯುವ ನೀರು, ಅಡುಗೆ ಕೊಣೆ ಇನ್ನಿಿತರೆಗಳನ್ನು ಪರಿಶೀಲನೆ ಮಾಡಿದ್ದಾಾರೆ.
ಈ ವೇಳೆ ವಸತಿ ನಿಲಯದಲ್ಲಿ ಅಡುಗೆ ಬಳಸುವ ಕಳಪೆ ತರಕಾರಿ ಮತ್ತು ಆಹಾರ ಧಾನ್ಯ ಕಂಡು ವಾರ್ಡನ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಗುಣಮಟ್ಟ ಕಾಪಾಡುವಂತೆ ಸೂಚನೆ ನೀಡಿದರು.
ವಿದ್ಯಾಾರ್ಥಿನಿಯರಿಗೆ ಏನಾದರೂ ಸಮಸ್ಯೆೆ ಇದ್ದಲ್ಲಿ ಹಾಗೂ ತೊಂದರೆ ಆದಲ್ಲಿ 1098 ಸಹಾಯವಾಣಿ ಸಂಖ್ಯೆೆಗೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದು ಕಿವಿಮಾತು ಹೇಳಿದರು.
ಬಳಿಕ ನಗರದ ಹೊರವಲಯದ ಅಲ್ಪಸಂಖ್ಯಾಾತರ ಕಲ್ಯಾಾಣ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿ ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಗತ್ಯ ಸಲಹೆ-ಸೂಚನೆ ನೀಡಿದರು.
ನಂತರ ಜಿಲ್ಲಾಾ ಕೇಂದ್ರ ಕಾರಾಗೃಹಕ್ಕೆೆ ಭೇಟಿ ನೀಡಿ, ದಿನನಿತ್ಯದ ಆಹಾರ ನೀಡುವ ವೇಳಾಪಟ್ಟಿಿ, ಕಾಲಕಾಲಕ್ಕೆೆ ಖೈದಿಗಳ ಆರೋಗ್ಯ ತಪಾಸಣೆ, ಅವರಿಗೆ ಒದಗಿಸಲಾದ ಕೆಲಸ ಕುರಿತು ಕಾರಾಗೃಹ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಜಿಲ್ಲಾಾ ಕೇಂದ್ರ ಕಾರಾಗೃಹದ ಅಧೀಕ್ಷಕಿ ಲತಾ, ಜಿಲ್ಲಾಾ ಆರೋಗ್ಯ ಮತ್ತು ಕುಟುಂಬ ಕಲ್ಯಾಾಣಾಧಿಕಾರಿ ಡಾ.ಯಲ್ಲಾಾ ರಮೇಶ್ ಬಾಬು, ಜಿಲ್ಲಾಾ ಶಸಚಿಕಿತ್ಸಕ ಡಾ.ಬಸರೆಡ್ಡಿಿ, ಜಿಲ್ಲಾಾ ನಿರೂಪಣಾಧಿಕಾರಿ ಸವಿತಾ, ಹಿಂದುಳಿದ ವರ್ಗಗಳ ಕಲ್ಯಾಾಣಾಧಿಕಾರಿಗಳು, ಅಲ್ಪಸಂಖ್ಯಾಾತರ ಕಲ್ಯಾಾಣಾಧಿಕಾರಿಗಳು, ಜಿಲ್ಲಾಾ ಮಕ್ಕಳ ರಕ್ಷಣ ಘಟಕದ ಅಧಿಕಾರಿಗಳು ಹಾಜರಿದ್ದರು.
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ : ವಸತಿ ನಿಲಯ ಮತ್ತು ಶಾಲೆಗೆ ಭೇಟಿ

