ಸುದ್ದಿಮೂಲ ವಾರ್ತೆ ಲಿಂಗಸೂಗೂರ, ನ.04:
ಕುಟುಂಬದ ಜವಾಬ್ದಾಾರಿ ಹೊರುವ ಮಹಿಳೆ ಜೀವನದಲ್ಲಿ ಹಲವು ಪಾತ್ರಗ ಳನ್ನು ನಿಭಾಯಿಸುವ ಮೂಲಕ ಸಂಸಾರ ನಿರ್ವಹಣೆಯಲ್ಲಿ ಅತಿಮುಖ್ಯ ಪಾತ್ರ ವಹಿಸುತ್ತಾಾಳೆಂದು ಶಾಸಕ ಮಾನಪ್ಪ ವಜ್ಜಲ್ ಬುಧವಾರ ಹೇಳಿದರು.
ಸ್ಥಳೀಯ ಆರ್ಎಂಎಸ್ ಕಲ್ಯಾಾಣ ಮಂಟಪದಲ್ಲಿ ಆಯೋಜಿಸಿದ, ನೂತನ ಗಾಮೆರ್ಂಟ್ಸ ಸ್ಥಾಾಪನೆಗೆ ಚಾಲನೆ ಹಾಗೂ ಹೊಲಿಗೆ ಮತ್ತು ಬ್ಯೂಟಿಷಿಯನ್ ಕಲಿಕಾರ್ಥಿಗಳ ಸಮಾರೋಪ ಸಮಾರಂಭ ಉದ್ಘಾಾಟಿಸಿ ಮಾತನಾಡಿದ ಅವರು, ಸಂಸ್ಥೆೆಯ ಮುಖ್ಯಸ್ಥೆೆ ಹಾಗೂ ತರಬೇತಿದಾರರಾದ ಪವಿತ್ರ ಹೂಗಾರ ಅವರು 120 ಮಹಿಳೆಯರಿಗೆ ತರಬೇತಿ ನೀಡಿ ಉದ್ಯೋೋಗ ಅವಕಾಶ ಕಲ್ಪಿಿಸುವ ಇಂತಹ ಕೆಲಸಕ್ಕೆೆ ಸದಾ ನಮ್ಮ ಬೆಂಬಲ ಇರುತ್ತದೆ ಮಹಿಳೆಯರಿಗೆ ತರಬೇತಿ ನೀಡಿ ಸ್ವಾಾವಲಂಭಿ ಬದುಕು ಸಾಗಿಸಲು ದಾರಿದೀಪವಾದ ಕಾರ್ಯ ಪ್ರಶಂಸನೀಯ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದ ಮಹಿಳೆ ಪುರುಷರಿಗೆ ಸಮಾನವಾಗಿ ಉನ್ನತ ಹುದ್ದೆೆ ಹಾಗೂ ಪದವಿಯನ್ನು ಪಡೆದು ಸಮರ್ಥವಾಗಿ ನಿಭಾಯಿಸಿ ಪುರುಷ ಪ್ರಧಾನ ಸಮಾಜದಲ್ಲಿ ಸಮಾನತೆ ಸಾರಿದ ಮಹಿಳೆಯರು ಮುಂದಿನ ದಿನಗಳಲ್ಲಿ 33% ಮೀಸಲಾತಿ ಜಾರಿಯಾದರೆ ಮಹಿಳೆಯರಿಗೆ ಅಧಿಕಾರ ಅಡುಗೆ ಮನೆಗೆ ಹುಡುಕಿಕೊಂಡು ಬರಲಿದೆ ಎಂದರು.
ಈ ವೇಳೆ ಸಾನಿಧ್ಯವಹಿಸಿದ ಯರಡೋಣಿ ಮುರುಘರಾಜೇಂದ್ರ
ಶ್ರೀಗಳು, ಸಿದ್ದಲಿಂಗ ಶ್ರೀಗಳು ಲಿಂಗಸಗೂರ ವಿಧಾನ ಪರಿಷತ್ ಸದಸ್ಯರಾದ ಶರಣಗೌಡ ಪಾಟೀಲ ಬಯ್ಯಾಾಪೂರ, ಮುಖ್ಯ ವೈದ್ಯಾಾಧಿಕಾರಿ ಡಾ.ರುದ್ರಗೌಡ ಪಾಟೀಲ, ಜನಶಿಕ್ಷಣ ಸಂಸ್ಥೆೆ ರಾಯಚೂರ ನಿರ್ದೇಶಕ ಸದಾನಂದ, ಮಾಜಿ ಪುರಸಭೆ ಅಧ್ಯಕ್ಷೆ ಸುನಿತಾ ಪರಶುರಾಮ ಕೆಂಭಾವಿ, ಸಂಗಮೇಶ ವಸದ, ಪವಿತ್ರ ಹೂಗಾರ ಸಂಯೋಜಕರು, ಗಣ್ಯರು ಹಾಗೂ ಕಲಿಕಾರ್ಥಿಗಳು ಇದ್ದರು.
ಮಹಿಳೆಯರ ಸಾಧನೆ ಅವಿಸ್ಮರಣೀಯ : ಶಾಸಕ ವಜ್ಜಲ್

