Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಗುಲ್ಬರ್ಗಾಕ್ಕೆ ಏಮ್ಸ್ ಹೇಳಿಕೆಗೆ ಸಚಿವರ ಎದುರೆ ಹೋರಾಟಗಾರರ ಖಂಡನೆ

ಸುದ್ದಿಮೂಲ ವಾರ್ತೆ

ರಾಯಚೂರು,ಜೂ.11:ರಾಯಚೂರಿಂದ ಏಮ್ಸ್ ಕಸಿಯುವ ಪ್ರಶ್ನೆ ಇಲ್ಲ, ಶೀಘ್ರವೇ ಸಂಪುಟದಲ್ಲಿ ಚರ್ಚಿಸಿ ಕೇಂದ್ರಕ್ಕೆ ರಾಯಚೂರು ಹೆಸರು ಶಿಫಾರಸು ಮಾಡುವುದಾಗಿ ಸಚಿವ ಡಾ.ಶರಣ ಪ್ರಕಾಶ ಪಾಟೀಲ ಹೋರಾಟಗಾರರಿಗೆ ಭರವಸೆ ನೀಡಿದರು.

ಇಂದು ರಾಯಚೂರಿಗೆ ಆಗಮಿಸಿದ‌ ಸಚಿವರಿಗೆ ಗೋಬ್ಯಾಕ್ ಹೋರಾಟದ ಹಿನ್ನೆಲೆಯಲ್ಲಿ ಏಮ್ಸ್ ಹೋರಾಟ ವೇದಿಕೆಗೆ‌ ಸಚಿವರು ಆಗಮಿಸಿ ಹೋರಾಟಗಾರ ರೊಂದಿಗೆ ಮಾತನಾಡಿದರು.

ರಾಯಚೂರು ಜಿಲ್ಲಾ ಏಮ್ಸ್ ಹೋರಾಟ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಇಂದಿಗೆ 395 ನೇ ದಿನಕ್ಕೆ ಕಾಲಿಟ್ಟಿದೆ ರಾಯಚೂರಿನಲ್ಲಿಯೇ ಏಮ್ಸ್ ಸ್ಥಾಪಿಸಲೇಬೇಕೆಂದು ಸರ್ಕಾರವನ್ನು ಒತ್ತಾಯಿಸಿ ಇಂದು ನಡೆದ ಅನಿರ್ದಿಷ್ಟ ಧರಣಿ ಸತ್ಯಾಗ್ರಹದಲ್ಲಿ ಬಸವರಾಜ ಕಳಸ ಮಾತನಾಡಿ, ತಾವು ವೈದ್ಯಕೀಯ ಶಿಕ್ಷಣ ಸಚಿವರಾಗಿ ಕಲಬುರ್ಗಿಗೆ ಏಮ್ಸ್ ಮಂಜೂರು ಮಾಡಿಸುವುದಾಗಿ ಹೇಳಿ ನಮ್ಮ ಹೋರಾಟಕ್ಕೆ ಅಪಮಾನ ಮಾಡಿರುವಿರಿ, ರಾಯಚೂರು ಜಿಲ್ಲೆಯನ್ನು ಕಡೆಗಣಿಸಿರುವಿರಿ ಇದಕ್ಕೆ ನಮ್ಮ ಖಂಡನೆ ಇದೆ, ನೀವು ನಮ್ಮ ವೇದಿಕೆಗೆ ಬಂದು ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿದರು.

ಆ ಗೊಂದಲ ಈಗ ಬೇಡ ನಮ್ಮ ಪಕ್ಷ ಮತ್ತು ಸರಕಾರದ ನಿಲುವು ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸುವುದು ಉದ್ದೇಶವಾಗಿದೆ ಆದಷ್ಟು ಶೀಘ್ರದಲ್ಲಿಯೇ ಸಚಿವ ಸಂಪುಟದಲ್ಲಿ ತೀರ್ಮಾನ ತೆಗೆದುಕೊಂಡು ಕೇಂದ್ರ ಸರ್ಕಾರಕ್ಕೆ ಸ್ಪಷ್ಟವಾದ ಶಿಫಾರಸ್ಸು ಮಾಡಿ ರಾಯಚೂರು ಜಿಲ್ಲೆಗೆ ಏಮ್ಸ್ ಮಂಜೂರು ಮಾಡುವಂತೆ ಶಿಫಾರಸ್ಸು ಮಾಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಇದಕ್ಕೆ ಮುನ್ನ ಸಚಿವರಿಗೆ ಘೇರಾವ್ ಮಾಡಲು ಮುಂದಾಗಿದ್ದ ವಿವಿಧ ಸಂಘಟನೆಯ ಪ್ರಮುಖರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ರಾಯಚೂರು ಗ್ರಾಮೀಣ ಶಾಸಕ ಶ್ರೀ ದದ್ದಲ್ ಬಸನಗೌಡ ಕಾಂಗ್ರೆಸ್ ಮುಖಂಡ ಎ ವಸಂತ್ ಕುಮಾರ್ , ರಾಜಶೇಖರ್ ರಾಮಸ್ವಾಮಿ ಮತ್ತು ಹೋರಾಟ ಸಮಿತಿಯ ಅಶೋಕ್ ಕುಮಾರ್ ಜೈನ್ ಜಾನ್ ವೆಸ್ಲಿ ನರಸಪ್ಪ ಬಾಡಿಯಾಲ್ ಎನ್ ಮಹಾವೀರ್ ಕಾಮರಾಜ್ ಪಾಟೀಲ್ ಬಸವರಾಜ್ ಮಿಮಿಕ್ರಿ ವೀರಣ್ಣ ಶೆಟ್ಟಿ ಭಂಡಾರಿ ವಿನಯ್ ಚಿತ್ರಗಾರ ಉದಯ್ ಕುಮಾರ್ ಪ್ರಭು ನಾಯಕ್ ಬಸವರಾಜ್ ವೆಂಕಟರೆಡ್ಡಿ ದಿನ್ನಿ ಆರಿಫ್ ಮಿಯಾ ನೆಲಹಾಲ್ ರಾಜಶೇಖರ್ ಮಾಚರ್ಲ ಇಮ್ರಾನ್ ಬಡೇಸಾಬ್ ನಾಸಿರ ಹೊಸೂರ್ ಜಶವಂತರಾವ್ ಕಲ್ಯಾಣ ಕಾರಿ ಅಜೀಸ್ ಶ್ರೀನಿವಾಸ್ ಕಲಬಲ ದೊಡ್ಡಿ ಜೆಬಿ ರಾಜು ಮುಂತಾದವರು ಭಾಗವಹಿಸಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ