Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಕ್ಕರೆ ಕಾಯಿಲೆ ಹರಡದಂತೆ ತಡೆಯಲು ಮುಂಜಾಗ್ರತ ಕ್ರಮ

ಸುದ್ದಿಮೂಲ ವಾರ್ತೆ

ಬೆಂಗಳೂರು,ಮೇ29:ಹಿತ ಮಿತ ಆಹಾರ ಸೇವನೆ, ನಿತ್ಯನಡಿಗೆ, ವ್ಯಾಯಾಮ ಹಾಗೂ ವೈದ್ಯರ ಸಲಹೆ ಮುಂತಾದ ಮುಂಜಾಗ್ರತ ಕ್ರಮಗಳಿಂದ ಸಕ್ಕರೆ ಕಾಯಿಲೆ ಹರಡದಂತೆ ತಡೆಯಲು ಸಾಧ್ಯ ಎಂದು ಖ್ಯಾತ ವೈದ್ಯ ಪದ್ಮಶ್ರೀ ಪ್ರೊಫೆಸರ್ ಅನೂಪ್ ಮಿಶ್ರ ಹೇಳಿದರು.

ಬೆಂಗಳೂರಿನ ಬಸವೇಶ್ವರ ನಗರದ ಡಾ ಅರವಿಂದ್ ಡಯಾಬಿಟಿಕ್ ಸೆಂಟರ್, ಹೋಟೆಲ್ ಕ್ಯಾಪಿಟಲ್‌ನಲ್ಲಿ ಆಯೋಜಿಸಿದ್ದ ಮೇ 27-28 ರಂದು 2 ದಿನಗಳ ಕಾಲ ರಾಷ್ಟಿçÃಯ ಡಯಾಬಿಟಿಕ್ ಸಮ್ಮೇಳನ ಉಧ್ಘಾಟಿಸಿದ ಪ್ರೊ||ಮಿಶ್ರಾ ಮಾತನಾಡಿದರು.

ಸಕ್ಕರೆ ಕಾಯಿಲೆ ತಡೆಗಾಗಿ ದೇಶ ವಿದೇಶಗಳಲ್ಲಿ ಔಷಧ ವಿಚಾರದಲ್ಲಿ ಹೊಸ ಹೊಸ ಅವಿಷ್ಕಾರಗಳು ನಡೆಯುತ್ತಿವೆ. ಮುಂಜಾಗ್ರತೆ ಕ್ರಮಗಳಿಂದ ಜನರು ಸುರಕ್ಷಿತವಾಗಿಬಹುದು ಹಾಗೂ ಯಾವುದೇ ಗಾಭರಿಯಾಗುವಂತಿಲ್ಲ ಎಂದು ಪ್ರೊ ಮಿಶ್ರ ಸಲಹೆ ನೀಡಿದರು.

ದೇಶದ ಪ್ರತಿಷ್ಟಿತ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸುಮಾರು 80 ಮಂದಿ ಡಯಾಬಿಟಿಸ್ ತಜ್ಞ ವೈದ್ಯರ ಪೈಕಿ ಅವದೇಶ್ ಕುಮಾರ್ ಸಿಂಗ್ (ಕೊಲ್ಕತ್ತ), ಡಾ.ಜ್ಯೋತಿದೇವ್ (ತ್ರಿವೆಂಡ್ರಮ್), ಡಾ.ವಸಂತಕುಮಾರ್ (ಹೈದರಾಬಾದ್), ಡಾ ಅರವಿಂದ ಗುಪ್ತ (ಜೈಪುರ), ಪ್ರೊ.ಬಸವನಗೌಡ (ಮೈಸೂರು), ಪದ್ಮಶ್ರೀ ಡಾ.ಬಿ.ಮೋಹನ್ ಡಾ.ಅನಿಲ್ ಕುಮಾರ್ (ಬೆಂಗಳೂರು) ಭಾಗವಹಿಸಿದವರಲ್ಲಿ ಪ್ರಮುಖರು.

ಕರೋನಾ ಕಾರಣದಿಂದ ಕಳೆದ ಮೂರು ವರ್ಷಗಳಿಂದ ಡಯಾಬಿಟಿಸ್ ತಡೆಯ ಸಮ್ಮೇಳನ ನಡೆಸಲಾಗಿರಲಿಲ್ಲ. ಡಾ. ಅರವಿಂದ್ ಡಯಾಬಿಟಿಸ್ ಸೆಂಟರ್ ಇನ್ನುಮುಂದೆ ಪ್ರತಿವರ್ಷ ಸಮ್ಮಿಟ್ ನಡೆಸಲಾಗುವುದು ಎಂದು ಆಸ್ಪತ್ರೆಯ ಮ್ಯಾನೇಜಿಂಗ್ ಡೈರೆಕ್ಟರ್ ಡಾ.ಅರವಿಂದ್ ಸ್ಪಷ್ಟ ಪಡಿಸಿದರು.

ಸಿಲಿಕಾನ್ ಸಿಟಿ ಎಂದೇ ಪ್ರಸಿದ್ದವಾಗಿದ್ದ ಬೆಂಗಳೂರು ಈಗ ಆರೋಗ್ಯಕ್ಕೆ ಕಾಮಧೇನು (ಹೆಲ್ತ್ ಸಿಟಿ) ಆಗಿ ದೇಶ ವಿದೇಶಗಳ ರೋಗಿಗಳನ್ನು ಆಕರ್ಷಿಸುತ್ತಿದೆ. ಇದು ಬೆಂಗಳೂರು ಹಾಗೂ ಭಾರತ ದೇಶದ ಹೆಮ್ಮೆ ಎಂದು ಡಾ||ಅರವಿಂದ್ ಹೇಳಿದರು. ಈ ಎರಡು ದಿನಗಳ ಸಮ್ಮೆಳನದಲ್ಲಿ ಸುಮಾರು 500 ಮಂದಿ ಡಾ.ಪ್ರತಿನಿಧಿಗಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ನವದೆಹಲಿಯ ಪ್ರಾಧ್ಯಾಪಕ ಪದ್ಮಶ್ರೀ ಡಾ.ಅನೂಪ್ ಮಿಶ್ರಾ ಅವರಿಗೆ ಡಾ.ಅರವಿಂದ ಜೆ ಅವರಿಂದ “ಭಗವಾನ್ ಬಸವೇಶ್ವರ” ವಚನವನ್ನು ನೀಡಿ ಗೌರವಿಸಲಾಯಿತು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ