ಸುದ್ದಿಮೂಲ ವಾರ್ತೆ ಕೊಪ್ಪಳ, ೆ.04:
ಜಿಲ್ಲೆೆಯಲ್ಲಿ ಕಳೆದ ವರ್ಷದಲ್ಲಿ 234 ಅಸ್ಪೃಶ್ಯತಾ ಪ್ರಕರಣಗಳು ವರದಿಯಾಗಿವೆ. 2023 ರಲ್ಲಿ 64, 2024 ರಲ್ಲಿ 72 ಹಾಗು 2025 ರಲ್ಲಿ 98 ಪ್ರಕರಣ ದಾಖಲಾಗಿವೆ, ಜಿಲ್ಲೆೆಯಲ್ಲಿ ಅಸ್ಪೃಶ್ಯತೆಗಾಗಿ ಸಂಗನಹಾಳದಲ್ಲಿ ದಲಿತ ಯುವಕನ ಕೊಲೆಯೂ ಸಹ ನಡೆದಿದೆ. ಆಗಾಗ ದಲಿತರ ಮೇಲೆ ದೌರ್ಜನ್ಯಗಳು ನಡೆಯುತ್ತಿಿವೆ.
2022 ರಲ್ಲಿ ವಿನಯ ಎಂಬ ಬಾಲಕ ದೇವಾಲಯ ಪ್ರವೇಶಿಸಿದ್ದಾಾನೆ ಎಂಬ ಕಾರಣಕ್ಕೆೆ ಬಹಿಷ್ಕಾಾರ ಹಾಕಿದ್ದಾಾರೆ. ಆಗಿನಿಂದ ವಿನಯ ಸಾಮರಸ್ಯ ಎಂಬ ಕಾರ್ಯಕ್ರಮ ರಾಜ್ಯ ಸರಕಾರ ರೂಪಿಸಿತ್ತು. ವಿನಯ ಸಾಮರಸ್ಯ ಯೋಜನೆ ಜಾರಿಯಾದರೂ ಅಸ್ಪೃಶ್ಯತೆ ನಿಂತಿಲ್ಲ. ದಲಿತರ ಮೇಲಿನ ದೌರ್ಜನ್ಯಕ್ಕೆೆ ಅರಿವು ಮೂಡಿಸುವ ಕಾರ್ಯವಾಗುತ್ತಿಿಲ್ಲ. ದಲಿತರ ಮೇಲಿನ ಪ್ರಕರಣ ಇತ್ಯಾಾರ್ಥ ವಿಳಂಭವಾಗಿರುವುದು ಕಾರಣ ಎನ್ನಲಾಗಿದೆ ಎಂದು ದಲಿತ ಮುಖಂಡರು ಹೇಳಿದ್ದಾಾರೆ.
ಜಿಲ್ಲೆೆಯಲ್ಲಿ ವರದಿಯಾಗುವ ಅಸ್ಪೃಶ್ಯಯತೆ ಪ್ರಕರಣಗಳನ್ನು ಸಕಾಲದಲ್ಲಿ ಇತ್ಯಾಾರ್ಥ ಮಾಡಿ ಪ್ರಕರಣಗಳಿಗೆ ಚಾರ್ಜ್ಶೀಟು ಸಲ್ಲಿಸಲಾಗುತ್ತಿಿದೆ. ಜಿಲ್ಲೆೆಯಲ್ಲಿ ವಿನಯ ಸಾಮರಸ್ಯ ಯೋಜನೆ ಬಂದ ನಂತರ ಜಾಗೃತಿ ಮೂಡಿಸಲಾಗುತ್ತಿಿದೆ. ಈಗ ಜನರಲ್ಲಿ ಅಸ್ಪೃಶ್ಯತೆ ಆಚರಣೆ ಕಡಿಮೆಯಾಗುತ್ತಿಿದೆ ಎನ್ನುತ್ತಾಾರೆ ಜಿಲ್ಲಾಾ ಸಮಾಜ ಕಲ್ಯಾಾಣಾಧಿಕಾರಿ.
ಇತ್ತೀಚಿಗೆ ದಲಿತರ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಮರಕುಂಬಿಯ 98 ಜನರಿಗೆ ಜೀವಾವಧಿ ಶಿಕ್ಷೆ ನೀಡಿದ್ದು ಐತಿಹಾಸಿಕ ದಾಖಲೆಯಾಗಿತ್ತು. ಅವರೆಲ್ಲರೂ ಈಗ ಜಾಮೀನಿನ ಮೇಲೆ ಮರಕುಂಬಿಗೆ ಬಂದಿದ್ದಾಾರೆ. ಈ ಪ್ರಕರಣದ ನಂತರವೂ ಜಿಲ್ಲೆೆಯಲ್ಲಿ ಅಸ್ಪೃಶ್ಯತೆ ಸಂಪೂರ್ಣವಾಗಿ ನಿಲ್ಲಬೇಕಾಗಿದೆ. ಈ ನಿಟ್ಟಿಿನಲ್ಲಿ ಜನರ ಮಧ್ಯೆೆ ಸಾಮರಸ್ಯ ಮೂಡಿಸುವುದು ಅವಶ್ಯವಾಗಿದೆ.
ಮೂರು ವರ್ಷದಲ್ಲಿ 234 ಪ್ರಕರಣಗಳಲ್ಲಿ 20 ಪ್ರಕರಣಗಳಲ್ಲಿ ಬಿಡುಗಡೆಯಾಗಿದೆ. ಬೇರೆ ಕಾರಣಕ್ಕೆೆ ಇರುವ 3 ಪ್ರಕರಣಗಳು ನ್ಯಾಾಯಾಲಯದಲ್ಲಿ ಇತ್ಯಾಾರ್ಥವಾಗಿವೆ. ಇನ್ನೂ 211 ಪ್ರಕರಣಗಳ ಇತ್ಯಾಾರ್ಥವಾಗಬೇಕಾಗಿದೆ.

