ಸುದ್ದಿಮೂಲ ವಾರ್ತೆ ಕೊಪ್ಪಳ, ಡಿ.20:
ಆನೆಗೊಂದಿ ಹಾಗೂ ಹಂಪಿ ಮಧ್ಯೆೆ ದೂರ ಕಡಿಮೆ ಮಾಡುವ ಉದ್ದೇಶದಿಂದ ತಳವಾರಘಟ್ಟ ಬಳಿಯಲ್ಲಿ ತೂಗು ಸೇತುವೆ ಕಾಮಗಾರಿ ನಡೆದಿತ್ತು. 4.12 ಕೋಟಿ ವೆಚ್ಚದ ಕಾಮಗಾರಿ ಚಾಲನೆ ನೀಡಲಾಗಿತ್ತು.ಆದರೆ ಆ ಸೇತುವೆ ಪೂರ್ಣ ಗೊಳ್ಳಲಿಲ್ಲ. ಬದಲಾಗಿ ಆ ಸೇತುವೆ ಎಂಟು ಜನರ ಜೀವ ಬಲಿ ಪಡೆಯಿತು.ಅದೇ ಯೋಜನೆ ಕಳೆದ ವರ್ಷ ಸರ್ಕಾರಕ್ಕೆೆ 5219 ಕೋಟಿ ನಷ್ಟ ಪರಿಹಾರ ನೀಡಬೇಕಾದ ಸ್ಥಿಿತಿ ತಂದಿತ್ತು. ಗುತ್ತಿಿಗೆದಾರ ಕಂಪನಿ ಹೈದ್ರಾಾಬಾದ್ ಮೂಲದ ಬಿ.ವಿ,ರೆಡ್ಡಿಿ ಅಂಡ್ ಕ್ರೋೋ ಇವರಿಗೆ ಕೋಟಿ ರೂಪಾಯಿ ಪರಿಹಾರ ನೀಡಲು ವಿಳಂಭ ಮಾಡಿದ್ದು, ಇದೀಗ 5219 ಕೋಟಿ ರೂಪಾಯಿಗೆ ಬಂದಿತ್ತು.ಸರ್ಕಾರ ಇದರಿಂದ ಆತಂಕ ಎದುರಾಗಿತ್ತು.ಇದೀಗ, ಧಾರವಾಡ ಹೈಕೋರ್ಟ್ ತ್ರಿಿ ಸದಸ್ಯ ಪೀಠ ಸರ್ಕಾರಕ್ಕೆೆ ಬಿಗ್ ರಿಲ್ೀ ನೀಡಿದೆ.ಹೀಗಾಗಿ ಸರ್ಕಾರ ಇದೀಗ ನಿರಾಳವಾಗಿದೆ.
16 ವರ್ಷಗಳ ಕಾಲ ನ್ಯಾಾಯಾಲಯದಲ್ಲಿ ಹೋರಾಟ ನಡೆದಿತ್ತು.ಇದೀಗ ಕೊನೆಗೂ ಪರಿಹಾರ ಅರ್ಜಿಯನ್ನ ತ್ರಿಿ ಸದಸ್ಯ ಪೀಠ ತಳ್ಳಿಿ ಹಾಕಿದೆ
ಒಟ್ಟಾಾರೆ 4.12 ಕೋಟಿ ಕಾಮಗಾರಿಗೆ 5219.76 ಕೋಟಿ ಪರಿಹಾರ ಕೇಳಿದ್ದು, ಲೆಕ್ಕ ಪತ್ರ ಇಲಾಖೆಗೆ ಶಾಕ್ ಗೆ ಒಳಗಾಗಿತ್ತು. ಇದೀಗ ಹೈಕೋರ್ಟ್ ತ್ರಿಿ ಸದಸ್ಯ ಪೀಠ ಪರಿಹಾರದ ಅರ್ಜಿ ತಳ್ಳಿಿ ಹಾಕಿರೋ ಕಾರಣ, ಸರ್ಕಾರಕ್ಕೆೆ ನೆಮ್ಮದಿ ಸಿಕ್ಕಂತಾಗಿದೆ.
ಗುತ್ತೇದಾರ ಕಂಪನಿಯಿಂದ 5219 ಕೋ.ರೂ ಪರಿಹಾರಕ್ಕೆ ಅರ್ಜಿ : ತಳ್ಳಿ ಹಾಕಿದ ನ್ಯಾಯಾಲಯ ಆನೆಗೊಂದಿ ಸೇತುವೆ ಕುಸಿತ ಪ್ರಕರಣ; ದಂಡದಿಂದ ಪಾರಾದ ರಾಜ್ಯ ಸರಕಾರ

