ಸುದ್ದಿಮೂಲ ವಾರ್ತೆ ಹರಪನಹಳ್ಳಿ, ಜ.19:
ಕೆರೆಯಲ್ಲಿ ಈಜಲು ಹೋಗಿದ್ದ 10 ವರ್ಷದ ಬಾಲಕನೊಬ್ಬ ಗುಂಡಿಯಲ್ಲಿ ಸಿಲುಕಿ ಮೃತಪಟ್ಟ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿಿ ತಾಲೂಕಿನ ರಾಗಿಮಸಲವಾಡ ಗ್ರಾಾಮದಲ್ಲಿ ನಡೆದಿದೆ. ಮೃತ ಬಾಲಕನನ್ನು ಸಿದ್ಧಾಾರ್ಥ (10) ಎಂದು ಗುರುತಿಸಲಾಗಿದ್ದು, ಸ್ಥಳೀಯ ಭಾಗಮ್ಯ ಹಾಗೂ ಹನುಮಂತಪ್ಪ ದಂಪತಿಯ ಪ ಪುತ್ರನಾಗಿದ್ದಾನೆ.
ನಿನ್ನೆೆ ಸಾಯಂಕಾಲದ ವೇಳೆಯಲ್ಲಿ ಸಿದ್ಧಾಾರ್ಥ ಸೇರಿದಂತೆ ಮೂವರು ಬಾಲಕರು ಗ್ರಾಾಮದ ಗೋ ಕಟ್ಟೆೆಯಲ್ಲಿ ಈಜಲು ತೆರಳಿದ್ದರು. ಈ ವೇಳೆ ಕೆರೆಯೊಳಗಿನ ಆಳವಾದ ಗುಂಡಿಯಲ್ಲಿ ಸಿಲುಕಿದ ಸಿದ್ಧಾಾರ್ಥ ನೀರಿನಲ್ಲಿ ಮುಳುಗಿದ್ದಾನೆ. ಉಳಿದ ಇಬ್ಬರು ಬಾಲಕರು ಅದೃಷ್ಟವಶಾತ್ ಪ್ರಾಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆ ಮಾಹಿತಿ ತಿಳಿಯುತ್ತಿಿದ್ದಂತೆ ಗ್ರಾಾಮಸ್ಥರು ಸ್ಥಳಕ್ಕೆೆ ಧಾವಿಸಿ ಶೋಧ ಕಾರ್ಯ ಆರಂಭಿಸಿದರು. ಬಳಿಕ ಅಗ್ನಿಿಶಾಮಕ ಸಿಬ್ಬಂದಿ ಹಾಗೂ ನುರಿತ ಈಜುಪಟುಗಳ ಸಹಾಯದಿಂದ ಬಾಲಕನಿಗಾಗಿ ಶೋಧ ನಡೆಸಲಾಯಿತು. ಕೆರೆಯ ಆಳ ಹೆಚ್ಚಿಿದ್ದರಿಂದ ಶೋಧ ಕಾರ್ಯಕ್ಕೆೆ ಅಡಚಣೆ ಉಂಟಾಗಿತ್ತು. ಇದರಿಂದ ಗ್ರಾಾಮಸ್ಥರು ಜೆಸಿಬಿ ಮೂಲಕ ಗೋ ಕಟ್ಟೆೆಯ ನೀರನ್ನು ಹೊರಹಾಕುವ ಪ್ರಯತ್ನ ನಡೆಸಿದರು.
ಸೋಮವಾರ ಬೆಳಗಿನ ಜಾವ ಶೋಧ ಕಾರ್ಯದ ವೇಳೆ ಬಾಲಕ ಸಿದ್ಧಾಾರ್ಥನ ಮೃತದೇಹ ಪತ್ತೆೆಯಾಯಿತು. ಏಕೈಕ ಗಂಡು ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿಿದ್ದು, ಗ್ರಾಾಮದಲ್ಲಿ ಶೋಕದ ವಾತಾವರಣ ಆವರಿಸಿದೆ.
ಹರಪನಹಳ್ಳಿಿ ತಾಲೂಕಿನ ಹಲವಾಗಿಲು ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತೆಲಗಿ ಪ್ರಾಾಥಮಿಕ ಆರೋಗ್ಯ ಕೇಂದ್ರದ ಶವಗಾರಕ್ಕೆೆ ರವಾನೆ ಮಾಡಲಾಗಿದೆ. ಈ ಸಂಬಂಧ ಹಲವಾಗಿಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿಿದೆ. ಆಗ್ನಿಿ ಶಾಮಕ ಠಾಣಾಧಿಕಾರಿ ಕೆ.ಚಂದ್ರಶೇಖರ್, ಎ.ಬಸವರಾಜ್, ಆರ್.ಶ್ರೀನಿವಾಸ, ಶಿವರಾಜ್, ರಫೀಕ್ ಸಿಧ್ದಾಾರ್ಥ ಮೃತ ದೇಹದ ಕಾರ್ಯಚರಣೆಯಲ್ಲಿ ಬಾಗವಹಿಸಿದ್ದರು.
ಕೆರೆಯಲ್ಲಿ ಈಜಲು ಹೋದ ಬಾಲಕನ ದಾರುಣ ಸಾವು

