ಸೋಮನಾಥ (ಗುಜರಾತ್), ಜ.11:
ಸ್ವಾಾತಂತ್ರ್ಯದ ಬಳಿಕವೂ ಸೋಮನಾಥ ದೇವಾಲಯ ಮರು ನಿರ್ಮಾಣವನ್ನು ವಿರೋಧಿಸಿದ ಶಕ್ತಿಿಗಳು ಇನ್ನು ಸಕ್ರಿಿಯವಾಗಿದ್ದು ಅವರನ್ನು ಸೋಲಿಸಲು ಜಾಗರೂಕರಾಗಿರಬೇಕು ಅಲ್ಲದೆ ಒಗ್ಗಟ್ಟಾಾಗಿರಬೇಕು ಎಂದು ಪ್ರಧಾನ ಮಂತ್ರಿಿ ನರೇಂದ್ರ ಮೋದಿ ಹೇಳಿದರು.
ಭಾನುವಾರ ನಡೆದ ಸೋಮನಾಥ ಸ್ವಾಾಭಿಮಾನ್ ಪರ್ವನಲ್ಲಿ ಮಾತನಾಡಿದ ಅವರು, ಕ್ರಿಿ.ಶ. 1026 ರಲ್ಲಿ ಘಜ್ನಿಿ ಮಹಮ್ಮದ್ ಸೋಮನಾಥ ದೇವಾಲಯದ ಮೇಲೆ ಆಕ್ರಮಣ ಮಾಡಿದ್ದಕ್ಕೆೆ 1000 ವರ್ಷ ಕಳೆದಿದೆ. ಸೋಮನಾಥದ ಇತಿಹಾಸವು ವಿನಾಶ ಮತ್ತು ಸೋಲಿನದ್ದಲ್ಲ, ಬದಲಾಗಿ ಗೆಲುವು ಮತ್ತು ನವೀಕರಣದದ್ದಾಗಿದೆ. ಮೂಲಭೂತವಾದಿ ಆಕ್ರಮಣಕಾರರು ಈಗ ಇತಿಹಾಸದ ಪುಟಗಳಿಗೆ ಸೀಮಿತವಾಗಿರುವ ಕಾಲಚಕ್ರ ಇದು. ಆದರೆ ಸೋಮನಾಥ ದೇವಾಲಯವು ಇನ್ನೂ ಎತ್ತರವಾಗಿ ನಿಂತಿದೆ ಎಂದರು.
1026 ರಲ್ಲಿ ಸೋಮನಾಥ ದೇವಾಲಯದ ಮೇಲೆ ದಾಳಿ ಮಾಡಿದ ಮೊದಲ ವ್ಯಕ್ತಿಿ ಘಜ್ನಿಿ ಮಹಮ್ಮದ್. ಆತ ಸೋಮನಾಥವನ್ನು ಕುಗ್ಗಿಿಸಿದ್ದೇವೆ ಎಂದು ಭಾವಿಸಿದ್ದ. ಆದರೆ ವರ್ಷಗಳಲ್ಲಿ ಅದನ್ನು ಪುನರ್ ನಿರ್ಮಾಣ ಮಾಡಲಾಯಿತು. 12ನೇ ಶತಮಾನದಲ್ಲಿ, ರಾಜ ಕುಮಾರ್ಪಾಲ್ ಭವ್ಯವಾದ ದೇವಾಲಯವನ್ನು ನಿರ್ಮಿಸಿದರು ಎಂದು ತಿಳಿಸಿದರು.
13 ನೇ ಶತಮಾನದಲ್ಲಿ, ಅಲ್ಲಾವುದ್ದೀನ್ ಖಿಲ್ಜಿಿ ಸೋಮನಾಥದ ಮೇಲೆ ದಾಳಿ ಮಾಡಿದ. 14ನೇ ಶತಮಾನದ ಆರಂಭದಲ್ಲಿ, ಜುನಾಗಢ್ ರಾಜ ಅದನ್ನು ಪುನರ್ ನಿರ್ಮಿಸಿದರು. ನಂತರ 14ನೇ ಶತಮಾನದ ಆರಂಭದಲ್ಲಿ, ಮುಜರ್ ಖಾನ್ ಸೋಮನಾಥದ ಮೇಲೆ ದಾಳಿ ಮಾಡಿದನು, ಆದರೆ ನಾಶ ಮಾಡಲು ವಿಲನಾದನು. 15ನೇ ಶತಮಾನದಲ್ಲಿ, ಸುಲ್ತಾಾನ್ ಅಹ್ಮದ್ ಶಾ ದೇವಾಲಯದ ನಾಶಕ್ಕೆೆ ಪ್ರಯತ್ನಿಿಸಿದನು ಮತ್ತು ಅವನ ಮೊಮ್ಮಗ ಅದನ್ನು ಮಸೀದಿಯಾಗಿ ಪರಿವರ್ತಿಸಲು ಪ್ರಯತ್ನಿಿಸಿದನು. ಆದರೆ ಮಹಾದೇವನ ಆಶೀರ್ವಾದದಿಂದ ದೇವಾಲಯವು ಮತ್ತೆೆ ಮೇಲೇರಿತು ಎಂದು ಪ್ರಧಾನಿ ಇತಿಹಾಸದ ಘಟನೆಗಳ ಬಗ್ಗೆೆ ಹೇಳಿದರು.
ಔರಂಗಜೇಬ ಈ ದೇವಾಲಯವನ್ನು ಅಪವಿತ್ರಗೊಳಿಸಲು ಪ್ರಯತ್ನಿಿಸಿದ. ಆದರೆ ಅಹಲ್ಯಾಾಬಾಯಿ ಹೋಳ್ಕರ್ ದೇವಾಲಯವನ್ನು ಪುನರ್ ನಿರ್ಮಿಸಿದರು. ಸೋಮನಾಥದ ಇತಿಹಾಸವು ವಿನಾಶ ಮತ್ತು ಸೋಲಿನದ್ದಲ್ಲ. ಆದರೆ ಗೆಲುವು, ಪುನಃಸ್ಥಾಾಪನೆ ಮತ್ತು ನಮ್ಮ ಪೂರ್ವಜರ ಶೌರ್ಯ ಮತ್ತು ತ್ಯಾಾಗದ ಇತಿಹಾಸವಾಗಿದೆ. ಧಾರ್ಮಿಕ ಭಯೋತ್ಪಾಾದನೆ ದಾಳಿ ಮಾಡುತ್ತಲೇ ಇತ್ತು, ಆದರೂ ಪ್ರತಿ ಯುಗದಲ್ಲೂ ಸೋಮನಾಥವು ಉದಯಿಸುತ್ತಲೇ ಇತ್ತು ಎಂದರು.
ಶತಮಾನಗಳಿಂದ ಸೋಮನಾಥ ದೇವಾಲಯ ನಾಶಕ್ಕೆೆ ಪದೇ ಪದೇ ಪ್ರಯತ್ನಗಳು ನಡೆದಿದ್ದರೂ ಇಂದು ಸ್ಥಿಿತಿಸ್ಥಾಾಪಕತ್ವ, ನಂಬಿಕೆ ಮತ್ತು ರಾಷ್ಟ್ರೀಯ ಹೆಮ್ಮೆೆಯ ಪ್ರಬಲ ಸಂಕೇತವಾಗಿ ನಿಂತಿದೆ. ಇದಕ್ಕೆೆ ಕಾರಣ ಸಾಮೂಹಿಕ ಸಂಕಲ್ಪ ಮತ್ತು ಅದನ್ನು ಅದರ ಪ್ರಾಾಚೀನ ವೈಭವ ಪುನಃಸ್ಥಾಾಪಿಸುವ ಪ್ರಯತ್ನಗಳು. ದ್ವೇಷ, ದೌರ್ಜನ್ಯ ಮತ್ತು ಭಯೋತ್ಪಾಾದನೆಯ ನಿಜವಾದ ಇತಿಹಾಸವನ್ನು ನಮ್ಮಿಿಂದ ಮರೆಮಾಡಲಾಗಿದೆ ಮತ್ತು ದಾಳಿಯು ದೇವಾಲಯವನ್ನು ಲೂಟಿ ಮಾಡುವ ಪ್ರಯತ್ನ ಎಂದು ನಮಗೆ ಕಲಿಸಲಾಯಿತು ಎಂದು ಹೇಳಿದರು.
ಸ್ವಾಾತಂತ್ರ್ಯದ ನಂತರ, ಸರ್ದಾರ್ ವಲ್ಲಭಭಾಯಿ ಪಟೇಲ್ ಸೋಮನಾಥ ದೇವಾಲಯವನ್ನು ಪುನರ್ ನಿರ್ಮಿಸುವ ಸಂಕಲ್ಪ ತೊಟ್ಟಾಾಗ, ಅವರ ಹಾದಿಗೆ ಅಡ್ಡಿಿ ಉಂಟಾಯಿತು. ತುಷ್ಟೀಕರಣದಲ್ಲಿ ತೊಡಗಿರುವವರು ಉಗ್ರಗಾಮಿ ಮನಸ್ಥಿಿತಿಯ ಜನರ ಮುಂದೆ ಮಂಡಿಯೂರಿದರು ಎಂದು ಪ್ರಧಾನಿ ಮೋದಿ ಟೀಕಿಸಿದರು.
ಸೋಮನಾಥನ ಕಥೆ ಭಾರತದ ಕಥೆಯಾಗಿದೆ. ವಿದೇಶಿ ಆಕ್ರಮಣಕಾರರು ಈ ದೇವಾಲಯದಂತೆ ಭಾರತವನ್ನು ಹಲವು ಬಾರಿ ನಾಶಮಾಡಲು ಪ್ರಯತ್ನಿಿಸಿದರು. ದಾಳಿಕೋರರು ದೇವಾಲಯವನ್ನು ನಾಶಮಾಡುವ ಮೂಲಕ ಗೆದ್ದಿದ್ದೇವೆ ಎಂದು ಭಾವಿಸಿದ್ದರು. ಆದರೆ 1,000 ವರ್ಷಗಳ ನಂತರವೂ ಸೋಮನಾಥದ ಧ್ವಜ ಇನ್ನೂ ಎತ್ತರಕ್ಕೆೆ ಹಾರುತ್ತಿಿದೆ. ಸಾವಿರ ವರ್ಷಗಳ ಈ ಹೋರಾಟವು ವಿಶ್ವ ಇತಿಹಾಸದಲ್ಲಿ ಯಾವುದೇ ಸಮಾನತೆಯನ್ನು ಹೊಂದಿಲ್ಲ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಸೋಮನಾಥ ದೇವಾಲಯಕ್ಕೆೆ ಭೇಟಿ ನೀಡಿ ವಿಶೇಷ ಪ್ರಾಾರ್ಥನೆ ಸಲ್ಲಿಸಿದರು.
ಗುಜರಾತ್ನ ಸೋಮನಾಥ ದೇವಾಲಯದ ಸ್ವಾಭಿಮಾನ್ ಪರ್ವದಲ್ಲಿ ಭಾಗಿ ವಿರೋಧಿ ಶಕ್ತಿಗಳನ್ನು ಸೋಲಿಸಲು ಭಾರತೀಯರ ಒಗ್ಗಟ್ಟು ಅಗತ್ಯ : ಮೋದಿ

