Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕೊಪ್ಪಳದಲ್ಲಿ ಮಳೆ, ಪರದಾಡಿದ ಅಸ್ತಮಾ ರೋಗಿಗಳು

ಸುದ್ದಿಮೂಲವಾರ್ತೆ
ಕೊಪ್ಪಳ ಜೂ 08: ಮುಂಗಾರು ಮಳೆ ಬಾರದ ಛಾಯೆ ಆವರಿಸಿದ್ದ ಕೊಪ್ಪಳ ಜಿಲ್ಲೆಯಲ್ಲಿ ಇಂದು ಅಲ್ಲಲ್ಲಿ ಮಳೆಯಾಗಿದೆ. ಮೃಗಶಿರ ಮಳೆಯಾಗಿದ್ದು ಮುಂಗಾರು ಹಂಗಾಮು ಭರವಸೆ ಮೂಡಿಸಿದೆ. ಮೃಗಶಿರ ಮಳೆಯ ಸಂದರ್ಭದಲ್ಲಿ ನೀಡುವ ವನಸ್ಪತಿ ಔಷಧಿ ಪಡೆಯಲು ಬಂದವರು ಗಾಳಿ ಮಳೆಗೆ ತತ್ತರಿಸುವಂತಾಗಿದೆ.



ಮೇ ಹಾಗು ಜೂನ ಆರಂಭದಲ್ಲಿ ಆಗುತ್ತಿದ್ದ ಮಳೆಯು ಈ ಭಾಗಿ ಜೂನ ಎರಡನೆಯ ವಾರ ಆರಂಭವಾದರೂ ಮಳೆಯಾಗಿರಲಿಲ್ಲ ಇದರಿಂದಾಗಿ ಜನ ಮಳೆಗಾಗಿ ಮುಗಿಲು ನೋಡುತ್ತಿದ್ದರು. ರೋಹಿಣಿ ಮಳೆ ಮುಗಿದ ತಕ್ಷಣ ಇಂದು ಸಂಜೆ ವೇಳೆ ಯಾಗಿದೆ. ಕೊಪ್ಪಳ ನಗರ ಸೇರಿ ಅಲ್ಲಲ್ಲಿ ಮಳೆಯಾಗಿದ್ದು ಬಿಸಿಲಿನಿಂದ ಬಸವಳಿದವರಿಗೆ ತಂಪೇರಿದಿದೆ.

ಬಹಳ ದಿನಗಳಿಂದ ಮಳೆಗಾಗಿ ಕಾಯಿಯುತ್ತಿದ್ದ ಜನ ಹಾಗು ರೈತರಿಗೆ ಮೃಗಶಿರ ಮಳೆಯಾಗಿದ್ದು ಖುಷಿ ನೀಡಿದೆ ಮಳೆಯಿಂದಾಗಿ ಅಸ್ತಮಾಕ್ಕೆ ಔಷಧಿಯನ್ನು ಪಡೆಯಲು ಕುಟುಗನಹಳ್ಳಿಗೆ ಬಂದವರು ಪರದಾಡುವಂತಾಯಿತು.

ಪ್ರತಿವರ್ಷ ಮೃಗಶಿರ ಮಳೆ ಕೂಡುವ ವೇಳೆ ಕುಟುಗನಹಳ್ಳಿಯಲ್ಲಿ ಆಶೋಕರಾವ್ ಕುಲಕರ್ಣಿಯವರು ಅಸ್ತಮಾಕ್ಕಾಗಿ ಔಷಧಿ ನೀಡುತ್ತಾರೆ. ಇಲ್ಲಿಯ ವನಸ್ಪತಿ ಔಷಧಿ ಪಡೆಯಲು ರಾಜ್ಯದ ಮೂಲೆ ಮೂಲಿನಿಂದ ಸಾವಿರಾರು ಜನ ಬಂದಿದ್ದರು. ಈ ಭಾರಿ ರಾತ್ರಿ 11.45 ವೇಳೆ ಮಾತ್ರೆ ನುಂಗಲಿದ್ದಾರೆ. ಮಾತ್ರೆಗಾಗಿ ಬಂದಿರುವವರು ಬಿರುಗಾಳಿ ಹಾಗು ಮಳೆಯಿಂದ ತತ್ತರಿಸುವಂತಾಗಿತ್ತು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ