ಸುದ್ದಿಮೂಲ ವಾರ್ತೆ ರಾಯಚೂರು, ಡಿ.08:
ಆಕಾಶವಾಣಿ ರಾಯಚೂರು ಕೇಂದ್ರವು ಡಿಸೆಂಬರ್ 09ರ ಸಂಜೆ 6.51ರಿಂದ 7.34ರವರೆಗೆ ತುಂಗಭದ್ರ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತಕ್ಕೆೆ ಪರ್ಯಾಯ ಬೆಳೆಪದ್ದತಿ ಮತ್ತು ಹಿಂಗಾರು ಬೆಳೆಗಳಲ್ಲಿ ಕೀಟಗಳ ನಿರ್ವಹಣೆ ಕುರಿತು ನೇರ ೆನ್ – ಇನ್ ಕಾರ್ಯಕ್ರಮ ಪ್ರಸಾರ ಮಾಡಲಿದೆ.
ಈ ಕಾರ್ಯಕ್ರಮದಲ್ಲಿ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಾಲಯದ ಬೇಸಾಯ ವಿಜ್ಞಾನಿ ಡಾ.ಎಂ.ಎ.ಬಸವಣ್ಣೆೆಪ್ಪ ಮತ್ತು ಕೀಟ ವಿಜ್ಞಾನಿ ಡಾ.ಶಿವಾನಂದ ಜಿ. ಹಂಚಿನಾಳ ಅವರು ಭಾಗವಹಿಸಿ ರೈತರ ಪ್ರಶ್ನೆೆಗಳಿಗೆ ಉತ್ತರಿಸಲಿದ್ದಾರೆ. ಕೇಳುಗರು ಬಳಸಬಹುದಾದ ರಾಯಚೂರು ಆಕಾಶವಾಣಿಯ ದೂರವಾಣಿ ಸಂಖ್ಯೆೆ 08532-295898 ಅಥವಾ 08532-200312 ಇವುಗಳಿಗೆ ಕರೆಮಾಡಿ ತುಂಗಭದ್ರ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತಕ್ಕೆೆ ಪರ್ಯಾಯ ಬೆಳೆಪದ್ದತಿ ಮತ್ತು ಹಿಂಗಾರು ಬೆಳೆಗಳಲ್ಲಿ ಕೀಟಗಳ ನಿರ್ವಹಣೆ ವಿಷಯದ ಕುರಿತು ಹೆಚ್ಚಿಿನ ಮಾಹಿತಿ ಪಡೆಯಬಹುದು.
ಸಾರ್ವಜನಿಕರು ಮತ್ತು ರೈತ ಬಾಂಧವರು ಈ ಕಾರ್ಯಕ್ರಮದ ಪ್ರಯೋಜನೆ ಪಡೆಯಲು ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕ ವೆಂಕಟೇಶ ಬೇವಿನಬೆಂಚಿ ಕೋರಿದ್ದಾರೆ.

